ಶುಕ್ರವಾರ, ಆಗಸ್ಟ್ 6, 2021

 ಮೆಹಂದಿ 


ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ.


ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್ಟ ವಿಲ್ಲ !? 


ಮೆಹಂದಿ ಹಾಕಿಕೊಳ್ಳಲು ಕಾಲ ಸಮಯ ನಿಯಮವೇನೂ ಇಲ್ಲ. ಎಲ್ಲಾ ಕಾಲದಲ್ಲೂ ಹಾಕಿಕೊಳ್ಳಬಹುದು. 


ಬೆಸಿಗೆ ದಗೆಗೆ ಮೈ ಬಿಸಿ ಹೆಚ್ಚು ಇರುತ್ತದೆ. ನಮಗೆ ಆಗ ತಂಪು ಕೊಡುವ ಆಹಾರ, ಬಟ್ಟೆ, ಜೊತೆಗೆ ಕೆಲವು ತಂಪು ಮಾಡುವ ವಿದಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. 


ಮೆಹಂದಿ ದೇಹಕ್ಕೆ ತಂಪು ಕೊಡುತ್ತದೆ. ಮೆಹಂದಿ ಜೊತೆಗೆ ನಿಂಬೆರಸ ಬೆರಸಿ ತಲೆಗೆ ಹಚ್ಚಿ ಕೆಲವು ಸಮಯದ ನಂತರ ತಲೆಯನ್ನು ತೊಳೆದು ಕೊಳ್ಳುವುದರಿಂದ ದೇಹವು ತಂಪು ಆಗುತ್ತದೆ ಜೊತೆಗೆ ತಲೆ ಕೂದಲು ಹೊಳಪಾಗುತ್ತದೆ. 


ಕಾಲಿನ ಹಿಮ್ಮಡಿಗಳು ಬಿರುಕು ಬಿಟ್ಟಾಗಲೂ ಮೆಹಂದಿಯನ್ನು ಹಚ್ಚುವುದರಿಂದ ಕಾಲಿನ ಹಿಮ್ಮಡಿಗಳು ಮಾಯವಾಗಿ ಕಾಲಿನ ಅಂದ ಹೆಚ್ಚುತ್ತದೆ. 


ಇನ್ನೂ ಚಳಿಗಾಲ ಬಂದರೆ  ವಾತಾವರಣ ಪ್ರಭಾವ ದಿಂದ ಅನೇಕ ಸೂಕ್ಷ್ಮ ಕ್ರಿಮಿಗಳು ವ್ಯಾಪಿಸುತ್ತದೆ , ಹೊರಗಡೆ ತೇವಾಂಶವಿರುವುದರಿಂದ ಮನೆ ಕೆಲಸಗಳಲ್ಲಿ ನಿರಿನ ಬಳಕೆ ಮಾಡುವುದರಿಂದ ಕ್ರಿಮಿ ಕೀಟಗಳು ದೇಹವನ್ನು ಪಾದಗಳ ಮೂಲಕ ಸೇರುತ್ತದೆ. 


ಮೆಹಂದಿ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಯಾಗಿ ಕೆಲಸ ಮಾಡುತ್ತದೆ. 


ಇನ್ನು  ಶ್ರಾವಣ ಮಾಸ ಬಂದರೆ ಹಬ್ಬಗಳು ಸಾಲು ಸಾಲು. ಹೆಂಗಳೆಯರು ಕುಂಕುಮ ಬಳೆ ಹೂವು ಅಲಂಕಾರ ವಾಗಿ ಧರಿಸಿದರೂ ಕೈ ತುಂಬಾ ಮೆಹಂದಿಯ ವಿನ್ಯಾಸ ಹೆಣ್ಣಿಗೆ ಹೆಚ್ಚು ಸಂತಸ ಕೊಡುತ್ತದೆ. 


ಚಿಕ್ಕ ಮಕ್ಕಳಿಂದ ಹಿಡಿದು ಗೃಹಿಣಿ ಯರು ಹಾಕಿಕೊಳ್ಳುವರು. ಮೆಹಂದಿ ಹಾಕಿಕೊಳ್ಳಲು ಜಾತಿ ಅಡ್ಡ ಬರದು ಎಲ್ಲಾ ಪಂಥದವರೂ ಹಾಕುವರು. 


ಮಾರುಕಟ್ಟೆ ಯಲ್ಲಿ ಕೆಲವೊಮ್ಮೆ ನಕಲಿ ಮೆಹಂದಿ ತಿಳಿಯದೇ ತಂದು ಕೈಗಳಿಗೆ ಬಳಸಿದರೆ ಅದರಿಂದ ತುಂಬಾ ತೊಂದರೆ ಗಳ ಆಗುವ ಸಾಧ್ಯತೆಗಳು ಇರುತ್ತದೆ. 

ಒಳ್ಳೆಯ ಕಂಪನಿ ಮೆಹಂದಿಗಳು ನೋಡಿ ತರಬೇಕಾಗುತ್ತದೆ


ಮಧು ಮಗಳು  ಮೆಹಂದಿ ಇಲ್ಲದೆ ಅವಳ ಅಲಂಕಾರ ಪೂರ್ಣ ವಾಗದು. 


ಮೊದಲೆಲ್ಲಾ ಮೆಹಂದಿ ಎಲೆಗಳನ್ನು ಅರೆದು ಅದನ್ನು ಬಳಸುತ್ತಿದ್ದರು . 


ಈಗೆಲ್ಲ ಪುಡಿಗಳು ಅಥವಾ ಪೇಸ್ಟ್ ಗಳ ರೂಪದಲ್ಲಿ ಸಿಗುತ್ತದೆ 

ಒಟ್ಟಿನಲ್ಲಿ ಭಾರತ ಸಂಸ್ಕೃತಿ ಯ ಒಂದು ಭಾಗವಾಗಿದೆ ಈ ಮೆಹಂದಿ 


ಸುರಭಿ ಲತಾ

ಬುಧವಾರ, ಆಗಸ್ಟ್ 4, 2021

 ಕನಸಿನ ಲೋಕದಲ್ಲಿ ಮನಸುಗಳ ಮಿಲನ

ಭಾವಗಳು ಜೊತೆಗೂಡಿ ಹೃದಯವು ಹಾಡಿದೆ ತನನ


ಮುಧುರ  ನಾದದಲಿ ಪ್ರೀತಿಯ ಸಂಚಲನ

ನಯನಗಳು ಬೆರೆತಾಗ ಆಸೆಗಳ ತೋಮ್ ತನನ


ಮುಗಿಲು ನೀನು, ನವಿಲು  ನಾನು ಜೊತೆಯಾಗಲು

ಸಂಗೀತ  ಸ್ವರ ನಾದವು ಮೂಡಿ  ಬರದೇನು


ನಿನ್ನಲಿ ನಾನಾಗಿ, ನನ್ನಲಿ ನಿನಾಗಿ ಬೆರೆತಿರಲು ಒಂದಾಗಿ

ಬೇರೇನೂ ಬೇಕಿಲ್ಲ, ಪ್ರಣಯವೇ ಬದುಕೆಲ್ಲ


ರಾಗಗಳು ಅನುರಾಗವಾಗಿ, ಮೊಗ್ಗರಳಿ ಹೂವಾಗಿ

ಗಮಿಸಲಿ ದಮನಿ ದಮನಿ ಯಲಿ ಸ್ಥಿರವಾಗಿ


ಹಾಡು ಬಾ, ಕೂಡು ಬಾ ಜಗದ ಚಿಂತೆ ಮರೆತು

ನಲಿಯುವ, ಹಾಡುವ   ಒಂದಾಗಿ ಬೆರೆತು


ಮೌನವ ಸರಿಸಿ ಮುದ್ದಾಡು ನನ್ನ  ಬಳಸಿ

ಅಧರಗಳೆರಡು ಕೂಡಲು ತುಂಬುವುದು ಒಲವ ಕಡಲು


ಸುರಭಿ  ಲತಾ 




ಭಾನುವಾರ, ಜುಲೈ 18, 2021

 ಕನಸುಗಳ ಹೊಲಿದೊಲಿದು ಇಟ್ಟೆ 

ಮಣ್ಣಿನ ಮುದ್ದೆಯ ಶಿಲೆಯಾಗಿಸಿ ಕಾದೆ 

ಜೀವವ ತುಂಬಿ ಮಮತೆಯ ಸುರಿದೆ 

ಜೇನ ಹನಿ ಕೈಗೆ ಸಿಗುವ ಮುನ್ನ 

ಕದ್ದು ಹೋದನೆ ಮುದ್ದು ಮಗನ 


ಕಡಿ ಕಡಿದು ಬೆಣ್ಣೆಯ ತೆಗೆದೆ 

ಕುಡಿಗಾಗಿ ಕಣಜವ ತುಂಬಿದೆ 

ಮರವಾಗಿ ಹಸಿರು ಹಸನಾಗಿಸಿದೆ 

ಸಿಹಿಯಾದ  ಹಣ್ಣು ಕೊಡುವ ಮುನ್ನ 

ಕದ್ದು ಹೋದನೆ ಮುದ್ದು ಕಂದನ 


ರಕ್ತ ಮಾಂಸಗಳ ಹಂಚಿ ಕೊಟ್ಟ ತಾಯಿಗೆ 

ಕರುಳ ಹಿಂಡಿ ಜಗಕೆ ತೋರಿದ ಬಳ್ಳಿಗೆ 

ವಿಧಿಯ ಅಟ್ಟ ಹಾಸದ ನಗೆಗೆ 

ಏನೆಂದು,ಹೇಗೆಂದು ಸಂತೈಸಲಿ ಕೊನೆಗೆ 

ಕದ್ದು ಹೋದದೇಕೆ ಮುದ್ದು ಮಗನ 


ಮುಪ್ಪಿನಲಿ ಕಣ್ಣು ಮಂಜಾಗುವ ವೇಳೆ 

ಬೆಳಕಾಗಿ ದಾರಿ ತೋರವ ಬಗೆ ಹೇಗೆ 

ಕೂಸು ಮಣ್ಣಿನಲಿ ಕಸವಾಗಿ ಹೋಗಿರಲು 

ಬದುಕು ಕಾಣುವುದೆಂತು ಸಂತಸವು 

ಕದ್ದು ಹೋದನೆ ಮುದ್ದು ಕಂದನ 


ಸುರಭಿ ಲತಾ 


 ಹತ್ತಿರ ಕರೆದು ಮೆತ್ತಗೆ ಬಳಿ ಸೆಳೆದು 

ಕೆಣುಕುವುದೇಕೋ ಕಳ್ಳ 

ಬಳಸುತ ನಡುವ ನಗುವುದೇಕೋ 

ಏನೂ ಅರಿಯದವನಂತೆ ಮಳ್ಳ 


ಕರಗಿಸುತ ಮನವ,ಹಿಡಿಯುತ ಕರವ 

ಬರದಿರು ಬಳಿ ಸರಿಯುತ 

ನಿನ್ನ ಬಲ್ಲೆ ,ಒಲಿಯನು ನಿನ್ನಲಿ 

ಕಾಡದಿರು ಬೇಡುವ ಕಣ್ಣಲಿ 


ಮನಸು ಸದಾ ಸಖಿಯರಲ್ಲಿ 

ನೆಪ ಮಾತ್ರ  ನಿನಗೆ ನಾನಿಲ್ಲಿ 

ಬಳಿ ಇದ್ದಾಗ ನಿನ್ನ ತುಂಟಾಟ 

ಬಿಟ್ಟು ಹೋಗಲು ಪೇಚಾಟ 


ಭುವಿ ಆಕಾಶದಾಣೆ ನೀನೇ 

ನನ್ನ ಜೀವ ಕೇಳೇ ನನ್ನಾಣೆ 

ತಪ್ಪು ಗಳ ಬದಿಗೆ ಒತ್ತಿ 

ಕ್ಷಮಿಸೆನ್ನ ಮನದ ಒಡತಿ 


ಹರಿದಂತೆ ನದಿಯ ನೀರು 

ಬಂದು ಹೋದರು ಗೆಳತಿಯರು 

ಸಾವಿರಾರು,ನಿಂತೆ ಮನದಲ್ಲಿ 

ರಕ್ತದ ಕಣ ಕಣದಲ್ಲಿ 


ನೀನೇ ನನ್ನ  ಜೀವ 

ಅರಿಯೇ ನನ್ನ ಮನವ 

ಕೊಡು ಸಿಹಿಯಾದ ಒಲವು 

ತೋರು ಅರಳುವ ಮೊಗವು 

ಸುರಭಿ ಲತಾ  :)

ಹೃದಯ ಆಲಯ

 ನನ್ನ ಎದೆಯ ಶೃತಿಯಲ್ಲಿ 

ಹೃದಯದ ಲಯದಲ್ಲಿ 

ಹಾಡು ಬಾ ನೀ ಕೋಗಿಲೆ 

ಕೇಳಿತಾ ಮರೆವೆ ನಾನಿಲ್ಲೆ 


ಒಂದು ಪದವು ನೂರು ಭಾವಗಳಾಗಿ 

ಅದು ಹಾಡಾಗಲಿ 

ಒಂದು ಜನ್ಮವು ಹತ್ತು ಜನ್ಮಗಳಾಗಿ 

ಅದು ಅನುಬಂಧ ವಾಗಲಿ 


ಒಲವಿನ ಮಾತುಗಳೆ ದಾರವಾಗಿ 

ಪ್ರೀತಿಯೇ ಹೂಗಳಾಗಿ 

ಒಟ್ಟುಗೂಡಿ  ಹಾರವಾಗಲಿ 

ಅದು ದೇವನಿಗೆ ಒಪ್ಪವಾಗಲಿ 


ಪ್ರತಿ ರಾತ್ರಿಯು ಕನಸಾಗಿ 

ನಿಧಿರೆಯಿಂದ   ಏಳಿಸಲಿ 

ಮಗುವಂತೆ ಬಳಿ ಸಾರಿ 

ನನ್ನ ಮಡಿಲ ಸೇರಲಿ 


ಪ್ರೀತಿಯಲಿ ಜೀವಗಳೊಂದಾಗಲಿ 

ಅಳಿಸದಂತೆ ಸ್ಥಿರವಾಗಲಿ 


ಸುರಭಿ ಲತಾ

ಚಿಂತೆ

 ಕೂತಲ್ಲೆ ಕೂತೆ ಮನದಲ್ಲಿ ಕಾಡುವ ಚಿಂತೆ 

 ಬೆರೆತು ನಲಿದ ಮಧುರ ನೆನಪುಗಳ ಕಂತೆ 

 ಬಂತೇಕೆ ಆಶಾಡ ನಮ್ಮಿಬ್ಬರ ನಡುವೆ 

ಬಯಕೆ ಮೂಡಿರಲು ಕೆನ್ನೆಯಲಿ ಮೊಡವೆ 


ನವ ವಧುವ ಕೆಣಕಿ ಕೆಂಪಾಗಿಸಿದ ಗೆಳತಿಯರು 

ಸಂಸಾರದಲ್ಲಿ ಮಿಂದೆದ್ದ ಒಡತಿಯರು 

ನೂರೆಂಟು ಅನುಭವದ ಮಾತುಗಳು 

ಎದೆಯಲ್ಲಿ ಮೂಡುವಂತೆ ತೂತುಗಳು 


ಒಪ್ಪಿ ಅಪ್ಪಿದ ಮೇಲೆ ಅನುಮಾನ ವೇತಕೆ 

ಪ್ರೀತಿಯೆ ನಮ್ಮಿಬ್ಬರ ಬಾಳಿನ ಹೊದಿಕೆ 

ಬಣ್ಣದ ಕನಸುಗಳಲಿ ತುಂಬಿರಲು ಕಣ್ಣುಗಳು 

ಕಳೆಯುವುದೆಂದೋ ವಿರಹದ ಈ ದಿನಗಳು 


ಮುಂಬಾಗಿಲಿನವರೆಗೂ ಸುಮ್ಮನೆ ನಡಿಗೆ 

ಸಿಹಿಯ ಒಪ್ಪಿಸಿದೆ ಮಡಿಯುಟ್ಟು ಬೇಡಿಕೆ 

ಮಬ್ಬುಗತ್ತಲ ಮಂದ ದೀಪದಲಿ 

ತೇಲಿರಲು ಕೈ ಹಿಡಿದು ನಡೆದ ನೆನಪಲ್ಲಿ 


ಶಬರಿಯಂತೆ ಕಾದಿಹೆನು ಶ್ರಾವಣ ಬರುವಿಕೆಯಲಿ 

ತಿಂಗಳು ಕಳೆವುದರೊಳಗೆ ಚಿಗುರೊಡೆವ ಬಯಕೆಯಲಿ 

ನಯನಗಳಲಿ ನೂರು ಬೆಳಕಿನ ಕಿರಣಗಳು 

ಮಿನುಗುವುದೆಂದೋ ಬೆಳದಿಂಗಳು 


ಸುರಭಿ ಲತಾ

ಶನಿವಾರ, ಜುಲೈ 17, 2021

ಕೈಷ್ಣ

 ಅಂಗಳದ  ಸುತ್ತ ಸಖಿಯರು 

ನಗುತ ಪಾಡುತ ನಲಿದಿಹರು

ನನ್ನ ಮನ ನೆನೆಯುತಿದ್ದದ್ದು 

ನಿನ್ನನೇ  ಮಾಧವ 


ಮೈ ನವಿರೇಳಿಸುವ ರಾಗಗಳು 

ದುಂಬಿಯ ಝೇoಕಾರಗಳು

ಮನ ತಣಿಸುವ ಮೋಹಕ ಪುಷ್ಪಗಳಿದ್ದರೀನು 

ಬಯಸುತಿದ್ದದ್ದು ನಿನ್ನನೇ ರಾಘವ 


ಮನ ತುಂಬಾ , ಕಣ್ಣು ತುಂಬಾ 

ನೀ ಇರುವಾಗ , ಯಾವ ಸೋಖ್ಯವೂ

ರುಚಿಸದು, ಮನ ಬಯಸುತ್ತಿದ್ದದ್ದು 

ನಿನ್ನನೇ  ಕೇಶವ 


ನೀ ನಿಲ್ಲದ ರಾಗ ತoಪೆನಿಸದು  

ನೀ ಇರದ ಪುಷ್ಪ ಸುಗಂಧವೂ 

ಸವಿ ಇರದು, ನೀನಿಲ್ಲದೆ    ಏನಿದ್ದರೇನು 

ಏನೊಂದೂ ರುಚಿಸದು ಕೃಷ್ಣ 


ಸುರಭಿ ಲತಾ

ಶುಕ್ರವಾರ, ಜುಲೈ 16, 2021

 ನೂರು ಮಾತು ನೂರು ಚರ್ಚೆಗಳು 

ನೀ ಬರೆದ ಸಾವಿರ ಸಾಲುಗಳು 

ಅದರಲ್ಲಿ ನಾ ಆರಿಸಿ ಒಪ್ಪಿಕೊಂಡದ್ದು ನಿನ್ನ ಬರಹಗಳು ಮಾತ್ರವೇ ಹೊರತು 

ಪ್ರೀತಿ,ಪ್ರೇಮ ಎಂಬ ಚದುರುವ ಮೋಡಗಳ 

ನಡುವೆ ನಾ ಬದುಕಲಾರೆ ಗೆಳೆಯ 


ಎದೆಯೇ ಬಗೆದು ಹೊರಹಾಕಿದ ಒಂದೊಂದು 

ಅಕ್ಷರಗಳು,ಒಡಲೊಳಗೆ ತಿರುಚಿದಂತ ಅನುಭವಗಳು,ಮುತ್ತು ಪೋಣಿಸಿದಂತೆ 

ಸಾಲುಗಳ ಮೆರವಣಿಗೆ,ಹೊಕ್ಕಿತು ಕಣ್ಣೊಳಗೆ 

ಅಲ್ಲಿ ಹುಟ್ಟದ ಪ್ರೀತಿಯ ಅಮಲಿಗೆ ನಾ 

ಬಲಿಯಾಗಲಾರೆ ಗೆಳೆಯ 


ಅಂದ ಚೆಂದ ವಯಸ್ಸು ಗಳು ನಿಲ್ಲದ ಕುದುರೆ 

ಕ್ಷಣಿಕ ಆಕರ್ಷಣೆಗಳು, ಬದುಕಿನ ಪುಟಗಳು 

ತಿರುವಿ ಹಾಕಿದಂತೆ ಮುಂದೆ ಸಾಗಬೇಕಲ್ಲವೆ 

ನಿಂತ ನೀರು ಕೊಳೆತು ನಾರುವಂತಾಗಬಾರದು 

ಅಪವಾದಗಳ ಸುಳಿಯಲ್ಲಿ  ಅಂತರಂಗದ ಹಪ ಹಪಿಗಳಿಗೆ ನಾ ನನ್ನ ಬಲಿಕೊಡಲಾರೆ ಗೆಳೆಯ


ಕೂತು ಎಷ್ಟೋ ವಿಷಯಗಳ ಹೊಂದಾಣಿಕೆ ಯಾಗಿರಬಹುದು,ಇಷ್ಟ ಕಷ್ಟ ಗಳು ಅದಲು ಬದಲಾಗಿರಬಹುದು. ನೋಡುವ ಅರ್ಥೈಸುವ 

ಮನಸುಗಳು ಒಂದಕ್ಕೊಂದುಮಿಡಿದಿರಬಹುದು  

ಆದರೆ ಕನಸುಗಳೇ ಬೇರೆ ವಾಸ್ತವವೇ ಬೇರೆ 

ಸತ್ತು ಸತ್ತು ಮನಸಾಕ್ಷಿಗೆ ವಿರುದ್ದ ನಡೆಯಲಾರೆ ಗೆಳೆಯ 


ಮೋಸಗಾತಿಯ ಪಟ್ಟ ಕೊಡದಿರು ಎಲ್ಲರ ಮುಂದೆ,ನಾ ಮೆಚ್ಚಿದ್ದು ಹಚ್ಚಿಕೊಂಡದ್ದು ನಿನ್ನೊಳಗಿನ ಭಾವನೆಗಳನ್ನು ಮಾತ್ರ ವೇ ಗೆಳೆಯ


ಸುರಭಿ ಲತಾ 


ಗುರುವಾರ, ಜುಲೈ 15, 2021

 ಹೇ ಗಿಳಿಯೇ ಮುದ್ದು ಗಿಳಿಯೇ 

ನನ್ನವನಾರೇ,ಜೊತೆಗಾರನಾರೆ 

ಎಂದು ಬರುವನೇ ಅವನು 

ಹೇಳು ಬಾರೇ ನೀನು 


ಇರುಳಲಿ ಕನಸಾಗಿ ಬರುವನು 

ನೋಡಲು ಮರೆಯಾಗಿ ಹೋಗುವನು 

ಮೋಡಗಳ ಮರೆಯಿಂದ 

ಚೆಂದಿರನ ಮನೆಯಿಂದ 

ಎಂದು ಬರುವನೇ ಅವನು 

ಹೇಳು ಬಾರೇ ನೀನು 


ಕನಸುಗಳ ನನಸಾಗಿಸುವವನು 

ಮೈ ಮನ ಅರಳಿಸುವನು 

ಕಲ್ಪನೆಯ ರಾಜಕುಮಾರನು 

ಕಣ್ಣು ಮುಂದೆ ಎಂದು ಬರುವನು 

ಕಾತರಿಸುತಿರುವೆ ನಾನು 

ಹೇಳು ಬಾರೇ ನೀನು 


ಹಗಲಿರುಳು ಅವನದೇ ಜಪ 

ತಾಳದಾಗಿದೆ ಮಯ್ಯ ತಾಪ 

ನೊಂದಿಹೆ ಕಾಣದೆ ಅವನ ರೂಪ 

ಮರೆಯಲಿ ಮನಗೆಲ್ಲುವ ಭೂಪ 

ಯಾರೇ ಅವನು  ಮನ್ಮಥನು 

ಹೇಳು ಬಾರೇ ನೀನು

ಬುಧವಾರ, ಜುಲೈ 14, 2021

 ಮರೆತೆಯಾ ಮುರುಳಿದರನೆ ನನ್ನ 

ಎಷ್ಟೊಂದು ನಂಬಿದ್ದೆ ನಾ ನಿನ್ನ 

ಸಖಿಯರು ಸುತ್ತಲೂ ಇರುವಾಗ 

ಕೇಳಿಸದಾದೆಯ ಮೋಹನ ರಾಗ 


ಮಧುವನದಲ್ಲಿ ಮೌನದಿ ಕುಳಿತ 

ರಾಧೆಯ ನೆನಪಾಗಲಿಲ್ಲವೆ 

ಕೊಟ್ಟ ಮಾತು ಇಟ್ಟ ಭಾಷೆ 

ತರಿಸಿದೆ ಇಂದು ನಿರಾಸೆ 


ರಾಧೆ ಎನುವ ನುಡಿ ಕೇಳದೆ 

ನನ್ನ ಹೆಸರೇ ನಾ ಮರೆತೆ 

ಕಣ್ಣ ನೀರು ಜಾರುತಿರಲು 

ಬರದೆ  ಏಕೆ ಹೋದೆ 


ಕೊರಳು ಬಿಗಿಯುವ ಮುನ್ನ 

ಒಮ್ಮೆ ಅಪ್ಪಿ ಸಂತೈಸು ನನ್ನ 

ಮಿಡಿವ ಹೃದಯ ತಂಪಾಗಲಿ 

ರಾಧೆಯ ಜನ್ಮ ಸಾರ್ಥಕಗೊಳಲಿ 


ಸುರಭಿ ಲತಾ

ಭಾನುವಾರ, ಜುಲೈ 11, 2021

 #samyojane 

ಹೇಗೆ ಕಾಣಲೊ ಕೃಷ್ಣ ನಿನ್ನ ನಾನು 

 ಕರೆದರೆ ಕರೆಯ ಕೇಳಿ ಬರುವೆ ಏನು 

ಬಕುತಿಯಲಿ ಬೇಡಲು ನಿನ್ನ 

ಬವಣೆ ಗಳಲೆ ಉಳಿಸಿದೆಯೊ ನನ್ನ 


ಹತ್ತು ಮಾರು ದೂರದಲಿ ಕೋತು 

ಹತ್ತಿ ಬಾ ಎನಲು,ಬರದೆ ಹೋದೆ ಸೋತು 

ಒಡಲಿಗೆ ನೋರು ನೋವನಿಟ್ಟು 

ನಗುವೆ ಏನು ಕೈಯ್ಯ ಬಿಟ್ಟು 


ನೆನೆದೊಡನೆ ಮನದಲ್ಲಿ ನೀ ಬಂದೆ 

ಎದುರಿಗೆ ಬರದೆ ಕಾಡಿಸುವೆಯಾ ತಂದೆ 

ಸಂಬಂಧಗಳ ಸರಪಳಿಯ ಸುತ್ತಿ 

ಸಾಧಿಸಿದೆ ಏನು ಮೋಹವ ಬಿತ್ತಿ 


ಕಾಮ ಕ್ರೋಧಗಳ ಗೆಲ್ಲಲಾಗದೆ ಅಂದು 

ಸೋತು ಶರಣಾಗಿ ಬೇಡಿದೆನಯ್ಯಾ ಇಂದು 

ಬಕುತಿಯ ಅರಿತು ಶಕುತಿಯ ನೀಡದೆ 

ಮಸಣ ಸೇರಲೆ ನಿನ್ನ ಕಾಣದೆ 


ಹೇಗೆ ಕಾಣಲೊ ಕೃಷ್ಣ ನಿನ್ನ ನಾನು 

ಕರೆದರೆ ಕರೆಯ ಕೇಳಿ ಬರುವೆ ಏನು 


ಸುರಭಿ ಲತಾ

ಶನಿವಾರ, ಜುಲೈ 10, 2021

 ಬಿಡಲೊಲ್ಲೆನೋ ಕೃಷ್ಣ ನಿನ್ನ 

ಬೆಣ್ಣೆಯ ತಿಂದು  ಓಡಿ ಹೋಗುವೆ 

ಮೆಲ್ಲ ಮೆಲ್ಲನೆ ಮುಗುಳು ನಗೆಯಲಿ 

ಮನವ ಕದ್ದು ಮರೆಯಾಗುವೆ 


ಬಿಡಲೊಲ್ಲೆನೊ ಕೃಷ್ಣ ನಿನ್ನ 


ಜಳಕವಾಡಲು ನದಿಯ ತೀರದಲಿ 

ಬಂದು ಸೇರುವೆ ಕಡಲಿನಲಿ 

ಬೆತ್ತಲ ದೇಹವ ಕಂಡು 

ಕೊಲ್ಲುವೆ ನೀ ಕಣ್ಣುಗಳಲಿ 


ಬಿಡಲೊಲ್ಲೆನೋ ಕೃಷ್ಣ ನಿನ್ನ 


ಯಶೋದೆಗೆ ಹೇಳಲು ತುಂಟಾಟ 

ಮುನಿದವನಂತೆ ನಟಿಸುವೆ 

ಬರದೇ ಬಳಿ ವಿರಹದಿ ಕಾಡಿಸುವೆ 

ಸಖಿಯರನೇ ಬೇಡಿಸುವೆ 


ಬಿಡಲೊಲ್ಲೆನೋ ಕೃಷ್ಣ ನಿನ್ನ 


ಮುದ್ದು ಮರಳು ಮಾತಿನಲಿ 

ಮುತ್ತ ಕೇಳಿ ಮರೆಯಲಿ 

ಮೆತ್ತನೆ ಗಲ್ಲವ ಹಿಂಡಿ 

ಮತ್ತು ಬರೆಸಿ ಓಡುವೆ 


ಬಿಡಲೊಲ್ಲೆನೋ ಕೃಷ್ಣ ನಿನ್ನ 


 ಸುರಭಿ ಲತಾ

ಶುಕ್ರವಾರ, ಜುಲೈ 9, 2021

 ಸಮಯವು ಬೇಕು 

**************

ನೆನಪುಗಳ ಮರೆಯಲು 

ಸಮಯವು ಬೇಕು 

ಕಣ್ಣು ಗಳಿಗೆ ನಿದ್ದೆ ಹತ್ತಲು 

ಸಮಯವು ಬೇಕು 


ಅವನ ಮರೆಯಲು 

ಅಷ್ಟು ಸುಲಭವಲ್ಲ 

ಹೃದಯವ ಸಮಾದಾನಿಸಲು 

ಸಮಯವು ಬೇಕು 


ಜನ ಜಂಗುಳಿಗಳ ನಡುವೆ 

ನೆನಪಾಗುವ ಅವನು 

ಕಣ್ಣು ತುಂಬಿ ಸುರಿವ ಹನಿಯ 

ಮರೆಮಾಚಲು ಸಮಯವು ಬೇಕು 


ಪ್ರಾಣಕ್ಕಿಂತ ಹೆಚ್ಚು ಅವನಾದ 

ಕಾರಣ ಹೇಳದೆ ಮರೆಯಾದ 

ಮನಸ್ಸಿಗೆ ನಂಬಿಕೆ ಬರೆಸಲು 

ಸಮಯವು ಬೇಕು 


ಅಂದು ಕೊಂಡಂತೆ 

ಅಂದವಾಗಿ ಎಲ್ಲವೂ 

ನಡೆಯುವುದಿಲ್ಲ ,ಜೀವನ 

ನನ್ನ ಅಪ್ಪನ ಮನೆಯಲ್ಲ 

ಸುರಭಿ ಲತಾ

ಗುರುವಾರ, ಜುಲೈ 8, 2021

 ಮೌನದಲೇ ಕೊಂದು ಬಿಡಬೇಡ ಗೆಳೆಯ 

ಕನಸುಗಳು ಕಾತರಿಕೆಯಿಂದ ಕಣ್ಣೀರಿಡುತಿದೆ 

ಸುರಭಿ ಲತಾ 

 ತುಂಬಿದ ಮನೆ ನನ್ನ ಮನೆ 

ಅಮ್ಮನಂತೆ ಅತ್ತೆಮ್ಮ 

ಮಗಳಂತೆ ನಾದಿನಿ 

ಬೆನ್ನು ತಬ್ಬಿದ ಕಂದ 


ಬರಲು ಗಣಪತಿಯ ಹಬ್ಬ 

ಮಾಡುವೆ ಒಬ್ಬಟ್ಟು ಕಡುಬು 

ನಲಿಯುವರು ನನ್ನವರು 

ಹೆಮ್ಮೆ ಯಿಂದಲಿ ಹೊಗಳುವರು 


ಸುತ್ತ ಮುತ್ತಲೂ ಹತ್ತಾರು ಮನೆ 

ಕೊಟ್ಟು ಬರುವೆ ತಿಂಡಿ ನಾನೆ 

ಬಂಧು ಗಳಂತೆ ನಾವೆಲ್ಲ 

ಆಚರಿಸುವೆವು ದಿನವೆಲ್ಲಾ 


ವರುಷದ ಕಷ್ಟ ನೋವು ಮರೆತು 

ಬೇಡುವೆವು ಭಗವಂತನ 

ತುಂಬಿದ ಮನೆ ಕೊಟ್ಟವನ 

ನಂದಗೋಕುಲವಾಯಿತು ಮನ 

ಸುರಭಿ ಲತಾ

 ಎದೆಯೊಳಗೆ ಹಸಿ ಹಸಿ ಬಯಕೆಗಳ ಮೊಳಕೆಗಳು 

ಹೃದಯದ ತುಂಬಾ ಹೊಸ ಹೊಸ ಕನಸುಗಳು 


ಎತ್ತರೆತ್ತರಕೆ ಮುಗಿಲಲಿ ಹಾರಿ ನೆಗೆಯುವಾಸೆ 

ಮರೆತು ಹೋಗಬಯಸುವೆ ನನ್ನ ಈ ವಯಸೆ 


ಎಷ್ಟೊಂದು ಆಸೆಗಳು ಹಸಿರಿವಾಗಲೇ ನನ್ನಲ್ಲಿ 

ಒಡಲು ಪುಷ್ಟಿ ಕೊಡದೆ ಕಾಡಿಸಿದೆ ಮೈಯಲ್ಲಿ 


ಬಿಗಿದಪ್ಪಿ ಹಿಡಿದ ನೂರು ನೋವುಗಳಿಗೆ 

ಸಮಾಧಾನಿಸಿ ಕೊಡುವೆ ಕಹಿ ಗುಳಿಗೆ 


ನಗುವ ಮೊಗದ ಮುಖವಾಡ ಹೊತ್ತುತಲಿ  

ಮರೆವೆ ಸ್ನೇಹಿತರ ಸಂಗ ನಂಬಿಕೆಯ ಬಿತ್ತುತಲಿ 


ದಣಿಯದಿರಲಿ ನನ್ನ ಮನಸು,ಸೋಲದಿರಲಿ ಹೀಗೆ 

ಬರೆಯುತ ಗೆಲ್ಲುವ ಯತ್ನದಲಿ ಮರೆವೆ ಈ ಬೇಗೆ 


ದೇವರ ಮೇಲೆ ಬರದು ಯಾಕೊ ಮುನಿಸು 

ಪಾಪವ ಮಾಡಿದ ಈ ಜನ್ಮವ ನೀ ಮನ್ನಿಸು 


ಧಹಿಸಿ ಧಹಿಸಿ ಸುಡದಿರು ಹೀಗೆ ಪ್ರತಿ ದಿನ 

ಕರೆದು ಕೊಂಡು ಬಿಡು ಕರುಣೆ ತೋರಿ ನನ್ನ 


ಸುರಭಿ ಲತಾ

ಮಂಗಳವಾರ, ಜುಲೈ 6, 2021

 ಸಿಂಗಾರ ಗೊಳ್ಳದಿರು   ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿಯಾದು 


 ತೂರಾಡುವ ಮುಂಗುರುಳ ಹೋಯ್ಲಾಟ  ದುಂಬಿಗಳಿಗೇನೋ ತಮ್ಮ ತಮ್ಮಲ್ಲೆ ಕಾದಾಟ 

ಸವರಿ ಹೋಗುವ ಬಯಕೆ ಹೊತ್ತು 

ಮತ್ತೆ ಮತ್ತೆ ಬರುವುದು ನಿನ್ನ ಸುತ್ತು ಮುತ್ತು 


ಸಿಂಗಾರ ಗೊಳ್ಳದಿರು  ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿ ಯಾತು 


ಕೊರಳಲಿ ನಲಿವ ಕಂಠೀ ಹಾರವ 

ಮುಗುಳು ನಗೆಯ ಹೊತ್ತಾ ಮೊಗವ 

ಕಾಣಲು ತವಕ ಹೃದಯ ದೊಳಗೆ  

ನಿದ್ರೆ ಬರದು ವಿರಹದಲಿ ಒಂದು ಗಳಿಗೆ 


ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿ ಯಾತು 


ಕಾಲ್ಗಳ ಗೆಜ್ಜೆ  ಸದ್ದಿಗೆ ಮೆಲ್ಲ ಮೆಲ್ಲಗೆ  

ಒಲವು ಲಗ್ಗೆ ಇಟ್ಟಿತು ಎದೆಯ ಒಳಗೆ 

ಕೊರಳ ರಾಗದ ಮೋಹನ ನಾದಕೆ 

ಕರಗಿ ಹೋಗ್ವಳು  ಗೋಗುಲ ಬಾಲಿಕೆ 


ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿ ಯಾತು 


ಸುರಭಿ ಲತಾ 


ಸೋಮವಾರ, ಜುಲೈ 5, 2021

 ನಲ್ಲ ನನ್ನ ನಲ್ಲ ಎಂದು ಕಾಣುವೆನೋ ನಾನು ನಿನ್ನ 

ನಡು ನಡುವೆ ರಾತ್ರಿ ಯಲಿ ಬೆಚ್ಚಿ ಬೀಳುವೆ ನೆನಪಲ್ಲಿ 

ತವಕ ತವಕ ನಿನ್ನ ಕಣ್ಣ ತುಂಬಾ ಕಾಣುವ ತನಕ ಬರಲೇನು ಹುಡುಕಿ ನಿನ್ನ ,ಅಡೆ ತಡೆಗಳ ದೂಡಲೆ ಇನ್ನ 


ಕಳೆದ ಸುಂದರ ಸಮಯ ಹೇಗೆ ಮರೆಯಲೊ ಗೆಳೆಯ 

ಒಂದೇ ಆ ಕ್ಷಣವೂ ತುಂಬಿದೆ ನೀನೇ ಕಣ ಕಣವು 

ಕಲ್ಲಿನಂತೆ ಕರಗದ ವಸ್ತು ,ನಿಂತೆ ಆವರಿಸಿ ಮಸ್ತಕವು 

ಬಿಡಲೊಲ್ಲದು ಕಾಡುತಿರಲು ನಿನ್ನ ಬಗೆಗಿನ ವಿರಹವು 


ನೀನು ಅಲ್ಲೇ ದೋರದ ಊರಿನಲಿ ನಿಂತು ನಗುವೆ 

ನಿನ್ನ ನಗುವ ಕಾಣುತಲಿ ನನ್ನ ನಾನು ಮರೆವೆ 

ಬಾನಿನ ಚೆಂದಿರನ ಮೊಗವ ಕಾಣಲು ಚೆಂದ 

ಹೋಲಿಸಲು ಸಾಲದು ಮೋಹನ ನಿನ್ನ ಅಂದ 


ಸೊರಗಿ ಹೋಗುವ ಮುನ್ನ, ಬರಸೆಳೆದು ಅಪ್ಪು ನನ್ನ 

ಒಂದು ಸಣ್ಣ ನೆಪವೊಡ್ಡಿ ಕರೆದು ಬಿಡ ಬಾರದೆ 

ಮೊಗ್ಗು ಅರಳುವಂತೆ ಅರಳುವಳು ಈ ಮುಗುದೆ 

ಗೆಲುವಿನ ರುಚಿಯ ತೋರಿ ಬಿಡು,ಪ್ರೀತಿಗೆ ಇರದು  ಕಾಯಿದೆ 


ಸುರಭಿ ಲತಾ

ಶನಿವಾರ, ಜುಲೈ 3, 2021



 ಮಾತು ಮಾತು ಸದಾ ಮಾತು 





ಏನೋ ಮಾತು ಅವರಿವರ ಬಗೆಗೆ ಮಾತು 

ಆಗು ಹೋಗು ಗಳ ಬಗೆಗೆ ಮಾತು 

ರಾಜಕೀಯದ ಬಗೆಗೆ ಮಾತು 

ಬೇಸರದ ಮಾತು,ನೋವಿನ ಮಾತು 

ಕುಹಕದ ಮಾತು,ಅಟ್ಟ ಹಾಸದ ಮಾತು 

ಮೌನದಿದಿರದು ಏತಕೀ ಜಗತ್ತು!? 


ತನ್ನ ಮನೆಯ ಹೆಂಚಿನ ಕೆಳಗೆ 

ಸಾವಿರ ಸಮಸ್ಯೆ ಗಳ ಕಟ್ಟಿದ ಗೂಡು 

ನಕ್ಕು ಕೃಕುಲುಕುವ ಮನದ ಹಿಂದೆ 

ಸೇಡಿನ ಸಂಚು ಹೊಂಚು ಹಾಕುತಿರಲು 

ತನ್ನದೇ ವ್ಯೂಹದಲಿ ತಾ ಬಂಧಿ ಯಾಗಿರಲು 

ಮೌನದಿಂದಿರದು ಏತಕೀ ಜಗತ್ತು!? 


ಮಾತೆತ್ತಿದರೆ ಕೋಪ,ಅಹಂಕಾರದ ಅಟ್ಟ ಹಾಸ 

ತಪ್ಪು ಗಳ ತಿದ್ದಿಕೊಳ್ಳುವ ಪರಿ ಅರಿಯದೇ 

ತಾ ಮಾಡಿದುದೇ ಸರಿ ಎನ್ನುತ ಭಾಷಣ 

ಒಮ್ಮೆ ಯಾದರೂ ಕುಳಿತು ಯೋಚಿಸುವುದೇ 

ತನ್ನ ಕರ್ತವ್ಯದ ಬಗೆಗೆ ಚಿಂತಿಸುವುದೇ 

ಮೌನದಿಂದಿರದು ಏತಕೀ ಜಗತ್ತು!? 


ಧ್ಯಾನ, ಪೂಜೆ,ಪಾರಾಯಣ ದಿಂದಲೇ 

ಮನಸ್ಸಿಗೆ ಶಾಂತಿ ನೆಮ್ಮದಿ, ಮಕ್ಕಳ ಏಳ್ಗೆ 

ಸರಿ ದಾರಿಯ ಪಯಣಕೆ ದಾರಿ ದೀಪ 

ದಿನದ ಇಪ್ಪತ್ತು ನಾಲ್ಕು ಗಂಟೆಗಳ ದುಡಿತ 

ದೇಹಕೆ ದಣಿವಿನ ನೋವು ಇಷ್ಟಾದರೂ

ಮೌನದಿಂದಿರದು ಏತಕೀ ಜಗತ್ತು!? 


ಮನೆಯ ಮೋಲೆಯ,ನಿಶ್ಯಬ್ಧ ತಾಣದಲಿ 

ಕಣ್ಣು ಮುಚ್ಚಿ ನಡೆದು ಬಂದ ಹಾದಿಯ ನೆನೆದು 

ಸರಿ ತಪ್ಪಗಳ  ಮನನ ಮಾಡುತಲಿ 

ಅಷ್ಟ ದಿಕ್ಪಾಲಕರ ಕ್ಷಮೆ ಯಾಚಿಸುತ 

ಸನ್ಮಾರ್ಗದಲಿ ನಡೆಯುವ ಪಣ ತೊಡಲು 

ಮೌನದ ಅರ್ಥ ಅರಿವಾಗುವುದು,


ನಾಲಿಗೆಗೂ ಬೇಕು ವಿಶ್ರಾಂತಿ, ಅಲ್ಲವೆ!? 


ಸುರಭಿ ಲತಾ 


ಶುಕ್ರವಾರ, ಜುಲೈ 2, 2021

ಗಲುವಿನ ಚಿತ್ತಾರ

 ಪಾದದಲಿ ಬಲವಿರಲಿ ಸಾಗು ನೀ ಮುಂದೆ !!

ಕಿಚ್ಚಿರಲಿ ಎದೆಯೊಳಗೆ ಸಾಗು ನೀ ಮುಂದೆ !!


ಕಷ್ಟಗಳು ಬರಲೇನು,ನಷ್ಟಗಳು ತರಲೇನು!

ಅಳುಕುತಲಿ ಸರಿಯದಿರು ಹಿಂದೆ ಹಿಂದೆ! 

ಮೂಲೆಯಲಿ ಬಿಕ್ಕದಿರು,ಅನ್ಯರಲಿ ಕಕ್ಕದಿರು !

ಆಡಿ ಕೊಂಡು ನಕ್ಕಾರು ಎಲ್ಲರೆದುರು !

ನೋವಿಗೆ ಹೆಗಲು ಕೊಡರು ಯಾರು !!


ನಿನ್ನದೇ ಯುಕ್ತಿಯಲಿ,ನಿನ್ನದೇ ಶಕ್ತಿ ಯಲಿ !

ಎದ್ದು ನಿಲ್ಲಬೇಕು ಧೈರ್ಯ ದಿಂದಲಿ !

ಗುರಿ ಯೊಂದು ಮಾತ್ರ ಕಾಣಲಿ ಎದುರಲಿ !

ಸೋಲುಗಳ ಸಾಲು ಬಿಡು ನೀನು ಕರಗಲು !

ಸುಲಭದಲಿ ಸಿಗದು ಎಂದು ಏನೂ !!


ಬರವಸೆಗಳ ಹೊಳೆವ ನಕ್ಷತ್ರಗಳು ನಗಲು !

ಅನುಮಾನ ತೆರೆ ಸರಿಸಿ ನಂಬಿಕೆಯ ನೀ ಇಡಲು 

ನಗುತ ಸ್ವಾಗತಿಸುತ ನಂದುವುದು ಅಳಲು!

ಕಾಲೆಳೆವರ ಕಡೆಗಣಿಸುತ ಸಾಗಬೇಕು!

ಕಾಯಕದಲಿ ಗೆಲ್ಲುತ ಉತ್ತರ ಕೊಡಬೇಕು!! 


ಆಸೆಗಳ ತೊರೆಯದಿರು,ಕನಸುಗಳ ಬಿಡದಿರು

ಕಾಮನ ಬಿಲ್ಲು ಕಾಣಲಾಗದು ಪ್ರತಿದಿನ 

ಆದರೊಂದು ದಿನ ತುಂಬುದು ಕಣ್ಮನ 

ಮುಗಿಲಲ್ಲಿ ಚಿತ್ತಾರ,ಮನಸಿನಲಿ ಕಾತುರ 

ಸಾಧಿಸುವ ಛಲ ಬಿಡದಿರು ಮನಸಿನೊಳಗೆ 

ಬೆಳಕಾಗಿ ಬರುವುದು ಸಂತಸ ಹೃದಯದೊಳಗೆ 


ಪಾದದಲಿ ಬಲವಿರಲಿ ಸಾಗು ನೀ ಮುಂದೆ !!೨!!

ಕಿಚ್ಚಿರಲಿ ಎದೆಯೊಳಗೆ ಸಾಗು ನೀ ಮುಂದೆ !!೨!

ಸುರಭಿ ಲತಾ 


ಗುರುವಾರ, ಜುಲೈ 1, 2021

 ಕಣ್ಣು ಕೊರೈಸುವ ಅಂದಗಾರನು ನೀನೇನಲ್ಲಾ 

ಕಲ್ಲಿನ ಮನಸ್ಸನ್ನು ಕರಗಿಸುವ ಗುಣವಿದೆಯಲ್ಲ 

ಮಾತಿನ ಮಲ್ಲನು ನೀನೇನಲ್ಲ 

ಮೌನದಲಿ ಎದೆಯ ಹೊಕ್ಕಿದೆಯಲ್ಲ 


ಕಣ್ಣ ನೋಟದಲೇ ಒಲವ ಧಾರೆ ಹರಿಸುವೆ 

ಮಿಂಚಂತೆ ಸುಳಿದು ನಾಚಿಕೆಯ ಹೊಮ್ಮಿಸುವೆ 

ಒಮ್ಮೆ ಯಾದರೂ ತಲೆಯ ಕೂದಲಲಿ ಕೈ ಆಡಿಸುವಾಸೆ 

ಚಿಗುರು ಮೀಸೆಯ ಸರದಾರ ನನ್ನವನೆಂದು ಬೀಗುವಾಸೆ 


ತುಟಿಯಂಚಿನ ಮೃದು ನಗುವಿನಲಿ ಮೈ ಮರೆವಾಸೆ 

ವಿಶಾಲವಾದ ನಿನ್ನೆದೆಗೆ ಒರಗಿ ಕನಸ ಕಟ್ಟುವಾಸೆ 

ಎಲ್ಲರಂತಲ್ಲ ನೀನು,ನಿನ್ನ ಬಿಟ್ಟಿರೆ ನಾನು 

ಮಧುರ ರಾಗವು ತಬ್ಬಿರಲಿ ನಮ್ಮಿಬ್ಬರನು 


ಸುರಭಿ ಲತಾ

ಬುಧವಾರ, ಜೂನ್ 30, 2021

 #D.Srinivas dorasala# 

#DSurya prakash# 

# D.Sathish kumar# 

#D.Kalai vani# 

from M.S.Ramayya Hospital 


ಬೇಧ ಭಾವ ವಿಲ್ಲದೆ ಮೊಗವನ್ನು ಸಿಂಡರಿಸದೆ 

ಬಂದವರನ್ನು ಬಂಧುಗಳಂತೆ ಕಾಣುವ 

ನೋವಿನಲ್ಲಿ ಸಲಹೆಗಳ ಕೊಡುತ  

ಸಕಾಲದಲ್ಲಿ ಸಲಹುವ ವೈದ್ಯರು 

ಅವರೇ ಒಂದು ತರದಲ್ಲಿ ನಮ್ಮ ದೇವರು 


ಕರೋನಾ ಗಿರೋನಾ ರೋಗಕೆ ಹೆದರದೆ 

ಸಾವಿಗೆ ನೋವಿಗೆ ಅಂಜದೆ 

ತ್ಯಾಗವನು ತುಂಬಿಕೊಳ್ಳುತ ಎದೆಯಲಿ 

ನಿದ್ದೆ ಊಟ ಬಿಟ್ಟರಲ್ಲಾ ಎಲ್ಲಾ ಕಡೆಯಲಿ 

ಇವರೇ ದೇವರು ನಮಗೆ ಒಂದು ತರದಲಿ 


 ನಿಮಗೆ ನನ್ನ ಅಭಿಮಾನದ ಅಭಿನಂದನೆಗಳು 


ಸುರಭಿ ಲತಾ

ಮಂಗಳವಾರ, ಜೂನ್ 29, 2021

 ನಿಧಿರೆಗೆ ಜಾರಿದೆ ಆಗ ತಾನೆ 

ಸುರಿಯಿತು ಮಳೆ ದಬ ದಬನೆ 

ಸನಿಹದಲಿ ಇನಿಯನಿಲ್ಲ 

ಮನವೇಕೊ ಗಾಬರಿಯಾಯಿತಲ್ಲ 


ಸುತ್ತ ಮುತ್ತಲೂ ಕತ್ತಲು 

ಕಂಡ ಆಕೃತಿಯು ಅರೆ ಬೆತ್ತಲು 

ಹೆಸರ ಹಿಡಿದು ಕರೆಯಲೆ 

ನಡುಗಿದೆ ಅಜ್ಜಿಯ ಕತೆ ನೆನಪಾಗುತಲೆ 


ಹಿಡಿದು ನಡೆದೆ ದೊಣ್ಣೆ ಕೋಲು ಕೈಯಲಿ 

ಬೆವರಿಳಿಯಿತು ಚಳಿಯಲ್ಲೂ ಮೈಯಲಿ 

ಸುರುಳಿ ಸುತ್ತಿ ಹಾರುತ್ತಿತ್ತು ಸಣ್ಣ ಹೊಗೆ 

ಸಿಗರೇಟಿನ ವಾಸನೆ  ಬಡಿಯಿತು ಮೂಗಿಗೆ 


ಏಟು ಬೀಳುವ ಮೊದಲೆ ತಿರುಗಿತು ಆಕೃತಿ 

ದೊಣ್ಣೆ ಹಿಡಿದ ಬೆರಳಾಯಿತು ಜಾಗೃತಿ 

ಬೆದರಿದ ಕಣ್ಣಲಿ ದಿಟ್ಟಿಸಿತು ನನ್ನ 

ಗಂಡನ ಕಂಡು ನೆಮ್ಮದಿ ಕಂಡಿತು ಮನ 


ಎಂದೂ ಕೆಟ್ಟ ಚಟಕೆ ಒಳಗಾಗದವರು 

ಹೆಂಡತಿ ಎದುರಲ್ಲಿ ತಲೆ ತಗ್ಗಿಸಿದರು 

ಆಣೆ ಪ್ರಮಾಣವು ನಡೆಯುತ್ತಿತ್ತು 

ಬಿದ್ದ ಹನಿಗಳು ಹಳೆಯ ನೆನಪು ತಂದಿತು 


ನನ್ನ ಪತಿ ದೇವರು  ಬಂಗಾರು 

ನೆನೆಯುವೆ ಬಂದಾಗ ಮುಂಗಾರು 


ಸುರಭಿ ಲತಾ

 #samyojane

#bavageethegalu 


ನೂರು ನೆನಪುಗಳು ಎದೆಯ ಚಿಪ್ಪಿನೊಳಗೆ 

ಪುಟಿಯುತಿರಲು ಕನಸಿನ ಲೋಕದೊಳಗೆ 

ಲಗು ಬಗೆಯಿಂದಲಿ ಅಣಿಯಾಗಿದೆ ಒಡಲು 

ಕಾಣುವ ತವಕ ತಡೆಯದು ನಯನಗಳು 


ಅತ್ತ ಇತ್ತ ಸುತ್ತ ಎಂತಹುದೋ ಸುವಾಸನೆ 

ಘಮಿಸಿದಂತೆ ಮಲ್ಲಿಗೆಯ ಪರಿಮಳದಂತೆ 

ಒಲುಮೆಯ ಮೊಗ್ಗು ಹೂವಾಗುವ ಸಮಯ 

ಬಳಿ ಬಂದು ಬಾಚಿ ತಬ್ಬಿದಾಗ ನನ್ನಿನಿಯ 


ದುಂಬಿಗಳ ಆ ತೃಪ್ತ ನಗೆಯ ಝೇಂಕಾರ 

ರತಿ ಮನ್ಮಥರ ಮಿಲನ, ಪ್ರೇಮ ಶೃಂಗಾರ 

ಮಧುರವಿದೋ ಮೋಳಗಿದ ಮೋಹ ಗೀತೆ 

ಇದುವೇ ಪ್ರೇಮಿಗಳ ರಸಿಕತೆಯ ಕವಿತೆ 


ಆಗು ಹೋಗುಗಳ ಅರಿವಿರದು 

ದುಃಖ ದುಮ್ಮಾನದ ಭಯವಿರದು 

ಒಂದು ದಿನದ ಬದುಕಿನ ಹೂವ ಜೀವ 

ತಣಿಸುವುದಿಲ್ಲವೇ ಎಲ್ಲಾ ಮನುಸುಗಳ 

ಕೃಷ್ಣನ ಒಲುಮೆ ಇರಲು ಮತ್ತೇಕೀ ಅಳಲು 


ಸುರಭಿ ಲತಾ

ಸೋಮವಾರ, ಜೂನ್ 28, 2021

ಕೋಪ

 ಅತ್ತಿತ್ತ ನೋಡುತಲಿ 

ಹೊಗಳಿಕೆಯ ಕೇಳುತಲಿ 

ನಿನ್ನದೇ ಪ್ರಪಚದಲಿ ನೀನಿರುವೆ

ನಿನ್ನ ಗೆಳೆತನ ಮಾಡಿ ನೊಂದಿರುವೆ 

ಅಟ್ಟಕ್ಕೆ ಏರಿಸುವರು ನಾಲ್ಕು ದಿನ 

ತಲೆ ಕೆಳಗಾಗಿಸುವರು ಒಂದು ದಿನ 


ಪ್ರೀತಿಯನು ಕೊಟ್ಟು ಮರೆತೆ ನೀನು 

ನೆನಪಾಗಿ ಕೂಗಲು ಆಲಿಸೆ ಏನು? 

ಒಳಿತು ಬಯಸುವ ಮನವ 

ತೊರೆಯುವುದು ಸರಿಯ 

ಬೇಸರ ವೇಕೊ ನನ್ನೊಡೆಯ 

ಕಾದಿದೆ ಕೇಳೊ ನನ್ನ ಹೃದಯ 


ಕೋಪ ತಾಪ ಬರುವುದು ಸಹಜ 

ಹುಟ್ಟು ಗುಣದಲಿ ಬಿದ್ದ ಮನುಜ 

ಬಾಳಬೇಕು ಅಲ್ಲವೇ ಅದರೊಟ್ಟಿಗೆ 

ನಗಬೆಕು ಮೆಲ್ಲಗೆ ನೋವ ಜೊತೆಗೆ 

ದೂರದಲಿ ನೀನಿರಲು,ನೆನಪಿದು ಕಾಡಿರಲು 

ಕೆಟ್ಟ ಸಮಯವದು ಮರೆತು ಬಿಡು 


ಬಾ ಬಾರೊ ಬಾರೊ ಒಲವನೊಮ್ಮೆ ಕೊಡೊ 

ಎಣೆಯುವ ಜೊತೆಯಾಗಿ ಜೇನು ಗೂಡು 


ಸುರಭಿ ಲತಾ 


 ಜಾತಿ ಜಾತಿ ಎಂಬರೇಕೆ 

ಮೂಡ ಜನಗಳು 

ಜನಾರ್ಧನನ   ಭಯವಿಲ್ಲದ 

ನಾಸ್ತಿಕರು 


ಉಸಿರಾಡಲು ಬೇಕು ಗಾಳಿ 

ಅದರಲ್ಲಿಯೂ ಕಾಣ್ವರೇ ಜಾತಿಯು 

ಉತ್ತಮ ವಲ್ಲದು ಇವರ ರೀತಿಯು 

ಇವರಿಗೆ ಹೇಳ್ವರು ಯಾರು ನೀತಿಯು 


ಕೂಡಿಟ್ಟ ಹಣವಿಹುದು ಸಹಜ 

ಕೊನೆಗಾಲದಲ್ಲಿ ಬರದು ಮನುಜ 

ಮಾಡಿದಪಾಪ ಕಾಡುವುದು ಒಂದು ದಿನ

ಪುಣ್ಯ ಒಂದೇ ಸಲಹುದು ನಿನ್ನ 


ದಾನ,ಧರ್ಮ ಮಾಡದವನು 

ಮೇಳು,ಕೀಳೆಂದು ಭಾವಿಸುವವನು 

ಕಡೆಗೊಂದು ದಿನ ಕಂಡಾನು 

ಭೂಲೋಕದಲ್ಲೇ ನರಕವನ್ನು 


ಬದಲಿಸಿಕೋ ಕೊಳಕು ಯೋಚನೆ 

ಮಾಡು ನೀ ಆತ್ಮಸಾಧನೆ 

ಅನ್ಯರಲ್ಲಿ ತೋರು ಕರುಣೆ 

ನಿನಗೆ ಸಿಗುವುದು ಮನ್ನಣೆ 


ಸುರಭಿ ಲತಾ

ಭಾನುವಾರ, ಜೂನ್ 27, 2021

 ಕರಿ ಮೊಗದ ಚೆಲುವ 

ಮಲ್ಲಿಗೆಯಲಿ ಗೆದ್ದ ಮನವ 

ಒಡಲೇನೋ ಕಾಡಿಗೆ ಕಪ್ಪು 

ಮನಸೇನೊ ಹಾಲಿನ ಬಿಳುಪು 


ಎದೆಯಲಿ ಪೂಜಿಸಿದ ಕೂರಿಸಿ 

ನಾನಾದೆ ಅವನ ಹೃದಯದ ಅರಸಿ 

ಪ್ರಾಣವನೇ ನನಗಾಗಿ ಮುಡಿಪಾಗಿಟ್ಟ 

ನನ್ನ ಉಸಿರಿನಲಿ ಅವಿತು ಬಿಟ್ಟ 


ಪ್ರೀತಿಯಲಿ ಕಳೆಯಿತು ಹಗಲು ರಾತ್ರಿ 

ಅವನಿಗೊಪ್ಪಿಸಿದೆ ನನ್ನ ನಾ ಪೂರ್ತಿ 

ಮುದ್ದು ಮಕ್ಕಳ ಒಡತಿ ನಾನು 

ನನ್ನ ಬಾಳ ರಾಜಕುಮಾರ ಅವನು 


ಸುರಭಿ ಲತಾ

 ಎದೆಯ ವೀಣೆಯ ಮೀಟಿದ ನಾದ ...

ಆಸೆಯ ಹೊಮ್ಮಿಸಿದ ನಿನಾದ ...

ಮುರುಳಿಯ ಕೊಳಲ  ನಾದ 

ಇದೆನಾ ಆ ನಾದ ಮೋಹಕ ನಿನಾದ !೨!


ಬಯಕೆಯ ದೀಪ ಹೊತ್ತಿಸಿದ ನಾದ ...

ಬದುಕಿನ ಬವಣೆ ನೀಗಿಸಿದ ನಿನಾದ...  

ಕೃಷ್ಣನ ಉಸಿರಿಂದ ಹೊರಟ ನಾದ 

ಇದೇನಾ ಆ ನಾದ ಮೋಹಕ ನಿನಾದ !೨!


ಪ್ರೀತಿಯ ಅರ್ಥ ತಿಳಿಸಿದ ನಾದ ..

ತ್ಯಾಗದ ಅರಿವು ಮೂಡಿಸಿದ ನಿನಾದ...

ಗೊಲ್ಲನ ಪಿಳ್ಳಂಗೋವಿಯ ನಾದ  

ಇದೆನಾ ಆ ನಾದ, ಮೋಹಕ ನಿನಾದ !೨! 


ರಾಧೆಯ ಮನ ಚೆಂಚಲ ಗೊಂಡ ನಾದ 

ಸಖಿಯರ ಹೃದಯ ಸೆಳೆದ ನಿನಾದ 

ಪಾಂಡುರಂಗನ ಪವಿತ್ರ ನಾದ ...

ಇದೆನಾ ಆ ನಾದ,ಮೋಹಕ ನಿನಾದ!೩! 


ಸುರಭಿ ಲತಾ

 ಶಿವ ಶಿವ ನಾಮದಲಿ ಮರೆತೆ ನೋವ 

ಹರ ಹರ ಎನುತಲಿ ಕಳೆದೆ ದಿನವ 


ಬೇಡಿಹೆನು ನಿನ್ನ ಮನದಿಂದ 

ನೊಂದಿಹುದು ಮನ ಬದುಕಿಂದ 

ಸಕಲ ಚರಾಚರದಲಿ ನೀ ನೆಲೆಸಿರುವೆ 

ಬಕುತಿಯಲಿ ನಿನ್ನ ನಂಬಿ ಬಂದಿರುವೆ 


ವ್ರಥ ಉಪವಾಸ ಮಾಡಲು ಶಕ್ತಿ ಇಲ್ಲ 

ಅನ್ಯರೆದರು ಕೈ ಚಾಚುವ ಮನಸ್ಸಿಲ್ಲ 

ಒಳಗೊಳಗೆ ನೂರು ಪರಿ ತಾಪಗಳು 

 ಆಗಿದೆ ಬದುಕು ಭಯದ ದಿನಗಳು 


ನೆಮ್ಮದಿ ಯೊಂದೇ ನಿನ್ನ ನಾಮವು 

ಪೂಜಿಸಲು ನಯನವು  ನೆನೆದವು 

ಶಿವ ನೆಂದರೆ ಕರುಣೆಯ ಕಡಲು 

ನೆನಪಿಸುವುದು ತಾಯಿಯ ಮಡಿಲು 


ಶಿವ ಶಿವ ನಾಮದಲಿ ಮರೆತೆ ನೋವ 

ಹರ ಹರ ಎನುತಲಿ ಕಳೆದೆ ದಿನವ 


ಸುರಭಿ ಲತಾ

 ಹತ್ತಿರ ಬಂದವನಂತೆ ಬಂದು ದೂರಾಗುವುದೇಕೋ 

ಮನದ ತುಂಬಾ ಒಲವ ಜೇನ ಇರಿಸಿ ಮೌನವಾಗುವುದೇಕೋ 

ಕಣ್ಣು ತುಂಬಾ ಕನಸು ಹೊತ್ತು ದೃಷ್ಟಿ ಬದಲಿಸುವುದೇಕೋ 

ತುಟಿಯಂಚಿನಲಿ  ಸಿಹಿ  ನಗುವ ಇರಿಸಿ ಬಿಗುಮಾನ ತೋರುವುದೇಕೊ 


ಮಗುವಂತಿಹ ಮನದ ಗುಡಿಯಲಿ ಚಿತ್ರ ವಿರಿಸಿಹೆ ನೀನು 

ಎದೆಯಲಿ ಮೆಲ್ಲಗೆ ಅರಳಿಹ ಹೂವ ಅರಿತೆ ನಾನು 

 ಮುಳ್ಳುಗಳ ನಡುವೆ ಮೊಗ್ಗಾದ ಗುಲಾಬಿ ಯಂತೆ 

ಕಷ್ಟ ಗಳ ಜೊತೆ ನಮ್ಮಿಬ್ಬರ ಕನಸು ಮರೆಯಾಗದಿರಲಿ 


 ನೊಂದ ಜೀವಕೆ ತಂಪಾಗಿ ನಾ ಬರುವೆ ಇನಿಯ 

ಜೀವಕೆ ಜೀವ ವಾಗಿ ಮನಕೆ ಮಲ್ಲಿಗೆಯಾಗಿ ಸೇರುವೆ ಸನಿಹ 

ಮೌನದಲಿ ಮಧುರ ಗೀತೆಯಾಗಿ ಹೃದಯ ಸೇರುವೆ ನಲ್ಲನೆ 

ಮರೆತು ಜಗದ ಜಂಜಾಟವನು ಸೇರು ಬಾ ನನ್ನ ಮೆಲ್ಲನೆ 


ಸುರಭಿ ಲತಾ

 ಮನದ ಮಾತು ಬರೆಯುತ 

ಹೊರಟಿರುವೆ 

ವ್ಯಾಕರಣ ಪದ ನಾ ಅರಿಯೇ 


ಭಾವನೆ ಗಳನ್ನು ಹಾಳೆಯಲಿ 

ಮುದ್ರಿಸಿ ಬಿಡುವೆ 

ಉಚ್ಛಾರಣೆಯ ರೀತಿ ನಾ ಅರಿಯೇ 


ಹಾದಿಯಲ್ಲಿ ನಡೆದು ಹೊರಟಿರುವೆ 

ಗುರಿ, ಹಾಗು ಕಾರಣವ ನಾ ಅರಿಯೆ 


ಕೋಪಗೊಂಡರೆ ಕ್ಷಮಿಸಿಬಿಡಿ ಎನ್ನ 

ತಪ್ಪೇನೆಂದು ನಾ ಅರಿಯೆ 


ಪದಗಳ ಚಲನೆಯ ತಡೆಹಿಡಿಯದಿರಿ 

ನೀವು , ಅದರಲ್ಲಿನ ನಾ ಕಂಡ ಸಂತಸ 

ಬೆರೆಲ್ಲಿದೆ ಎಂಬುದ ನಾ ಅರಿಯೆ 


ಓದಲು ಇಚ್ಛೆ ಇಲ್ಲದವರು 

ಕಡೆಗಣಿಸದಿರಿ ನನ್ನ 

ಒಲಿಸುವುದ ನಾ ಅರಿಯೆ 


ನೀವು ಇಲ್ಲಿಂದಲೇ ಅರಿಯುವಿರಿ 

ಎಂಬ ಭಾವನೆ, ಬೇರೆ ವಿಳಾಸವ 

ನಾ ಅರಿಯೆ 


ನಿಮ್ಮ ಪ್ರೋತ್ಸಾಹ ವಿಲ್ಲದಿರೆ 

ಬರೆದು ಪ್ರಯೋಜನ ವೇನೆಂಬುದ 

ನಾಅರಿಯೆ  


ಸುರಭಿ ಲತಾ

 ಬೆಚ್ಚಿ ಬೀಳಬೇಡ ಇನಿಯ 

ಹಚ್ಚಿ   ಕೊಂಡು ಬಿಟ್ಟೆ ನಿನ್ನ 

ನೋಡದಿರು ಬೇರೆ ಹೆಣ್ಣ 

ನೆನೆಸದಿರು ನನ್ನ ಕಣ್ಣ 


ಮುಂದೆ ಹೇಳದೆ ನಾಚಿರುವೆ 

ಅರಿಯದಿರಲು ನೊಂದಿರುವೆ 

ಪದಗಳಲಿ ಹೇಳಲಾಗದೆ 

ಕವಿತೆಯಲ್ಲಿ ಬರೆದಿರುವೆ 


ಮರೆಯಲಿ ನಿಂತು ಮೋಹಿಸಿದೆ 

ಮನದಲ್ಲಿ ನೀನೇ ಆವರಿಸಿದೆ 

ಮಧುವಾಗಿಸು ಬಾ ಬಾಳನ್ನು 

ನನಗಾಗಿ ತೆಗೆದಿರಿಸು ತೋಳನ್ನು 

ಸುರಭಿ ಲತಾ

 ಇಂದೇನಾಯಿತು 

ನನ್ನ ಅಂದವೇ ನನ್ನ ಕಣ್ಣು ಚುಚ್ಚಿತು 


ತೊಟ್ಟ ಉಡುಗೆ ಬಿಗಿಯಾಯಿತು 

ಇಂದೇಕೋ ಕೆನ್ನೆ ಕೆಂಪಾಯಿತು 


ನನ್ನ ಕಣ್ಣು ಗಳು ನಿನ್ನ ಅರೆಸುತ್ತಿತ್ತು 

ನನ್ನ ಮನ ನೀ ಬರುವ ದಾರಿ 

ಕಾಯುತ್ತಿತ್ತು 


ನನ್ದಧರಗಳು ನಿನ್ನ ಹೆಸರೇ 

ಜಪಿಸುತ್ತಿತ್ತು 


ನೀ ಬಂದು ನನ್ನ ಕದ್ದಾಗಿತ್ತು 

ಮೊಗ್ಗರಳಿ ಹೂ ವಾಗಿತ್ತು 


ನಿನ್ನ ಮತ್ತಿನಲ್ಲೇ 

ನಾ ತೇಲುವಂತಾಯಿತು 


ಇದೆಲ್ಲವೂ ಕನಸಿನಂತೆ 

ಭಾಸವಾಯಿತು.


ಆದರೆ ನೀ ಇತ್ತ   ಮುತ್ತಿನ 

ಕಲೆ ನಿಜವೆಂದು ಸಾಬಿತು ಪಡಿಸಿತು 


ಸುರಭಿ ಲತಾ

ಶನಿವಾರ, ಜೂನ್ 26, 2021

 ಕಣ್ಣಲ್ಲಿ ನಿನ್ನದೇ ರೂಪ

ಉಸಿರಲ್ಲೇ ನಿನ್ನ ಹೆಸರು !೩!

ಪ್ರೀತಿಗಾಗಿ ನನ್ನ ಹೃದಯ 

ಕಾದಿದೆ ಕೇಳೊ ಇನಿಯ !೩!!


ಮಗುವಿನಂಥ ಮನಸು 

ಸದಾ ನಿನ್ನದೇ ಕನಸು 

ಒಲುಮೆಯ ಈ ಜೀವನ 

ನಿನಗೆ ಮುಡಿಪು ಕವನ 


ಕಸಿ ಮಾಡಿ ಪ್ರೀತಿಯನು 

ಹುಸಿ ಮಾಡದಿರು ಮನವನು 

ಹೃದಯದಲ್ಲೊಂದು ರಾಗ 

ಮೂಡಿ ಬಂತು ಅನುರಾಗ 


ಎದೆಯ ಗೂಡಲ್ಲಿ ಕಾತರಿಕೆ 

ಹಗಲಿರುಳು ನಿನ್ನದೆ ಕನವರಿಕೆ 

ಕರೆದೆನ್ನ ಬಳಸು ನಡುವ 

ಅರಿಯೆ ಏಕೆ ಅಂತರಾಳವ 


ಕಣ್ಣಲ್ಲಿ ನಿನ್ನದೇ ರೂಪ 

ಉಸಿರಲ್ಲಿ ನಿನ್ನ ಹೆಸರು.. 


ಸುರಭಿ ಲತಾ 











 ಮಿಡಿದ ಶೃತಿ - ಕಥೆ . 

---------------------------


ನಡು ಬೀದಿಯಲ್ಲಿ ನಿಂತು ಚಿಕ್ಕಮ್ಮ ಕಿರುಚುತ್ತಿದ್ದಳು . 

ಅಕ್ಕ ಪಕ್ಕದವರು ಕರುಣಾಜನಕವಾಗಿ ನನ್ನನ್ನೇ ನೋಡುತಿದ್ದರು. 


ಮೈಯೆಲ್ಲಾ ನೀರಾಗಿ ತಲೆಯಿಂದ ನೀರು ತೊಟ್ಟಿಕ್ಕುತಿತ್ತು . ಚಿಕ್ಕಮ್ಮ ಕೋಪದಿಂದ ಒಂದು ಬಿಂದಿಗೆ ನೀರು ತಲೆಯ ಮೇಲೆ ಸುರಿದಿದ್ದಳು . 

ಉಟ್ಟ ಸೀರೆ ಮೈಗೆ ಅಂಟಿತ್ತು. 


ಇಂತಾ ಅವಮಾನಗಳು ನನಗೇನು ಹೊಸದಲ್ಲ.ಆಗಾಗ ಬರುವ ಹಬ್ಬ ದಂತೆ .ನನ್ನ ಬಾಳಿನಲ್ಲಿ ಇದು ಸಹಜ ಎನ್ನುವಷ್ಟು ಮನಸು ಹೊಂದಿಕೊಂಡಿದೆ.


ಅಪ್ಪ ಸತ್ತು ತಿಂಗಳಾಗಿತ್ತು .ಅವರಿದ್ದಾಗಲೂ ನಾ ಪಡುವ ಕಷ್ಟ ನೋಡಿ  ಮಾನಸಿಕವಾಗಿ ಕುಗ್ಗಿ ಪ್ರಾಣಬಿಟ್ಟಿದ್ದರು. 


ತಾಯಿ ಪ್ರೀತಿ ಕಾಣದೆ , ಈಗ ತಂದೆಯೂ ಇಲ್ಲದೇ 

ಚಿಕ್ಕಮ್ಮನ ಕೈಲಿ ಹೊಡೆಸಿಕೊಂಡಾದರೂ ಇಲ್ಲೇ ಇರುವ ಅಸಹಾಯಕಥೆ . 


ಅವಳಾದರೂ ಏನು ಮಾಡಿಯಾಳು ತಂಗಿ ಲಲಿತ ವಯಸ್ಸಿಗೆ ಬಂದವಳು .

ನಾನು ಮದುವೆಯ ವಯಸ್ಸು ಮಿರುವ ಹಂತದಲ್ಲಿ ಇರುವಳು ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ಅವಳ ಮೇಲೆ ಇತ್ತು .


ಮೂರು ಮನೆ ಬಾಡಿಗೆ ಯಿಂದ ಜೀವನ ಸಾಗಬೇಕಾಗಿತ್ತು .


ಇಂದು ತಂಗಿಯನ್ನು ನೋಡಲು ಬಂದ ಗಂಡು ನನ್ನ 

ಮೆಚ್ಚಿದ್ದ. ಹಾಗು ದೊಡ್ಡ ವಳು ತಾನೆ ಮೊದಲು ಮದುವೆ ಯಾಗಬೇಕು ಎಂದು ಚಿಕ್ಕಮ್ಮನ ಮುಖಕ್ಕೆ 

ಹೊಡೆದ ರೀತಿಯಲ್ಲಿ ಮಾತಾಡಿದ್ದರು. 


ಲಲಿತ ಚಿಕ್ಕವಳೇ ಆಗಿದ್ದರೂ ಅವಳಿಗೆ ಮದುವೆ ಮಾಡಿ ಕಳಿಸಿ , ನಾನು ಚಿಕ್ಕಮ್ಮನ ಸೇವೆಗೆ ಕೊನೆಯವರೆಗೂ ನಿಲ್ಲಬೇಕೆಂದು ಅವಳ ಆಸೆ .

ಆದರೆ ಇಂದು ಅವಳಿಗೆ ಅವಮಾನವಾಗಿತ್ತು .

ಹಾಗಾಗಿ ನನಗೆ ಇಂದು ಈ ಶಿಕ್ಷೆ.

**************************


ರಾತ್ರಿ ನಿದ್ದೆ ಗೆಟ್ಟ ಕಣ್ಣು ಗಳಲ್ಲೇ ಮನೆಕೆಲಸ ಮುಗಿಸಿ ನೀರು ತರಲು ಹೊಳೆಗೆ ಹೊರಟೆ. 

ನೀರು ತುಂಬಿಕೊಂಡು ಹೊತ್ತು ನಾಲ್ಕು ಹೆಜ್ಜೆ ಇಟ್ಟಿರ ಬೇಕು ಅಷ್ಟೇ ..ತಲೆ ಸುತ್ತು   ವಂತಾಯಿತು ..

ಕೆಳಗೆ ಬೀಳುವಷ್ಟರಲ್ಲಿ ಯಾವುದೋ ಬಲಿಷ್ಠ ಬಾಹುಗಳು ನನ್ನಹಿಡಿದಿತ್ತು . 

***********************************


ಕಣ್ಣು ಬಿಟ್ಟಾಗ ನಾನು ಮೆತ್ತನೆ ಹಾಸಿಗೆಯಲ್ಲಿ ಇದ್ದೆ. 

ಒಂದು ಕ್ಷಣ ಬೆಚ್ಚಿ ಎದ್ದು ಕೂತೆ .ನನ್ನ ತಡೆಯಿತು ಒಂದು ಕೈ. ಅತ್ತ ತಿರುಗಿದವಳಿಗೆ ಕಾಣಿಸಿದ್ದು 

ಸುಂದರ ನಗುಮುಖದ ರಾಜಕುಮಾರ ಹೌದು 

ಅಪ್ಪ ಹೇಳುತ್ತಿದ್ದ ಕಥೆಯಲ್ಲಿ ಬರುವ ರಾಜಕುಮಾರ ನಂತೆ ಇದ್ದ . 

ಸುಂದರ ಕಣ್ಣು ಗಳು .ಮೂಹಕ ನಗೆ , "ಏಳಬೇಡಿ    rest ತಗೋಳಿ " ಎಂಥಾ ಮೃದು ಮಾತು ..ಆ ಸ್ವರಕ್ಕೆ 

ನಾ ಸೋತಿದ್ದೆ . ನನ್ನ ಕಣ್ಣಲ್ಲಿ ಸಾವಿರ ಪ್ರಶ್ನೆ , ಅವನು ಅದ ಅರಿತವನಂತೆ ತನ್ನ ಬಗ್ಗೆ ಹೇಳ ಹೊರಟ.

 ****"*******************************


ರಾಜ್ ಗೋಪಾಲ್ ದೊಡ್ಡ ಶ್ರೀ ಮಂತ. ಮೊದಲನೇ ಹೆರಿಗೆ ಯಲ್ಲಿ ಕಷ್ಟ ವಾಗಿ ಗಂಡು ಮಗುವನ್ನು ಇವನ ಕೈಗೆ ಇತ್ತು ಆಕೆ ಕಣ್ಣು ಮುಚ್ಚಿ ದ್ದಳು . ಹರ್ಷನನ್ನು 

ತಾಯಿ ಇಲ್ಲದ ತಬ್ಬಲಿ ಎಂದು ತುಂಬಾ  ಮುದ್ದಾಗಿ 

ಸಾಕಿದ್ದ. 

 

ಹರ್ಷ ತುಂಬಾ ಮುದ್ದಾದ , ಹಾಗು ತುಂಬಾ ಬುದ್ದಿವಂತ ನಾದ .


ಆದರೆ ರಾಜ್  ಗೋಪಾಲ್ ನ ಸಂತೋಷ ಆ ವಿಧಿಗೆ 

ಸಹಿಸಲಾಗಲಿಲ್ಲ ವೆಂಬಂತೆ ಮತೊಂದು ಆಘಾತ ಕಾದಿತ್ತು. 

ಹರ್ಷನಿಗೆ  21ವರ್ಷ ನಡೆಯುತ್ತಿದ್ದಾಗಲೇ ಅವನಿಗೆ ಹೃದಯದಲ್ಲಿ    ನೋವು  ಕಾಣಿಸಿತ್ತು .

ಎಲ್ಲಾ ಕಡೆ ಒಳ್ಳೆಯ ಡಾಕ್ಟರ್   ಹತ್ತಿರ ತೋರಿಸಿದರೂ    ಪ್ರಯೋಜನವಾಗಲಿಲ್ಲ  . ಅವನಿಗೆ ಹೃದಯ ದಲ್ಲಿ  ರಂದ್ರ   ವಿರುವುದಾಗಿ   ಡಾಕ್ಟರ್   ತಿಳಿಸಿದ್ದರು . 

ಅವನಿಗೆ  ಏಕಾಂತ ವಾಗಿ ಇರುವ   ಸ್ಥಳ ಒಳ್ಳೆಯ ದೆಂದು ಡಾಕ್ಟರ್ ತಿಳಿಸಿದ್ದರು .ಹಾಗಾಗಿ ಅವನು ಒಬ್ಬನೇ  ಊಟಿಯಲ್ಲಿ ಇದ್ದ   ಫಾರ್ಮ್  ಹೌಸ್ ನಲ್ಲಿ     ಕೆಲವು  ಕಾಲ       ಇರಬಯಸಿ   ಇಲ್ಲಿಗೆಬಂದಿದ್ದ 

****************************************


ಹರ್ಷ   ತನಗೆ ಕಾಯಿಲೆ ಇರುವ ವಿಷಯ   ಒಂದು ಬಿಟ್ಟು   ಎಲ್ಲವನ್ನೂ  ಶೃತಿ ಗೆ ವಿವರಿಸಿ    ಹೇಳಿದ  . ಇಬ್ಬರಲ್ಲೂ   ಸ್ವಲ್ಪ ಸಮಯದಲ್ಲೇ ಸ್ನೇಹ ಬೆಳೆಯಿತು  .


ಶೃತಿ   ಎಂದಿನಂತೆ  ಇರಲಾಗಲಿಲ್ಲ  ಪ್ರತೀ   ದಿನ  ಹರ್ಷ ನನ್ನು   ಭೇಟಿ ಯಾಗುತ್ತಿದ್ದಳು  .


ಹರ್ಷ    ಇವಳ ಸಂಗದಲ್ಲಿ  ತನ್ನ ನೋವು  ಮರೆತಿದ್ದ . ಆದರೂ  ಎಂದೂ ತನ್ನ    ಕಾಯಿಲೆ  ಬಗ್ಗೆ  ಹೇಳಲು ದೈರ್ಯ    ಬಂದಿರಲಿಲ್ಲ .

**************************


ಅಂದು ಎಂದಿನಂತೆ  ಹರ್ಷ ನಿಗಾಗಿ  ಕಾದು ಕಾದು  ಅವನು   ಬರುವ  ಸೂಚನೆ   ಕಾಣದಾದಾಗ ಅವಳೇ ಅವನ ಮನೆಯ  ಕಡೆ  ಹೊರಟಳು  .


ಬಾಗಿಲು  ತಟ್ಟಲು   ಮುಂದಾದಾಗ ಅವಳಿಗೆ   ಒಳಗಿನ  ಇಬ್ಬರು     ವ್ಯಕ್ತಿ ಗಳು    ಆಡುತಿದ್ದ   ಮಾತು ಕೇಳಿಸಿತು   ಕಲ್ಲಿನಂತೆ  ಹಾಗೆ ನಿಂತು ಬಿಟಳು   .


ತನ್ನ    ಪಾದಗಳು  ಮನೆಯ ಕಡೆ   ಹೇಗೆ ನಡೆಯಿತೋ  ಅವಳಿಗೆ   ಗೊತ್ತಾಗಲೇ   ಇಲ್ಲ .

*************************************

ಹರ್ಷನ ಡಾಕ್ಟರ್  ಅವನನ್ನು   ಪರೀಕ್ಷೆ ಮಾಡಲು     ಬಂದಿದ್ದು  . ಹರ್ಷನ    ಮುಖದಲ್ಲಿ  ಇದ್ದ   ಆ ಹೊಸತನಕ್ಕೆ   ಅವರು ಬೆರಗಾಗಿದ್ದರು .

  ಅವರಾಡಿದ  ಮಾತು   ಮೂರನೆ  ವ್ಯಕ್ತಿ   ಕೇಳಿದ 

 ಅರಿವು  ಅವರಿಗಾಗಲೇ  ಇಲ್ಲ . 

******************************** 

ಶೃತಿ   ಬೆಳಿಗ್ಗೆ   ಎಂದಿನಂತೆ   ಎಲ್ಲಾ   ಕೆಲಸಗಳು  ಮುಗಿಸಿದಳು  .ಅವಳು  ಆಗಲೇ  ದೃಡ  ನಿರ್ದಾರಕೈಗೊಂಡಿದ್ದಳು   .


ತನ್ನ  ತಂಗಿಗೆ    ವಿಷಯ  ತಿಳಿಸಿ  ಒಪ್ಪಿಸಿದಳು ಅವಳು  ಅತ್ತು  ಕರೆದು  ಕೊನೆಗೆ  ಒಪ್ಪಿಕೊಂಡಳು  .

ಎಂದಿನಂತೆ 

ಹರ್ಷನನ್ನು ಬೇಟಿಯಾಗಲು ಹೊರಟಳು   ಅವನು 

 ತನಗಾಗಿ    ಕಾದಿರವುದನ್ನು  ನೋಡಿ  ಮನ ಚೂರ್   ಎಂದಿತು  .

ಓಡಿ  ಹೋಗಿ    ತಬ್ಬಿ  ಹಿಡಿದಳು . ಒಂದು   ದಿನ ನೋಡದೇ   ಇರುವ   ಕಾರಣ  ಅವನಿಗೂ   

ಆ   ಹಿಡಿತ  ಹಿತವೆನಿಸಿತು .


ಇಬ್ಬರ  ಕಣ್ಣು ಬೆರೆತು  ಸಾವಿರ  ಮಾತು    ಆಡಿತು . ಆದರೆ   ಅವಳ   ಒಂದು  ಬಯಕೆ    ಅವನನ್ನು ಗೊಂದಲ ಗೊಳಿಸಿತು   . 

**************____***********


ಶೃತಿ  ತನಗೆ    ಕ್ಯಾನ್ಸರ್  ಇರುವುದು  ತಿಳಿಸಿ   ,ತಾನು  ಹೆಚ್ಚು   ದಿನ ಬದುಕಲಾರೆ  ಎಂದೂ   ,ತಂಗಿಯಸಾಕ್ಷಿ    ಮೂಲಕ ಹೇಳಿದಾಗ   ಅವನು  ನಂಬ ದಾದ .ಕೊನೆಯ  ಆಸೆ ಎಂಬಂತೆ    ತನಗೆ ತಾಳಿ  

ಕಟ್ಟಿ ಹೆಂಡತಿಯ   ಪಟ್ಟಕೊಡುವಂತೆ  ಬೇಡಿದಳು  


 ಅದರಂತೆ  ಯಾರಿಗೂ  ತಿಳಿಸದೇ   ದೇವಾಲದಲ್ಲಿ   ತಂಗಿಯ , ದೇವರ ಸಾಕ್ಷಿಯಾಗಿ  ಮದುವೆ  ನಡೆಯಿತು . ಆಮೇಲೆ   ದೊಡ್ಡವರಿಗೆ   ತಿಳಿಸುವ   ಜವಾಬ್ದಾರಿ  ತಂಗಿ ಗೆ ಒಹಿಸ ಲಾಯಿತು  . 


*******************************


ಎಲ್ಲರ   ಮುಖದಲ್ಲಿ  ಸಂತಸ  ಬೆರೆತ   ನೋವು   ಇತ್ತು. 

ಚಿಕ್ಕಮ್ಮ ನ ಮುಖದಲ್ಲಿ ಪಶ್ಚಾತ್ತಾಪ  ಎದ್ದು ಕಾಣುತಿತ್ತು 

  

ಎಲ್ಲರೂ  ಊಟ  ಮಾಡಿ  ಗಂಡು  ಹೆಣ್ಣನ್ನು ಬಿಟ್ಟು    ಹೊರಟರು    .


ಶೃತಿ ನೆಮ್ಮದಿಯಿಂದ  ಹರ್ಷ ನ ಎದೆಗೊರಗಿದಳು  ಎರಡೂ   ಹೃದಯ  ಗಳು   ಒಂದಾಯಿತು. 


ಆದರೆ  (   ನಿಜವಾಗಿ  ಶೃತಿ ಗೆ  ಯಾವ ಕಾಯಿಲೆ  ಯೂ  ಇರಲಿಲ್ಲ. ಅದು  ಅವನಿಗೆ  ಹೇಳಲೂ  ಇಲ್ಲ   )   


ಸುರಭಿ  ಲತಾ

ಸೋಮವಾರ, ಜೂನ್ 21, 2021

 ಹೃದಯದಲ್ಲೊಂದು ಮೌನ 

ಕರಗಬೇಕಾಗಿದೆ 

ನಿನ್ನ ಬರುವಿಕೆಗಾಗಿ ಮನ 

ಕಾತರಿಸಿ ಕಾದಿದೆ 


ಹೆಜ್ಜೆ ಗೆ , ಹೆಜ್ಜೆ ಸೇರಿಸಬೇಕಾಗಿದೆ 

ಕೈಯೊಳ ಕೈ ಬೆರಸಿ 

ಹೃದಯದ ಬಡಿತ 

ಆಲಿಸಬೇಕಿದೆ 


ಎದೆಯ ಗೂಡಲ್ಲಿ ಗುಬ್ಬಿಯಂತಾಗಿ 

ಮನಸಿನ ಮಾತು ನಿನ್ನೊಡ 

ಹೇಳಬೇಕಾಗಿದೆ 


 ಕಣ್ಣ ಕಾಂತಿಯಲಿ 

ನಲಿದು ಆನಂದದ ರುಚಿ 

ಸವಿಯ ಬೇಕಾಗಿದೆ 


ನಿನ್ನ ಅಧರಗಳಲ್ಲಿ ನನ್ನ 

ಹೆಸರು ಉಲಿದು 

ಮನದಾಳದಲ್ಲಿ 

ನಿಲ್ಲಬೇಕಿದೆ 


ಶಾಂತ ಚಿತ್ತದಿ ಮಲಗಿದ 

ಸಮುದ್ರ ದಲ್ಲಿ 

ಅಲೆಯೊಂದು ಬೀಸಿ 

ಮೇಲೇಳಬೇಕಿದೆ 


ದಾರಿ ಕಾದು ಕೂತ 

ಕಡಲ  ಮುಂದೆ 

ನಿನ್ನ ಚಿತ್ರ ಕಾಣಬೇಕಿದೆ 


ಸವಿದು ಹೋಗುತಿಹ 

ಕತ್ತಲ ಬಾಳಿಗೆ 

ಒಮ್ಮೆ ಬಂದು ಬೆಳಕು 

ಹರಿಸಬೇಕಾಗಿದೆ 


ಸುರಭಿ  ಲತಾ

 ಬದುಕಲಿ ನುಸುಳಿ ಬಂತು ಮಹಾ ಮಾರಿ 

ತೂರಿ ನಿಂತಿತು ಒಡಲೊಳಗೆ ಜೀವ ಹೀರಿ ಸರಮಾಲೆ ಹೊತ್ತು ಸಾಗಿತು ಗಾಡಿ 

ಬೇಡಲು ಆಗದೆ ದೇವನ, ಮುಚ್ಚಿದರು ಗುಡಿ 


ಸಾಲು ಸಾಲು ಮಾರಣ ಹೋಮದ ಧೋಮ 

ಅರಿಯದಾದೆ ಭಗವಂತನ ಕೋಪದ ಮರ್ಮ

ದುಡಿಯುವ ದಾರಿ ಕಾಣದೆ,ಹಸಿವಿನ ಬಾಧೆ ತಾಳದೆ,ಕಣ್ಣೀರ ಕೂಪದಲಿ,ಏನೆಂದು ಬಣ್ಣಿಸಲಿ 


ಮರುಗಿತು ಹಲವು ಜೀವ,ಧಾನಿಗಳು ಅರಿತರು ನೋವ, ನಿಂತರು ದೇವರಂತೆ,ಕರುಣೆಯ ಮೂರುತಿಯಂತೆ,ಒಂದಾಗಲು ಒಗ್ಗಟ್ಟಿನಲಿ 

ಕಷ್ಟ ಗಳು ಸರಿವವು ಮರೆಯಲಿ 


ಹಗಲೆನ್ನದೆ,ಇರುಳೆನ್ನದೆ ನಿಂತರು ಅರಳಿ ಮರದಂತೆ,ಕಾಯ್ದರು ಒಡ ಹುಟ್ಟಿದವರಂತೆ  

ಮರು ಕಳಿಸದಿರಲಿ ರೋಗ ರುಜಿನಗಳು 

ಒಂದಾಗಿ ಬೆರೆತು ಕರೆವ ಒಳ್ಳೆಯ ದಿನಗಳು 


ಸುರಭಿ ಲತಾ  


ಶನಿವಾರ, ಜೂನ್ 19, 2021

 ಎತ್ತರೆತ್ತರಕೆ ಬೆಳೆದಂತೆ ಕನಸು ..!

ಚಿಕ್ಕದಾಗುವುದೇ ಮನಸು !

ಗುರಿ ಮುಟ್ಟಿ ಹೆಸರು ಗಳಿಸಿ ...

ಸಣ್ಣ ತನವ ತೋರುವುದೇಕೊ ?!!

ಬೆಳೆಯುವ ಕುಡಿಯ ಚಿವುಟುವುದೇಕೊ !?


ನಾನು ನಾನೇ ಎಂಬ ಅಹಂ ಭಾವ !

ಶ್ರೇಷ್ಠ ವೆಂಬುವ ಮನೋಭಾವ !!

ದೊಡ್ಡ ತನವ ಮರೆಸುವುದು !

ಕೀಳುತನವ ತೋರುವುದು !

ಸಲ್ಲದು ಅಪಜಯವ ತರುವುದು ! 


ಎಲ್ಲರಲ್ಲೊಂದಾಗಿ ತ್ಯಾಗಿ ನೀ ಆಗಿ !

ಒಳಿತು ಬಯಸುವೆಯಾದರೆ ನೀನು !

ಕಾಣ್ವರು ಎಲ್ಲರೂ ಕಂಡಂತೆ ಬಾನು !

ಮುಗಿಲಲಿ ಬೆಳ್ಳಿ ಚುಕ್ಕೆ ಹೊಳೆವುದೇತಕೆ ! 

ಅಲ್ಲ ಗೆಳೆದು ನೋವ ಕೊಡದಿರು ಮನಕೆ !


ಹಿರಿಯ ಕಿರಿಯರಿಲ್ಲ ಜಗದೊಳು !

ದೇವ ಕೊಟ್ಟ ವರವಿದು ಕೇಳು !

ಮುನಿದು  ಕಣ್ಣು ಬಿಟ್ಟರೊಮ್ಮೆ !

ತಲೆ ಗೆಳಗಾಗುವುದು ಜಗವೆಲ್ಲಾ !

ಮಣ್ಣ ಸೇರುವುದು ತಪ್ಪುವುದಿಲ್ಲ !


ಸುರಭಿ ಲತಾ

ಶುಕ್ರವಾರ, ಜೂನ್ 18, 2021

ಮುಂಜಾನೆ

 ಇರುಳಾಯಿತು ಹಗಲಾಯಿತು 

ಹಸಿರಾಯಿತು,ಕೆಸರಾಯಿತು 

 ಓಡುತಿದೆ ಸಮಯ 


ತಿಂಗಳಾಯಿತು,ಬೆಳದಿಂಗಳಾಯಿತು

ಸಾಗುತಿದೆ ಖುತು,ಮಾಸಗಳು 

ಚಿಗುರೊಡೆದ ಹೊಸ ಸಸಿಗಳು 


ಬಾನಾಯಿತು,ಭುವಿಯಾಯಿತು 

ಮಾಡುತಿದೆ ತನ್ನಷ್ಟಕ್ಕೆ ತನ್ನ ಕೆಲಸ 

ವಿಧಿ ತೋರಿದೆ ಮಂದ ಹಾಸ 


ದಗೆಯಲಿ ದೂಳಿನಲಿ,ನಗುತಿದೆ 

ಚಿತ್ರ ವಿಚಿತ್ರ ಖಾಯಿಲೆಯ ಅಟ್ಟಹಾಸ 

ವಿಜ್ಞಾನ ಬರೆದಿದೆ ಹೊಸ ಇತಿಹಾಸ 


ನಗುವು,ಅಳುವು ಬಾನಂಗಳದಿ 

ಕಾಮನ ಬಿಲ್ಲಂತೆ,ಬಣ್ಣ ಬಣ್ಣಗಳಲಿ 

ಮೂಡುತಿರಲು ಪ್ರಕೃತಿ ಸೇರಿದಂತೆ 


ಸುರಭಿ ಲತಾ

ಗುರುವಾರ, ಜೂನ್ 17, 2021

ಮುನಿಸು ನೋಯಿಸಿತು ಮನಸು

 ಸರಸ ವಿರಸ 


ಮುಂಜಾನೆ ಇಂದ ಕಾದು ಕೂತಿದ್ದೆ 

ಮುಸ್ಸಂಜೆಗೆ ಬಂದವನು 

ಬಾಯಿತುಂಬಾ ಬೈದಿದ್ದೆ 

ನಾ ಸಿಗದೇ ಹೋಗಿದ್ದಕ್ಕೆ ಕೂಪಗೊಂಡಿದ್ದೆ

ಒಂದೂ ಮಾತಾಡದೆ ಸುಮ್ಮನಿದ್ದು ಬಿಟ್ಟೆ 


ಮುನಿಸು ಬರದೇ ಹೋಯಿತು 

ನೀ ಅಂದಾಗಲೂ , ನನ್ನೊಲವು 

ನಿನ್ನೋಳಗಿತ್ತು 

ಆಡಿ ಮುಗಿಸಿ ಕಣ್ಣ ನೋಡದೇ 

ಕಣ್ಮರೆಯಾದೆ 


ನೀ ಕೊಂದಿದ್ದರೂ ಚನ್ನವಿರುತಿತ್ತೆನೂ 

ಚೆನ್ನ , ನೀ ಹೋದೆಯಲ್ಲಾ 

ಆಗಲೇ ನೋಡು ತುಂಬಿತ್ತು ನನ್ನ  ಕಣ್ಣು

ಎದೆಯಲ್ಲಿ ಆಯಿತು ಹುಣ್ಣು 


ಬರದೇ ಹೋಗುವೆಯೇನೂ ಎಂದುಕೊಂಡೆ 

ಕೊನೆಗೂ ಹೊಡೆಯಿತು ಕರೆ ಗಂಟೆ 

ಎದುರಲ್ಲಿ ನಿಂತ ನೀನು 

ಬೇಕಿರಲಿಲ್ಲವೇನೂ ಮಾತಿನ್ನು

ತಬ್ಬಿ ಹಿಡಿದೆ ನೀನು 

ನಿನ್ನಲ್ಲಿ ಕರಗಿ ಹೋದೆ ನಾನು 


ಸುರಭಿ ಲತಾ

ಅಪ್ಪ

 ಬಿಟ್ಟು ಹೋಗುವ  ಮುನ್ನ 

ಜಗಳದಲ್ಲಿ ಮರೆತೆ ಏಕೆ ನನ್ನ


ಎಲ್ಲರೂ ಆಚರಿಸುವರು ಅಪ್ಪನ ದಿವಸ 

ನಾ ಕಾಣುತಿರುವೆ ನಿನ್ನ ಕನಸ 


ಅಪ್ಪಾ ಎಂದು ಕರೆಯಲಿ ಯಾರನ್ನ 

ತಬ್ಬುವರಿಲ್ಲ ತೋಳನ್ನ 


ಬೇಕಾಗಿದೆ ನಿನ್ನ ಪ್ರೀತಿ ಮಾತು 

ಅಳುತಿಹಳು ಅಮ್ಮ ಕೂತು 


ಬರಬಾರದೇ ಪಪ್ಪ 

ಕೊಡಬಾರದೇ ಒಂದು ಉಪ್ಪಾ ( ಮುತ್ತು) 


ನಿನಗಾಗಿ ಕಾದಿರಿಸಿರುವೆ ಹಣ್ಣುಗಳು 

ಅತ್ತು ಊದಿಕೊಂಡಿದೆ ನನ್ನ ಕಣ್ಣುಗಳು   


ದಯಮಾಡಿ ಬಂದು ಬಿಡು 

ಒಮ್ಮೆ ನನ್ನ ತಬ್ಬಿಬಿಡು 


ಸುರಭಿ ಲತಾ

ಬಾಹುಬಲಿ

 ಇವನಾರೆ ಇವನಾರೆ ಕೇಳೇ ಇನವ ಗುಣಗಾನ 

ಹಾಡುತಿರೆ ನಲಿಯುತ ತಣಿಯುವುದು ಮನ 


ಬಟಾಬಯಲೇ ದಿಗಂಬರನಿಗೆ ಮೈ ಬಟ್ಟೆ ಯಾಯಿತು 

ಆಗಸವೇ ಅನಿಕೇತನನಿಗೆ ಇರುವ ಮನೆಯಾಯಿತು 


ಅಹಿಂಸಾವಾದಿಗಳ,ತ್ಯಾಗಿಗಳ,ಜ್ಞಾನಿಗಳ 

ಹೃದಯ ಮಂದಿರ ವಾಸಿ 


ವೃಷಭ ದೇವ, ಸುನಂದೆಯರ ಪುತ್ರನಿವನಮ್ಮ 

ಅಪ್ರತಿಮ ಸೌಂದರ್ಯ, ಸಾಮರ್ಥ್ಯ, ಮನುಕುಲಶ್ರೇಷ್ಟ ನಮ್ಮ 


ಅಣ್ಣ ಭರತನೊಡನೆ ಹೋರಾಡಿ ಕ್ಷಣದಲ್ಲಿಯೇ 

ಎಲ್ಲವನು ತೊರೆದು ತಪಕೆ ಹೊರಟ ತ್ಯಾಗಮಯಿ ಇವನಮ್ಮ 


ಶ್ರವಣಬೆಳಗೊಳದ ವಿಂದ್ಯಾಗಿರಿಯ ಮೇಲೆ 

ಚಾವುಂಡರಾಯನ ಕೆತ್ತನೆಯಲ್ಲಿ ಸೃಷ್ಟಿ ಗೊಂಡವನಿವನಮ್ಮ 


ಕರಾವಳಿಯ ಸನಿಹದೊಳು,ಮಲೆನಾಡಿನ ಹೊಸ್ತಿಲಲ್ಲಿರುವ 

" ಕರಿಗಲ್ಲು" ಊರಿನ ಶಿಖರದಲಿ ನಿಂತವನೇ ಇವನಮ್ಮ 


ಮಹಾಮಸ್ತಕಾಭಿಷೇಕದಿ ಜನ ಮನವ ಸೆಳೆದವನು 

ಭಕ್ತಿ ಮುಕ್ತಿ ಗೆ ಕಾರಣ ಕರ್ತನು ಇವನಮ್ಮ 


ಇವನೇ ಇವನೇ ನಮ್ಮ ಬಾಹುಬಲಿ 

ಬನ್ನಿ ಬನ್ನಿ ಕಣ್ಣರಳಿಸಿ ಕಾಣಿರೆ ಇವನ 


ಸುರಭಿ ಲತಾ


ಮಂಗಳವಾರ, ಜೂನ್ 15, 2021

ಇನಿಯ ಒಲವು

 ಮುಗಿಲಲಿ ಕಪ್ಪು ಮೋಡ 

ಎದೆಯೊಳಗೆ ಸಣ್ಣ ದುಗುಡ 

ಪಟ ಪಟ ಹನಿ ಉದುರಿ 

ಮಳೆ ಬಂತು ಗುಡುಗು ಚೆದರಿ 


ನೆಂದು ಬಂದಾ ಇನಿಯ 

ಚಳಿಕಾಯಲು ಸನಿಹ 

ಮೊಗ್ಗರಳಿ ಹೂವಾದ ಸಮಯ 

ತಂಪು ಗೊಂಡಿತು ಹೃದಯ 


ಬಾನಲ್ಲಿ ಬಿಳಿ ಮಿಂಚು 

ಕಣ್ಣಲ್ಲಿ ಒಲವ ಸಂಚು 

ಬಿಗಿದಪ್ಪಿ ಒಡಲನು 

ಸೆಳೆದನು ಬಾಲೆಯನು 


ಸತ್ಯವ ಅರಿತೆ ನಾನಿಂದು 

ಬಯಸುವರೇಕೆ ಖುತುಕಾಲವೆಂದು 

ಬೀಸುವ ತಂಪು ಗಾಳಿಗೆ 

ಹದವಾಗುವುದು ಬಯಕೆ 


ಸುರಭಿ ಲತಾ

ಸೋಮವಾರ, ಜೂನ್ 14, 2021

ಯಮನಿಗೊಂದು ಪ್ರಶ್ನೆ

 ದಣಿದಿಲ್ಲವೇ ಯಮರಾಜ ನೀನು 

ಹೊತ್ತು ಕೊಂಡು ಹೋಗುತಿಹೆ 

ಅತ್ತು ಸೊರಗಿಹ ಜೀವಗಳ 

ಬತ್ತಿ ಹೋಗುತಿದೆ ಕಣ್ಣೀರು 


ಮೆತ್ತಗಿನ ಮನಸಿನ ಕೂಸುಗಳು 

ಹತ್ತು ಜನರ ಒಲವ ಗೆದ್ದವರು 

ಒಳಿತು ಮಾಡುವವರಿಗೆಂತ ನೋವು 

ಹಾವಂತ ಜನರಿಗೆ ಆಯುಸ್ಸು 


ಕಲಿಯುಗವು ಕರ್ಮಗಳ ಕಾಂಡವು 

ಕರಗಿ ಹೋಗುತಿದೆ ಕರುಣೆಯು 

ಎತ್ತ ಸಾಗುತಿದೆ ಪಯಣವು 

ಬದುಕೊಂದು ವಿಚಿತ್ರದ ತಾಣವು 


ಇನ್ನೆಷ್ಟು ಹೊರಬೇಕಿದೆ ಭಾರವು 

ರಜೆ ಬೇಡವೆ ಸಾವಿನ ಮೆರವಣಿಗೆಗೆ 

ಕರಗಲಿಲ್ಲವೇ ಶಾಹಿ ಬ್ರಹ್ಮ ದೇವ 

ದಣಿಯಲಿಲ್ಲವೇ ಹೊತ್ತು ಯಮ ದೇವ 


ಬರಿದಾಗಿ ಹೋಗುತಿದೆ ಭೂ ಲೋಕ 

ಒಳಿತೆಂಬುದೆ ಕರಗಿ ಹೋಗುವ ಭಯವು 

ಉಳಿದವರು ಸ್ವಾರ್ಥಕೆ ಬಲಿಯಾದವರು 

ಬದುಕುವುದೆಂತು ಮುಂದೆ ದಾರಿ ಕಾಣೆವು 


ಸುರಭಿ ಲತಾ 

ಭಾನುವಾರ, ಜೂನ್ 13, 2021

ಹೋಗುವುದಾದರೆ ಹೋಗಿ ಬಿಡು

 ಹೋಗುವುದಾದರೆ ಹೋಗಿ ಬಿಡು 

ಬಂದು ನನ್ನ ಕಾಡದಿರು 

ಮನಸ್ಸಿನಲ್ಲಿ ಹೊಸ ಆಸೆ ಬಿತ್ತಿ 

ನನ್ನನೇಕೆ ಸುಡುತಿ 


ಹೋಗುವುದಾದರೆ ಹೋಗಿ ಬಿಡು 

ಬಂದು ನನ್ನ ಕಾಡದಿರು 


ಕಾಡಿ ಬೇಡಿ ಕರವ ಮುಗಿದು 

ಕಲ್ಪನೆಯಲ್ಲೇ ಕರಗಿಸಿದೆ 

ನಡೆಯದನ್ನು ನಡೆಸು ಎಂದು 

ಕೇಳಲು ಮೂಕಿಯಾದೆ ಇಂದು 


ಜಗವ ಎದುರು ಜಾತಿ ಮುಂದು 

ಹೋಗಲಾಡಿಸಲು ಬರುವರಾರು ಇಂದು 

ಆಡುವರು ಸಾವಿರ ಮಾತು ಹಿಂದೆ 

ಪಾಲಿಸುವರು ಮಾತ್ರ ಕೆಲವೇ ಮಂದಿ 


ನೀನು ಮೇಲು  ನಾನು ಕೀಳು 

ಎಂಬ  ಬೇಡ ಬೇದ 

ಒಲವು ಮೂಡಲು ಏನು ಬರದು 

ನಮ್ಮಿಬ್ಬರ ಮುಂದ 


ಹೆದರಿ ಸರಿದು ಹೋಗವುದಾದರೆ 

ಹೋಗಿ ಬಿಡು ಇಲ್ಲ 

ಗೆಲ್ಲುವುದಾದರೆ ಗೆದ್ದು ಬಿಡು 

ಅಂಜಿಕೆಯನ್ನು ತೊರೆದು ಬಿಡು 

ಸುರಭಿ ಲತಾ

ಶನಿವಾರ, ಜೂನ್ 12, 2021

ಏಕೀ ಜಾತಿ ಗೊಂದಲ

 ಗಿಲ್ಟಿ ನೆಸ್ ಇಂದಲೇ ಅವರ ಬಗ್ಗೆ ಅವರುಗಳೇ ಅವರವರನ್ನು ಕೆಳಮಟ್ಟಕ್ಕೆ ಕೊಂಡೊಯ್ಯುವರು 


ಇಲ್ಲಿ ಯಾರೂ ಮೇಲಲ್ಲ,ಯಾರೂ ಕೀಳಲ್ಲ 

ಮಾತಿಗೆ ಮುಂಚೆ ಜಾತಿಯ ಪ್ರಸ್ತಾಪ ಮಾಡುವುದು ಬಿಡದ ಹೊರತು 

ಹೊಂದಾಣಿಕೆ ಒಗ್ಗಟ್ಟು ಸಾಧ್ಯವಿಲ್ಲ 


ಪ್ರೀತಿ, ಅಭಿಮಾನ,ನಂಬಿಕೆ ಯನ್ನು ಕೊಲ್ಲುವ ಅಸ್ತ್ರ ವೇ ಈ " ಜಾತಿ" 


ಸುರಭಿ ಲತಾ 

ಶುಕ್ರವಾರ, ಜೂನ್ 11, 2021

ಆಣಿ ಮುತ್ತು

 ಹನಿ ಕವನಗಳು ಆಣಿ-

ಮುತ್ತಾಗಿ ಸೇರಲು ಕಾದಿದೆ 

ನಿನ್ನ ಪಾದ ದಡಿಯಲ್ಲಿ 


ಬರೆಯಲು ಕೂತ ಸಮಯದಲ್ಲಿ 

ಕಾಣದಾದೆ ಜಗವಿಲ್ಲಿ , ನೀನೇ 

ಕಂಡೆ ನನ್ನೆದುರಲ್ಲಿ 


ಏಕೆ ಕೊಟ್ಟೆಯೋ ಈ ಹುಟ್ಟು 

ಕಲಿಯುಗದಲ್ಲಿ 

ನಾ ಇರಬೇಕಾಗಿತ್ತು ನೀ ಇದ್ದ 

ಗೋಕುಲದಲ್ಲಿ 


ಅರಿತೆ ಸಖಿಯರ ನೋವು 

ಅಂದು, ಅದೇ ಭಾವದಲ್ಲಿರುವೆ 

ನಾ ಇಂದು 


ಬಿಡಿಸು ಜನ್ಮಗಳ ಗಂಟು 

ಬೆಳೆಸು ನಿನ್ನಲ್ಲಿ ನಂಟು 

ಆಲಿಸು ಎನ್ನಯ ಕರೆ 

ಕಾದಿಹಳು ಈ ನೀರೆ 


ಸುರಭಿ ಲತಾ

ಹೋಗುವುದಾದರೆ ಹೋಗಿ ಬಿಡು

 ಹೋಗುವುದಾದರೆ ಹೋಗಿ ಬಿಡು 

ಬಂದು ನನ್ನ ಕಾಡದಿರು 

ಮನಸ್ಸಿನಲ್ಲಿ ಹೊಸ ಆಸೆ ಬಿತ್ತಿ 

ನನ್ನನೇಕೆ ಸುಡುತಿ 


ಹೋಗುವುದಾದರೆ ಹೋಗಿ ಬಿಡು 

ಬಂದು ನನ್ನ ಕಾಡದಿರು 


ಕಾಡಿ ಬೇಡಿ ಕರವ ಮುಗಿದು 

ಕಲ್ಪನೆಯಲ್ಲೇ ಕರಗಿಸಿದೆ 

ನಡೆಯದನ್ನು ನಡೆಸು ಎಂದು 

ಕೇಳಲು ಮೂಕಿಯಾದೆ ಇಂದು 


ಜಗವ ಎದುರು ಜಾತಿ ಮುಂದು 

ಹೋಗಲಾಡಿಸಲು ಬರುವರಾರು ಇಂದು 

ಆಡುವರು ಸಾವಿರ ಮಾತು ಹಿಂದೆ 

ಪಾಲಿಸುವರು ಮಾತ್ರ ಕೆಲವೇ ಮಂದಿ 


ನೀನು ಮೇಲು  ನಾನು ಕೀಳು 

ಎಂಬ  ಬೇಡ ಬೇದ 

ಒಲವು ಮೂಡಲು ಏನು ಬರದು 

ನಮ್ಮಿಬ್ಬರ ಮುಂದ 


ಹೆದರಿ ಸರಿದು ಹೋಗವುದಾದರೆ 

ಹೋಗಿ ಬಿಡು ಇಲ್ಲ 

ಗೆಲ್ಲುವುದಾದರೆ ಗೆದ್ದು ಬಿಡು 

ಅಂಜಿಕೆಯನ್ನು ತೊರೆದು ಬಿಡು 

ಸುರಭಿ ಲತಾ

ಸಣ್ಣ ಕಥೆ

 ಋಣಾನು ಬಂದ 

.................


ಸುಹಾಸ್ ಪೀ ಯೂ ಸಿ ಮುಗಿಸಿ ಡಿಗ್ರೀ ಮೊದಲ್ನೇ ವರ್ಷ ಹೊಸ ಕಾಲೇಜಿಗೆ ಹೊರಟಿದ್ದ . ಮೊದಲಿಂದಲೂ ತಂದೆಗೆ ಮುದ್ದು .


ತಾಯಿ ಇಲ್ಲವೆಂದು ಅವನು ಕೇಳಿದ್ದೆಲ್ಲ ಕೊಡಿಸುತಿದ್ದ .ತಂದೆಗೆ ನಿರಾಸೆ ಆಗದಂತೆ ಅವನು ಮೊದಲಿಂದಲೂ ಓದಿನಲ್ಲಿ ಯಾವಾಗಲು ಮುಂದೆ ಇದ್ದ .


ಸುಹಾಸ್ ಕಾಲೇಜ್ ನಲ್ಲಿ ಒಳ್ಳೆ ಹೆಸರು ಮಾಡಿದ್ದ . collage  ಶುರುವಾಗಿ ೧೫ ದಿನಗಳು ಕಳೆದಿತ್ತು ,ಆಗ ಹೊಸ ಹುಡುಗಿ ಬಂದು ಸೇರಿದ್ದಳು . ಮೊದಲನೇ ದಿನವೇ ಸುಹಾಸ್ ಗೆ ಅವಳು ಇಷ್ಟವಾಗಿದ್ದಳು .


ಓದಿನಲ್ಲಿ ಅವಳು ತುಂಬ ಜಾಣೆ ಯಾಗಿದ್ದಳು .ಆದರೆ ಅವಳು ಬಂದಾಗಿನಿಂದ ಯಾರ ಬಳಿಯಲ್ಲೂ ಮಾತಾಡುತ್ತಿರಲಿಲ್ಲ . ಅವಳ ಗೆಳತಿಯ ಜೊತೆಯಲ್ಲಿ ಇದ್ದು ಕಾಲೇಜು ಮುಗಿದಾಕ್ಷಣ ಕಾರಿನಲ್ಲಿ ಹೊರಟು ಹೋಗುತ್ತಿದ್ದಳು .


Exam     ಚನ್ನಾಗಿ ಮಾಡಿದ್ದೀರಾ ಕೇಳಿದ ಇಂಪಾದ ಸ್ವರಕ್ಕೆ ಅವನು  ಉತ್ತರಿಸಿದ್ದ .ಅವಳ ಹೆಸರು ಮಾನಸ ಎಂದು ತಿಳಿಯಿತು  .ತನ್ನ ತಾಯಿಗೆ ಒಬ್ಬಳೇ ಮಗಳು .ಅವಳಿಗೂ ತಂದೆ ಇರಲಿಲ್ಲ .ತಾಯಿ ಟೀಚರ್ ಆಗಿ ಕೆಲಸ ಮಾಡಿ ಮಗಳನ್ನು ಓದಿ ಸುತ್ತಿದ್ದ  ಳು .


ಆದರೆ ಅವಳಿಗೆ ಕಣ್ಣು ಕಾಣುತ್ತಿರಲಿಲ್ಲ . ಹಾಗಾಗಿ ಅವಳು ತನ್ನ ಗೆಳತಿ ತನುಜ ಯಾವಾಗಲು ಅವಳ ಜೊತೆಯಲ್ಲೇ ಇರುತ್ತಿದ್ದಳು .

ಇಬ್ಬರು ಅಂದಿನಿಂದ ಒಳ್ಳೆಯ ಗೆಳೆಯರಾದರು .


ಪ್ರತಿದಿನ ಒಟ್ಟಿಗೆ ಕಾಲೇಜಿಗೆ ಬರುತ್ತಿದ್ದರು    . ಇವರ ವಿಷಯ 

ಸುಹಾಸ್ ತಂದೆ ಮೋಹನ್ಗೂ ಗೊತ್ತಿತ್ತು .ತನುಜಳ ತಾಯಿ ಕವಿತಾಗೂ ಗೊತ್ತಿತ್ತು .


ಒಂದು ದಿನ  ಸುಹಾಸ್ ಮಾನಸಳನ್ನು ಮನೆಗೆ ಕರೆದುಕೊಂಡು ಬಂದು   ಪರಿಚಯಿಸಿದ್ದ .

ಅವನಿಗೂ ಅವಳು ಕಣ್ಣಿಲ್ಲದ ವಿಷಯ ನೋವು ಕೊಟ್ಟಿತ್ತು .


ಮಾನಸ  ಮಾರನೆಯ ದಿನ ಹುಟ್ಟುಹಬ್ಬ ಇದ್ದದ್ದರಿಂದ ಸುಹಾಸ್ ಹಾಗು ಮೋಹನ್ ಇಬ್ಬರನ್ನು ತನ್ನ ಮನೆಗೆ ಇನ್ವೈಟ್ ಮಾಡಲು ಬಂದಿದ್ದಳು .


ಅಂದು ಬೆಳಿಗ್ಗೆ ಮಗಳ ಹುಟ್ಟು ಹಬ್ಬವೆಂದು ಹಬ್ಬದ ಅಡುಕೆ ತಯಾರಿಸಿ ಸುಹಾಸ್ ಹಾಗು ಅವನ ತಂದೆ ಗಾಗಿ ಕಾಯುತ್ತಿದ್ದರು .


ಹನ್ನೆರಡು ಗಂಟೆಗೆ ಸುಹಾಸ್ ಹಾಗು ಮೋಹನ್ ಇಬ್ಬರು ಮಾನಸ ಮನೆಗೆ ಬಂದರು . ಕಾಲಿಂಗ್ ಬೆಲ್ ಒತ್ತಿದೊಡನೆ ಮಾನಸಳೇ  ಬಂದು ಬಾಗಿಲು ತೆಗೆದಳು .


 ಅಮ್ಮ ಸುಹಾಸ್ ಬಂದಿದ್ದಾರೆ      ಬಾ ಎಂದು ಅಲ್ಲಿಂದಲೇ ಕೂಗಿ ಕರೆದಳು ." ಬಂದೆ ಎನ್ನುತ್ತಾ    ಹೊರ ಬಂದ ಕವಿತಾ ..

ಮೋಹನ್ ನನ್ನು ನೋಡುತ್ತಾ ನಿಂತಳು  .ತನ್ನ ಕಣ್ಣನ್ನು ತಾನೆ ನಂಬದಾದಳು .


ಹಳೆಯ ನೆನಪು ಅವಳಲ್ಲಿ ತೇಲಿಬಂತು ಮೋಹನ್ ಹಾಗು ಕವಿತಾ ಒಬ್ಬರೊನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ .ಅವರಿಬ್ಬರೂ ಮದುವೆ  ಆಗಬೇಕೆಂದು ಅಂದುಕೊಂಡಿದ್ದರೂ . ದೊಡ್ಡವರ ಒಪ್ಪಿಗೆ ಇಲ್ಲದೆ ಅವರ ಮನಸ್ಸು ನೋಯಿಸದೆ ಇಬ್ಬರು ಬೆರಾಗಿದ್ದರು .ಈಗ ವಿಧಿ   ಅವರನ್ನು ಮಕ್ಕಳ ಮೂಲಕ ಇಲ್ಲಿ ಸೇರಿಸಿತ್ತು .


ಈ ವಿಷಯ ತಿಳಿದು ಸುಹಾಸ್ ಹಾಗು ಮಾನಸಗೂ ಸಂತಸ ವಾಗಿತ್ತು. 


Exam    ಮುಗಿದು ರಜೆ ಬಂದಿತ್ತು .ಮಗಳ ಮಾತಿನಂತೆ ಕವಿತಾ ಒಳ್ಳೆಯ ಸೀರೆ ಉಟ್ಟು ರೆಡಿ ಯಾದಳು


 ,ಮಗಳು ಅಂದು ಹೊಸ ಸುದ್ದಿ ಹೇಳುವುದಾಗಿ ಅದು ದೇವಸ್ತಾನದಲ್ಲಿ ಎಂದು ಹೇಳಿದ್ದಳು . 


ಮಗಳು ಸುಹಾಸ್ ಅನ್ನು ಇಷ್ಟ ಪಡುತ್ತಿದ್ದ ವಿಷಯ ತಿಳಿದಿತ್ತು , ಅದರೂ ಏನೂ ತಿಲಿಯದವಳಂತೆ ಸುಮ್ಮನಿದ್ದಳು .


ಅವಳೇ ಹೇಳಲಿ ಎಂದು ಕಾದಿದ್ದಳು .ಇಂದು ಆ ಸಮಯ ಬಂದಿತ್ತು .ದೇವಸ್ತಾನಕ್ಕೆ ತಾಯಿ ಮಗಳು ಹೋಗುವಸ್ಟರಲ್ಲಿ  ಅಲ್ಲಿ ಸುಹಾಸ್ ಹಾಗು ಕೆಲ ಮುಕ್ಯ ಸ್ನೇಹಿತರು ಅಲ್ಲಿ ಬಂದು ಕಾದಿದ್ದರು .


ಅಂದು ಸುಹಾಸ್ ರೇಶಿಮೆ ಪಂಚೆ ಯಲ್ಲಿ ಲಕ್ಷಣವಾಗಿ ಕಂಡಿದ್ದ ಕವಿತಾಗೆ .ಹಾಗೆ ಮೋಹನ್ ಸಹ ಚನ್ನಾಗಿ ಕಾಣುತಿದ್ದ . 


ಎಲ್ಲರೂ ದೇವಸ್ತಾನದಲ್ಲಿ ಪೂಜೆ ಮಾಡಿಸಲು ಒಟ್ಟಾಗಿ ನಿಂತರು . ಪುರೋಹಿತರು ದೇವರಿಗೆ ಅರ್ಚನೆ  ಮಾಡಿ ಅಲ್ಲಿ ತೆಗೆದಿಟ್ಟ ಎರಡು ಹೂವಿನ ಹಾರಗಳು ತಂದು ಸುಹಾಸ್ ಕೈತಲ್ಲಿ ಕೊಟ್ಟರು .  


ಸುಹಾಸ್ ಒಂದನ್ನು ಮಾನಸ ಕೈಗೆ ಕೊಟ್ಟ . ಸುಹಾಸ್ ತಂದೆಯ ಕೈಗೆ ಹಾರವನ್ನು ಕೊಟ್ಟು ನಸು ನಕ್ಕ. 


 ಮೋಹನ್ ಮಗನಿಗೆ ಮಾತು ಕೊಟ್ಟಂತೆ ಕವಿತಾ ಳ ಕೊರಳಿಗೆ  ಹಾರ      ಹಾಕಿದ .   


ಮಾನಸ ತನ್ನ ಕೈ ಯಲ್ಲಿ ಇದ್ದ ಹಾರವನ್ನು ತಾಯಿಯ ಕೈಗೆ ಕೊಟ್ಟಳು ಕವಿತಾ.


 ' ಮಾನಸ ಏನು ಇದೆಲ್ಲ ' ಗಾಬರಿ ಯಾದಂತೆ ಕೇಳಿದಳು , ' ಮಾನಸ ' ಅಮ್ಮ ಇದುವರೆಗೂ ನೀನು ಅನುಭವಿಸಿದ ವನವಾಸ ಸಾಕು . 

ಇದುವರೆಗೂ ನಾನು ನಿನ್ನಲ್ಲಿ ಏನು ಕೇಳಲಿಲ್ಲ ಈಗ ಕೆಳುತಿದ್ದೆನ್ನೇ ಇಲ್ಲ ಅನ್ನಬೇಡ ..ನನಗೂ ತಂದೆ ಬೇಕು ..ಸುಹಾಸ್ ನಂತ ಅಣ್ಣ ಬೇಕು ದಯವಿಟ್ಟು ಕೊಡುತ್ತಿಯ ' ?? 


ಕವಿತಾ ಮೋಹನ್ ನ ಮುಕ  ನೋಡಿದಳು ..ಮೋಹನ್ ಹೂ ನಗೆ ಬೀರಿ ಹಾರ ಹಾಕುವಂತೆ ಕೊರಳು ತಗ್ಗಿಸಿದ .ಕವಿತಾ ಕಣ್ಣು ತುಂಬಿ ಬಂತು ಮಗಳನ್ನು ತಬ್ಬಿ ಹಿಡಿದಳು ..ಮಾನಸ ತಾಯಿ ಗೆ ಹಾರ ಹಾಕುವಂತೆ ಬೇಡಿದಳು ..ಕವಿತಾ ಮೋಹನ್ ನನಿಗೆ ಹಾರ ಹಾಕಿದಳು ..ಎಲ್ಲರೂ ಹೂವಿನ ಮಳೆ ಸುರಿಸಿದರು. 


ಋಣಾನು ಬಂದ ರೂಪೆನ ....

ಪುರೋಹಿತರ ಬಾಯಲ್ಲಿ ಹೊರ ಹೊಮ್ಮಿತು

ನಮ್ಮವರು ಇವರು

 ನಮ್ಮವರೇ ಇವರು ನಮ್ಮವರೇ !? 


ನಾಡು ನುಡಿಗಾಗಿ ಹೋರಾಡುತಿಹರು ಇಲ್ಲಿ 

ನಮ್ಮ ನಾಡಿನಲ್ಲೇ ಪರ ಭಾಷೆಯ ಆಡುವರು ಅಲ್ಲಲ್ಲಿ  

ನಮ್ಮವರೇ ಇವರು ನಮ್ಮವರೇ...


ಕೆಚ್ಚೆದೆಯ ಕಣ್ಮಣಿಗಳು ಸ್ವಾಭಿಮಾನವ ಬಿಡಲೊಲ್ಲರು 

ಪರ ಭಾಷೆಯ ಸಿನಿಮಾ ಗೆ ಜೈ ಎಂದರು ಕೆಲವರು 

ನಮ್ಮವರೇ ಇವರು ನಮ್ಮವರೇ...


ನೀರಿಗಾಗಿ ಹೋರಾಟ ರೈತರ ಪರದಾಟ 

ಸಂಬಂಧ ವಿಲ್ಲದಂತೆ ಕೂತು ನಗುವರು 

ನಮ್ಮವರೇ ಇವರು ನಮ್ಮವರೇ...


ಊಟ ವಸತಿ ಕೆಲಸ ವಿಲ್ಲಿ ಅರಸಿ ಬಂದರು 

ಇಟ್ಟ ಒಡಲಿಗೆ ಕೊಳ್ಳಿ ಇಟ್ಟು ತಮ್ಮ ತನವ ಮೆರೆದರು 

ನಮ್ಮವರೇ..ಇವರು ನಮ್ಮವರೇ !? 


ಹುಟ್ಟಿದ್ದು ಇಲ್ಲಿ ಮೆರೆದರು ಅಲ್ಲಿ 

ಬೆಳೆಸಿದ ತಾಯಾದರೇನು ಹೆತ್ತ ತಾಯಿಯ ಮರೆತರು 

ನಮ್ಮ ವರೇ ಇವರು ನಮ್ಮವರೇ....


ಬೇಕೆಂದಾಗ ಬಲು ಒಲವಿನ ನುಡಿ 

ಬೇಡದಾಗ ಹಾಕುವರು ಕಿಚ್ಚಿನ ಕಿಡಿ 

ನಮ್ಮ ವರೇ ಇವರು ನಮ್ಮವರೇ...


ಸುರಭಿ ಲತಾ

ಶಿಲಾ ಬಾಲಿಕೆ

 ಹಲವು ಭಂಗಿಗಳ ಕೆತ್ತಿ 

ಎದೆಯಲ್ಲಿ ಆಸೆಯ ಬೀಜ ಬಿತ್ತಿ 

ಮನಸು ಚೆಂಚಲ ಗೊಳಿಸಿದವಾರು 


ಬೇಧ ಭಾವವ ಅಳಿಸಿ 

ತಾರತಮ್ಯ ವ ಬೇದಿಸಿ 

ನಶ್ವರ ಜಗವೆಂದು ತೊರಿಸಿದವರಾರು 


ಅಂತರಂಗದ ಸೌಂದರ್ಯದ ಮುಂದೆ 

ಬಾಹ್ಯ ಸೌಂದರ್ಯ ನಶ್ವರವೆಂದು 

ಮೂಡ ಮನುಜನಿಗೆ ಕಂಡುಕೊಟ್ಟವರಾರು 


ಅದೇ ಮಹಾನುಭಾವ 

ಅವನೇ ಮಹಾಶಿಲ್ಪಕಲೆಗಳ ಕಲೆಗಾರ 

ಅವನಿಗೊಂದು ನಮಸ್ಕಾರ 


ಸುರಭಿ ಲತಾ

ಬರೀ ಮೌನ

 ಮನಸು ಮೌನವಾಯ್ತು 

ಕನಸು ಮುದುರಿ ಹೋಯ್ತು 

ನೀ ಬರದಿರೆ ಹತ್ತಿರ 

ಎದೆ ಏಕೊ ಬಲು ಭಾರ 


ನಿನಗಾಗಿ ಕಾದು ಕುಳಿತೆ 

ನೀನೆಲ್ಲೂ ಏಕೆ ಕಾಣದಾದೆ 

ಆಗಸದ ಚುಕ್ಕಿಗಳು ನಕ್ಕಂತಾಯಿತು 

ಮುನಿಸೆಲ್ಲವು ಕಣ್ಣ ಹನಿಯಾಯಿತು 


ಹೆಜ್ಜೆ ಗೊಂದು ಪಾದ ಸವಿದರೆ ದಾರಿ 

ಮನಸಿಗೊಂದು ಪ್ರೀತಿ ನೆಮ್ಮದಿ

ನಡಿಗೆಗಂತೂ ಅಂತ್ಯ ಕಾಣದು 

ನೊಂದ ಎದೆಗೆ ಒಲುಮೆಯೆ ಸಿಂಚನ 


ಬಿಡಿಸಿಟ್ಟೆ ಹೃದಯ ಪುಸ್ತಕ ನಿನ್ನೆದುರು 

ನಂಬಿಕೆಯ ಸಹಿ ಹಾಕಬೇಕಿದೆ 

ಮಡಿಚಿಟ್ಟ ಭಾವನೆಗಳ ಹರಡಿದೆ

ಸೊರಗದೆ ಕಾಯ್ದುಕೊ ಬಿಡದೆ 


ಸುರಭಿ ಲತಾ 


ಬುಧವಾರ, ಜೂನ್ 9, 2021

ಸತ್ಯದ ನುಡಿ

 ಹಿಡಿದಿಡಿದು ಕನಸಿಗೆ ಕಟ್ಟೆಯನು ಕಟ್ಟದಿರು 

ಆಸೆಗಳೆಲ್ಲವೂ ನೆರವೇರುವ ಬರವಸೆಯ ಬಿಟ್ಟು ಬಿಡು 

ಆಸೆ,ನಿರಾಸೆಗಳು ಊಟದೆಲೆಯ ಪಲ್ಯಗಳಂತೆ 

ಸಮನಾಗಿ ಸವಿಯುತ್ತ ನಡೆದುಬಿಡು 


ಸುರಭಿ ಲತಾ

ಅರಿವು

 ಮರೆತು ಹೋಗಬಹುದೇ ಆ ಮಧುರ ಕ್ಷಣವನು

ಸುತ್ತ ಮುತ್ತಲು ಕಗ್ಗತ್ತು ಆವರಿಸಿ 

ರೋಗವಿದು ಸಾಮ್ರಾಜ್ಯ ವಾಳಿರಲು 

ಜಗದ ಜಂಜಾಟದಲಿ ದಿನವು ನೂಕಿರಲು 

ಇನಿಯ ಮರೆವು ತಬ್ಬಿತೇಕೆ ನನ್ನನ್ನು 


ಸದಾ ನಗಿಸಿ ಸಂತಸ ಕೊಡುವ ಮನಸು 

ಹೆಸರ ನೆನೆದೊಡನೆ ಕನಸಿನಲಿ ಬರುವ

ಮನಸದು ಮಲ್ಲಿಗೆಯ ಮಾಲೆ ಎಂತಹದು 

ಮುಂದಾಗಿ ಶುಭ ಕೋರುವ ಬಯಕೆ ಇರಲು 

ಇನಿಯ ಮರೆವು ತಬ್ಬಿತೇಕೆ ನನ್ನನು 


ಕಸೂತಿ ಮಾಡಿದ ಕುಸುಮ ಮಾಲೆಯ 

ಕೊರಳಿಗೆ ತೊಡಿಸುವ ಸಮಯದು 

ಮುಗುಳು ನಗೆಯ ಮುತ್ತ ಸುರಿಸಿ 

ಸಿಹಿಯ ಸವಿಯುವ ಸಂತಸ ದಿನವದು 

ಇನಿಯ ಮರೆವು ತಬ್ಬಿತೇಕೆ ನನ್ನನು 


ಕ್ಷಮೆಯ ಬೇಡಲು ಮುದುರಿದ ಮನಸಿನೊಳು 

ಕಹಿಯ ಉಂಡಂತೆ ನಿರಾಸೆಯು ತಬ್ಬಿತೆನ್ನನು 

ಸಂತೈಸೆ ನಿನ್ನನು ನನಗರಿವಿರದ ತಪ್ಪನ್ನು 

ಮರೆತು ನಗುವ ಸೂಸಿಬಿಡು ಸ್ನೇಹಿತನೆ

ನಿನಗೆಂದೆ ಬರೆದ ಎದೆಯ ಪದಗಳಿವು 


ಮಂದಾರ ಪುಷ್ಪದ ತೇರ ಎಳೆವೆ ನೆಂದು 

ಮರೆತು ಬೆರೆತು ಸಾಗುವ ಮುಂದಿನ ದಿನವದು 


ಸುರಭಿ ಲತಾ 

ಮಂಗಳವಾರ, ಜೂನ್ 8, 2021

ಅಂತರ

 ಹತ್ತಿರ ಬರಬೇಡ ಕಣೊ 

ಬೆಣ್ಣೆ ಯಂತೆ ಕರಗಿ ಬಿಡುವೆ 

ನಿನ್ನ ಕೈ  ಒಡಲ ಸೋಕಲು 

ನನ್ನ ನಾನು ಮರೆವೆ 


ಸುರಭಿ ಲತಾ 

ಮುಂಗೋಪ

 ಪ್ರೀತಿಸುವುದೊಂದೇ ನಿನಗೆ ಗೊತ್ತು 

ಮುನಿದವಳ ಒಲಿಸುವಿಕೆ ಅರಿಯದವ ನೀನು 

ಮುಗ್ದ ನೆನ್ನಲೊ,ಪೆದ್ದ ನೆನ್ನಲೊ 

 ಗೊಂದಲ ದಲಿ ನನ್ನ ಮನ ಬಿತ್ತು 


ಸುರಭಿ ಲತಾ

ತೊರೆದು ಹೋದೆಯ

 ಸುಮ್ಮನಿದ್ದವಳನ್ನು ಕೆಣಕಿ ಮನವ ಕೆದಕೆ ಬೇಡಿದೆ ಪರಿ ಪರಿಯಲಿ ಒಲವನು 

ಮೌನ ಮರೆತು ಎದೆಯಲಿ ಪ್ರೀತಿಯ ಪುಷ್ಪ ಅರಳುವ ಹೊತ್ತಿಗೆ ನನ್ನ ತೊರೆದೆ ಏನು 


ಕೋರಿದೊಡನೆ ದೇವನು ಒರವ ಕೊಡನು 

ಕಂಡ ತಕ್ಷಣ ಕಣ್ಣು ಬೆರೆಸಲಾಗುವುದೇನು 

ಕೊಳಕು ತುಂಬಿದ ಜಗವಿದು 

ನಂಬಿಕೆ ಎಂಬುದು ಮರೀಚಿಕೆ 


ಮೋಹವದು ಕಾಮನ ಬಿಲ್ಲಿನಂತಹುದು 

ಕಾಣಲೇನೊ ಹಲವು ಬಣ್ಣಗಳು 

ಕಾಮ ವೇನೊ ಕ್ಷಣಿಕವಂತದ್ದು 

ಹೇಗೆ ಅರಿಯಲೊ ಗೆಳೆಯ 


ಬಂದು ಒಮ್ಮೆ ಸತ್ಯದ ಅರಿವಾಗಿಸು 

ನಿತ್ಯ ಭೋಜನ ವಲ್ಲದೆ ಹಬ್ಬದೂಟವ ಉಣಿಸು 

ಹಗಲಲಿ ನಕ್ಷತ್ರ ವ ತೋರದೆ 

ಇರುಳಿನ ಚೆಂದ್ರಮನಂತೆ ಬಾ ಬೆಳಗು 


ಸುರಭಿ ಲತಾ 


ಅನಾಮಿಕ

 ಒಳ ಬರಲು,ಹೊರ ಹೋಗಲು ಬಾಗಿಲು ಇರದ ಮನೆಯ ಒಡತಿ ನಾನೆಂದು 

ಬಂದು ಹೋಗುವ ಜನರ ಕಾಣುವೆನಾದರೂ 

ಕರೆದು ಕೂರಿಸಿ ಇಲ್ಲ ಸಲ್ಲದ ಮಾತು ಬರದು


ಅರಿವೇ ಇಲ್ಲದೆ ಬೀಸುವ ತಂಗಾಳಿ ಹಿತವಾಯಿತು,ಒಂಟಿಯಾಗಿ ಕೂರಲು ಮನಸಾಯಿತು,ಮಂಜಿನ ತೆರೆಯಲಿ ಮುಸುಕಾದ ಆ ಮೊಗವು ಚೆಂದವೆನಿಸಿತು 


ನೀನು ಯಾರೊ ನಾ ನಂತು ಅರಿಯೆ ನಿನ್ನ ಗುಣವೆಂತದ್ದೊ ,ನಿನ್ನ ಸ್ವಭಾವ ವೆಂತದ್ದೊ ದೂರದಿ ಕುಳಿತು ಕುಶಲೋಪರಿ ಕೇಳಿದಾಗ 

ಸಣ್ಣ ದೊಂದು ಮುಗುಳು ನಗೆ ತುಟಿಯಂಚಲಿ 


ಮನಸ್ಸು ಗೊಂದಲವಾಗಿರುವಾಗ ಮಾಯಗಾರನಂತೆ ಅರಿತು,ನಿನ್ನ ಸಮಾಧಾನದ ಮಾತು ನೆಮ್ಮದಿ ತರಿಸಿತು ನನ್ನಲಿ 

ಕಟ್ಟಿ ಕೊಂಡ ಭದ್ರ ಗೊಡೆಯಲಿ ಕಿರು ಬೆಳಕು 


ಕನಸಿನ ಲೋಕದಲಿ ತೇಲುವ ಮುಂಚೆಯೇ 

ಬೆಚ್ಚಿ ಬೀಳಿಸಿತು ಭಯದ ನೆರಳು 

ಎಚ್ಚರಿಕೆಯ ಗಂಟೆ ಮೊಳಗಲು 

ಭದ್ರ ಗೊಂಡಿತು ಅಲುಗಾಡದೆ ಪಾದಗಳು 


 ಸುರಭಿ ಲತಾ 


ಚೆನ್ನ

 ಹೇಳದೆ ಮೌನ ವಹಿಸಿದೆ ಚೆನ್ನ 

ಕೇಳದೇ ಅರಿತು ಬಿಟ್ಟೆಯ ನನ್ನ 

ಮಾತುಗಳು ಬೇಕಿಲ್ಲ ನಮ್ಮಿಬ್ಬರಲಿ 

ಹೃದಯ  ಬಡಿತ ಸಾಕಲ್ಲವೆ 


ನೋವುಗಳು ಹಲವು ಬಗೆಯಲಿ 

ಹಂಚಿಕೊಳ್ಳಲಾರೆನು ಎಲ್ಲರಲಿ 

ಸಂತಸ ಕೊಡಬಯಸುವೆ 

ದುಃಖ ವಿರಲಿ ನನ್ನೆದೆಯಲಿ 


ನೊಂದಾಗ ಬರುವೆಯಲ್ಲ ಬಿರುಗಾಳಿಯಂತೆ 

ಶಕ್ತಿ ತುಂಬುವ ದೇವನಂತೆ 

ನೀನಿರಲು ಜೊತೆಯಲಿ ನನಗೇಕೆ ಚಿಂತೆ 

ದೇಹವೆರಡು ಆತ್ಮ ಒಂದಂತೆ 


ಸುರಭಿ ಲತಾ

ಸೋಮವಾರ, ಜೂನ್ 7, 2021

ಲೀಲೆ

 ಕೃಷ್ಣ ನಲ್ಲದೇ ಒಲ್ಲೆ ಬೆರೊಬ್ಬನನು 

ಅವನು ನನ್ನಿನಿಯನೆಂದು ಬಲ್ಲನವನು 


ಕಾತರಿಸಿದ ಮನಕೆ ಹಿತ ತಂದವನು 

ಅಳಿಸಿ , ನಗಿಸಿ , ಮೋಹಿತಗೊಳಿಸುವನು 

ಜಗದೊಡೆಯನಾದರೇನು , ನನ್ನವನವನು 


ರಾಧೆಯ ಪ್ರೀತಿಗೆ ಬದ್ದ ಅವನು 

ನನ್ನೊಳಗೆ ಮನೆ ಮಾಡಿಹನು 

ಗೊಲ್ಲರ ಗೊಲ್ಲ . ಮನ ಮೋಹಿತ 

ನೆನೆದೊಡನೆ ಕಣ್ಣ ಮುಂದಿರುವನು 


ಮನ ತಣಿಯದು ಅವನಂದ ಕಾಣಲು 

ಸಖಿಯರೊಡನೆ ಕದ್ದು ಕಾಣುವ 

ತಬ್ಬಿ ಹಿಡಿಯಲು ಮಾಯವಾಗುವ 

ನಿದ್ದೆ ಯಲಿ ಬಂದು ಮುದ್ದಿಸುವ 


ಅವನಾಡಿದ ಸಾವಿರ ಮಾತು 

ಕಿವಿಗಿಂಪಾಯಿತು. ಮನ ತಣಿಯಿತು 

ತನ್ನ ಕೊಳಲನ್ನೇ ರಾಧೆ ಎಂದ

ಹಾಡುವ ರಾಗವೇ ನಾನೆಂದ 


ರಾಧ . ಕೃಷ್ಣ ರೆಂದೂ ಒಂದೇ 

ಜಗವು ಕಾಣದು ನಮ್ಮ ಮುಂದೆ 

ಮೋಹವು ಅಂಟದು ನಮ್ಮನ್ನು 

ಭಕ್ತಿ ಯ ಸುಧೆ ತಬ್ಬಿದೆ ಒಡಲನ್ನು 


ಸುರಭಿ ಲತಾ

ಬಾಲ ಕೃಷ್ಣ

 ಒಂದು ದಿನ ಯೆಶೋಧ ಹಾಗು ಇತರ ಸಖಿಯರು ನದಿಯಲ್ಲಿ ಎಲೆಯ ಮೇಲೆ ದೀಪಗಳನ್ನು  ತೇಲಿ ಬಿಡುತ್ತಿದ್ದರು ..


ಎಲ್ಲರ ದೀಪಗಳೂ  ಮುಂದೆ  ಮುಂದೆ ಸಾಗುತ್ತಾ ಹೋಯಿತು ..

ಆದರೆ ಯೆಶೋಧ ಹಾಗೂ ಕೆಲವರ ದೀಪ ಮುಂದೆ ಹೋಗದೆ ಅಲ್ಲೇ ಸುತ್ತಿ ಸುತ್ತಿ  ಹಿಂದೆ  ಬರುತ್ತಿತ್ತು ..


ಏಕಿರಬಹುದು ಎಂದು ನೋಡಲು ..

ಕೃಷ್ಣ ಒಂದು ಕಡ್ಡಿಯಿಂದ ಎಲ್ಲಾ  ದೀಪಗಳನ್ನು ಹೊರಗೆ ತೆಗೆದು ಇಡುತ್ತಿದ್ದ .


ಯಶೋಧ ಕೇಳಿದಳು " ಮಗು ಕೃಷ್ಣ ಏನುಮಾಡುತ್ತಿರುವೆ ?" 


ಕೃಷ್ಣ ನೆಂದ " ಅಮ್ಮ   ದೀಪಗಳನ್ನು   ಮುಳುಗದಂತೆ ಎಲ್ಲವನ್ನೂ ಹೊರಗೆ ತೆಗೆಯುತ್ತಿದ್ದೇನೆ. ಎಂದ. 


ಯಶೋಧ " ಮಗು ಇಲ್ಲಿ    ಎಷ್ಟೋಂದು ದೀಪಗಳಿವೆ ಎಷ್ಟು ಎಂದು ತೆಗೆಯುತ್ತೀಯಾ  ಎಂದು ನಗುತ್ತಾ ಕೇಳಿದಳು . 


ಕೃಷ್ಣ " ಅಮ್ಮಾ ಎಲ್ಲವನ್ನೂ ಅಲ್ಲದಿದ್ದರೂ ನನಗೆ ಹತ್ತಿರವಿರುವ ಹಾಗೂ ಹತ್ತಿರಬರುತ್ತಿರುವ ದೀಪಗಳನ್ನು ಕಾಪಾಡಬಲ್ಲೆ ಎಂದ ತುಂಟ ನಗು ಬೀರಿದ.  


ಕೃಷ್ಣ ನ ಸದಾ ಜಪಿಸುತ್ತಾ ಅವನ ಸಂಪರ್ಕ ದಲ್ಲಿ ಇದ್ದರೆ  ಅವನೆಂದೂ ಕೈ ಬಿಡಲಾರ ..ನಮ್ಮ ನ್ನು ಭವ ಬಂದನ ಗಳಿಂದ ರಕ್ಷಿಸುವ 


ಸುರಭಿ ಲತಾ

ಮಳೆ ಮಳೆ

 ಮುಗಿಲಲಿ ಕಪ್ಪು ಮೋಡ 

ಎದೆಯೊಳಗೆ ಸಣ್ಣ ದುಗುಡ 

ಪಟ ಪಟ ಹನಿ ಉದುರಿ 

ಮಳೆ ಬಂತು ಗುಡುಗು ಚೆದರಿ 


ನೆಂದು ಬಂದಾ ಇನಿಯ 

ಚಳಿಕಾಯಲು ಸನಿಹ 

ಮೊಗ್ಗರಳಿ ಹೂವಾದ ಸಮಯ 

ತಂಪು ಗೊಂಡಿತು ಹೃದಯ 


ಬಾನಲ್ಲಿ ಬಿಳಿ ಮಿಂಚು 

ಕಣ್ಣಲ್ಲಿ ಒಲವ ಸಂಚು 

ಬಿಗಿದಪ್ಪಿ ಒಡಲನು 

ಸೆಳೆದನು ಬಾಲೆಯನು 


ಸತ್ಯವ ಅರಿತೆ ನಾನಿಂದು 

ಬಯಸುವರೇಕೆ ಖುತುಕಾಲವೆಂದು 

ಬೀಸುವ ತಂಪು ಗಾಳಿಗೆ 

ಹದವಾಗುವುದು ಬಯಕೆ 


ಸುರಭಿ ಲತಾ

ಹೆಣ್ಣು

  ಎದೆಯಲೊಂದು ಚಿಗುರೊಡೆದ ಅಸೆಗೆ 

ಮುಗುಳು ನಗೆಯ  ಸಹಕಾರ 

ಮನದ ಪುಟಗಳ ತಿರುವಿ ಹಾಕಲು ಬಂದ 

ಹೃದಯದ ಸಾಹುಕಾರ 

ಮುತ್ತ ಕೊಟ್ಟು ಮೆದುವಾಗಿಸಿದ ಒಡಲನ್ನು 

ಕಸಿ ಮಾಡಿ ತಾಯ್ತನದ ಸುಖವ ಉಣಿಸಿದ 

ಕೂಸು ಕೊಟ್ಟು, ಹದವಾಗಿಸಿದ ತನುವನ್ನು 

ಸೌಂದರ್ಯಕೆ ಸಾಟಿ ಇಲ್ಲದ ಬೆಲ್ಲದ ಹಣ್ಣು 

ಸಾರ್ಥಕತೆ ಯಲ್ಲಿ ನಿಟ್ಟುಸಿರಿನ  ನೆಮ್ಮದಿ ಕಂಡು

 ಕೊಂಡ ಗೃಹಿಣಿ ಪಟ್ಟ ವೇರಿದ ಹೆಣ್ಣು 

ಸುರಭಿ ಲತಾ 

ಮನದ ಮಾಮರ

 #ಮನದ ಮಾಮರ#


ಮನದ ಮಾಮರ 


ಎದೆಯ ತುಂಬಾ ಹೊಸ ಕನಸು 

ಬಯಸಿದೆ ಏನನ್ನೊ ಮನಸು 

ಹುದುಗಿದ ಆಸೆಗಳ ಚಿತ್ತಾರ 

ಬೆಳೆದು ನಿಂತಿದೆ ಮಾಮರ 


ಹಸಿರೆಲೆಗಳ ನಡುವೆ ಹೂವು 

ಹೂವ ನಡು ನಡುವೆ ಮಾವು 

ರುಚಿಯ ಸವಿಯುವ ಸರಧಾರ 

ಬರುವ ನೆಂದು ಕಾದಿದೆ ಮಾಮರ 


ಮಾಗಿದ ಹಣ್ಣು ದೇವನಿಗೆ ಅರ್ಪಿತ 

ಬೆಳೆದು ನಿಂತ ಹೆಣ್ಣು ಬಾಯಿಗೆ ಚರ್ಚಿತ 

ಒಪ್ಪ ಓರಣವಾಗ ಬೇಕು ಕೃಷ್ಣನ ಪಾದುಕೆಗೆ 

ಮೆಚ್ಚಿ ನಡೆಯ ಬೇಕು ಹೆಣ್ಣು ಇನಿಯನಿಗೆ 


ಮಮತೆ ಬಳ್ಳಿ ಹರಡುತಲಿ ತನುವ 

ಒಪ್ಪಿಸಲೇನು ತನ್ನತನದಿ ಚೆಲುವ 

ಕರ್ತವ್ಯ ಮೆರೆದ ಜನ್ಮ ಅಮರ  

ಹೆಣ್ಣಾಗಿ ಹಣ್ಣಾಗಿ ಬೆಳೆದಿದೆ ಮಾಮರ 


ಸುರಭಿ ಲತಾ

ಮನವಿ

 ನಿಮ್ಮ ನಿಮ್ಮ ಘನತೆ ಗಳ ಉಳಿಸಿಕೊಳ್ಳಿ 

ಅದಕ್ಕೆ ಮುಂಚೆ ಜನಗಳ ನೋವು ಒಮ್ಮೆ ಕೇಳಿ

 

ಹಿಂದು,ಕ್ರೈಸ್ತ, ಮುಸಲ್ಮಾನ, ನಿಮ್ಮ ಮಂದಿರಗಳನ್ನ ಉಳಿಸಿ ಕೊಳ್ಳಿ 

ಅದಕ್ಕೆ ಮುನ್ನ ಧರೆಗೆ ಉರುಳುತಿಹ ಬಡವರ ಗುಡಿಸಲ ಉಳಿಸಿ 


ಕೈ ಆಗಸದೆತ್ತರ ಚಾಚಿ ಕಾಣದಿಹ ದೇವರ ಕರೆಯಿರಿ ಬೇಡ ಎಂದವರಾರು 

ಬಡವರ ಹಸಿವಿನಿಂದ ಚಾಚಿದ ಕೈಯ್ಯನೊಮ್ಮೆ 

ತುತ್ತಿನಿಂದ  ತುಂಬಿ 


ಅಂದು ಸತ್ತ ಹೆಣಗಳ ಮೇಲೆ ರಾಶಿ ರಾಶಿ ಹೂವ ಸುರಿದಿರಿ,ಮೆರವಣಿಗೆ ಮಾಡಿದಿರಿ 

ಇಂದು ರೋಗದಿ ನರಳಿ ಜೀವ ಉಳಿಸೆಂದು ಬೇಡಲು,ಹಾಸಿಗೆ ,ಸ್ಥಳ ವಿಲ್ಲ ವೆನ್ನುವಿರಿ 


ಸಾವಿರ ಮಂದಿ ಜನರ ನಡುವೆ ದರ್ಪದಿ ಮೆರೆದವರೆಲ್ಲರೂ 

ಉಸಿರು ನಿಂತಾಗ ನಾಲ್ಕು ಜನ ದೇಹವನ್ನು ಹೊರಲು ಹಿಂದೆಗೆಯುತಿಹರು 


ಇಷ್ಟಾದರೂ ಮೇಲು,ಗೀಳು ಜಾತಿ ಮತದ ಅಹಂಕಾರ ಅಡಗಿಲ್ಲ 

ಇನ್ನೂ ಎಂತಹ ಕಠಿಣ ಪರಿಸ್ಥಿತಿ ಶಾಪವಾಗಿ ಕೊಡಬೇಕೊ ಆ ದೇವನೇ ಬಲ್ಲ 


ಸುರಭಿ ಲತಾ 

ಶನಿವಾರ, ಜೂನ್ 5, 2021

ಕಾತರಿಕೆ

 ಫೇಸ್ ಬುಕ್ -- ಕಥೆ 

********** *****

ವಯಸ್ಸಾದ ಇಬ್ಬರು ಮುದುಕರು ಲ್ಯಾಪ್‌ಟಾಪ್ ಅಂಗಡಿಗೆ ಒಂದು ಹೊಸದಾದ ಲ್ಯಾಪ್‌ಟಾಪ್ ಕೊಂಡು ಕೊಳ್ಳಲು ಬಂದರು . 


ಲ್ಯಾಪ್‌ಟಾಪ್ ಕರೀದಿಸಿ ಅಲ್ಲೇ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡು . ಒಬ್ಬ ಹುಡುಗನ ಬಳಿ ಬಂದರು . 


ಅವನಲ್ಲಿ ಷೇಸ್ ಬುಕ್ ಅಕೌಂಟ್ ಮಾಡಿಕೊಡಲು ಕೇಳಿಕೊಂಡರು . ಹುಡುಗ ನಗುತ್ತಲೇ ಒಪ್ಪಿಕೊಂಡ . 


ಹುಡುಗ : ಹೇಳಿ ತಾತ ಯಾವ ಹೆಸರಲ್ಲಿ ಅಕೌಂಟ್ ಮಾಡಲಿ ?? 

ತಾತ :ಯಾವುದಾದರೂ ಒಂದು ಒಳ್ಳೆಯ ಹುಡುಗಿ ಹೆಸರು ಇಡು ಮಗು . 


ಹುಡುಗ : fake  ಅಕೌಂಟಾ ?? 


ತಾತ : ಹೌದು ಮಾಡು ಹೇಳುತ್ತೇನೆ . ಹುಡುಗ : ಪ್ರೂಷೈಲ್ ನಲ್ಲಿ ಯಾವ ಫೋಟೋ ಹಾಕಲಿ ? 

ತಾತ ; ಒಳ್ಳೆಯ ಹೆಸರು ಮಾಡಿರುವ  ಚೆನ್ನಾಗಿರುವ ಒಂದು  ಹಿರೋಇನ್ ಫೋಟೋ ಹಾಕು .. 

ಈಗ ಒಳ್ಳೊಳ್ಳೆಯ ಗೆಳೆಯರಿಗೆ ಗೆಳೆತನದ ಕೋರಿಕೆ ಕಳಿಸು . 


ನಾನು  ಹೇಳಿದ  ಹೆಸರಿಗೂ ಕಳಿಸು 


ಹುಡುಗ ಹೇಳಿದಂತೆಲ್ಲಾ ಮಾಡಿ ಹೋದ ..

ಒಂದು ಫೇಸ್ ಬುಕ್ ಅಕೌಂಟ್ ರೆಡಿ ಯಾಯಿತು . 


ಹುಡುಗ ; ಈಗ ಹೇಳಿ ತಾತ ಯಾಕೆ ಈ fake  ಅಕೌಂಟ್ ?? 


ಆ ಮುದುಕರ ಕಣ್ಣಿನಿಂದ ಕಣ್ಣೀರು ಬರಲಾಯಿತು . 


ತಾತ : ನೋಡು ಕಂದ ನನಗೆ ಒಬ್ಬನೇ ಮಗ ಅವನಿಗೆ ಮದುವೆ ಯಾದೊಡನೆ ನಮ್ಮನ್ನು ದೂರ ಮಾಡಿದ ಕೇಳಿದರೆ ಅವನ ಹೆಂಡತಿಗೆ "ನೀವೆಂದರೆ ಇಷ್ಟ ಇಲ್ಲ ಅವಳಿಗೆ ಸೇವೆ ಮಾಡಲು ಸಾದ್ಯವಿಲ್ಲ ನೀವು ಇದೇ ಮನೆಯಲ್ಲಿ ಇರಿ ಎಂದು ಇಲ್ಲೇ ನಮ್ಮನ್ನು ಬಿಟ್ಟು ಹೋದ . 


ಅವನಿಗೆ ಈಗ ಎರಡು ಮಕ್ಕಳು . ಒಂದು ಗಂಡು , ಹೆಣ್ಣು .ಆ ಮೊಮ್ಮಕ್ಕಳನ್ನು ನೋಡುವ ಆಸೆ ಆದರೆ ನಾವು ಹೋಗುವಂತೆ ಇಲ್ಲ .. 


ಪೇಸ್ ಬುಕ್ ನಲ್ಲಿ  ಎಲ್ಲರೂ ಅವರವರ   ಕುಟುಂಬ ಸದಸ್ಯ ರ   ಪಟಗಳನ್ನು ಹಾಕಿರುತ್ತಾರೆ ಎಂದು ಯಾರೋ ಹೇಳಿದರು      ನಾವು   ಅಕೌಂಟ್   ತೆಗೆದರು ಯಾರು ನಮ್ಮ ನ್ನು  friend ಮಾಡಿಕೊಳ್ಳುವುದಿಲ್ಲ .


 ಹಾಗಾಗಿ  ಬೇರೆ ಹೆಸರಿನಲ್ಲಿ   ಮಾಡಿದರೆ 

ಮಗ ಮೊಮ್ಮಕ್ಕಳು  friend  ಮಾಡಿಕೊಳ್ಳುತ್ತಾರೆ  . ಆಗ ಅವರ ಫೋಟೋ  ನೋಡಿಯಾದರೂ ಸಂತಸ ಕೊಳ್ಳಬಹುದು   ಎಂದು ಅಷ್ಟೇ   ಮಗು . 


ಎಂದು ಕಣ್ಣೀರು ಸುರಿಸಿದರು .. ಅವರ ನೋವು ನೋಡಿ  ಆ ಹುಡುಗನ  ಮನ   ಕರಗಿತು  ತಾನು ಅವರಿಗೆ  friend ಆದ . 


ಸುರಭಿ ಲತಾ .

ನೆನಪು

 #samyojane#


ಮತ್ತದೇ ಹಳೆಯ ನೆನಪಿನ ಸುರಳಿ 

ಸುತ್ತಿ ಸುತ್ತಿ ಬರುತಿದೆ ಬೆನ್ನು ಹತ್ತಿ 

ಮರೆಯುವಂತಿಲ್ಲ,ನೆನೆಯುವಂತಿಲ್ಲ 

ಬರಡಾಗಿದೆ ಕಣ್ಣೀರು ಬತ್ತಿ 


ಎದೆಯಂಗಳದಿ ಕಲೆತ ಮಧುರ ಭಾವನೆ 

ಕಲ್ಲಾಗಿಹುದು ಹೇಳದೇ ಸುಮ್ಮನೆ 

ತುಟಿಯಂಚಿನ ಕಿರುನಗೆಯು 

ಮರೆಯಲಿ ಮಿಡುಕಾಡಿದೆ ಮೆಲ್ಲನೆ 


ವಸಂತ ಕಾಲಕಿನ್ನು  ಸಮಯವಿದೆ 

ಅದರೊಳಗೆ ಎದೆಕುಂದುವ ಭಯವಿದೆ 

ನೋವುಗಳ ಸರಮಾಲೆ ಸರಿದಂತಿದೆ 

ಹೊಂಬೆಳಕಲಿ ಒಡಲು ಮೀಯಬೇಕಿದೆ 


ಕರೆಯಲೇ ಕಳೆದು ಹೋದ ಸಂತಸ 

ನಲಿಯುವುದೆಂದು ನನ್ನ ಮನಸ( ಸು)

ಕಾತರದಿ ಕಾದಿಹುದು ಕಣ್ಣು ಗಳು 

ಮರೆತು ನಲಿಯಬೇಕಿದೆ  ಪಾದಗಳು 


ಸುರಭಿ ಲತಾ

ಗೆಳೆತನ

 ಒಂದಷ್ಟು ದಿನ ಮಾತಾಡಿದಾಕ್ಷಣ ಅದು ಪ್ರೀತಿ ಅಲ್ಲ ಪರಿಚಯ ಅಷ್ಟೇ. 

ಅಂದ ಅಲಂಕಾರ ಮಾಡಿಕೊಂಡಾಕ್ಷಣ ಅದು ಒಲಿಸುವಿಕೆ ಅಲ್ಲ ,ಅಭ್ಯಾಸ ಅಷ್ಟೇ 


ಕಂಡ ತಕ್ಷಣ ಮುಗುಳು ನಗೆ ಮೂಡಿದರೆ 

ಅದು ಆಕರ್ಷಣೆ ಅಲ್ಲ 

ಅದು ಹಿರಿಯರು ಹೇಳಿಕೊಟ್ಟ ಗೌರವಾನ್ವಿತ ಸಭ್ಯತೆಯ ಲಕ್ಷಣ ಅಷ್ಟೇ 


ಹೊಂದಾಣಿಕೆಗಳು ಇಬ್ಬರಲ್ಲೂ  ಇರಬಹುದು 

ಜೋಡಿ ಯಾಗಬೇಕೆಂದಿಲ್ಲ 

ಪರಸ್ಪರ ವಯಸ್ಸಿನ ಭಾವನೆಗಳ ಸುಂದರ 

ಗೆಳೆತನ ವಷ್ಟೆ 


ಎಲ್ಲೊ ಒಮ್ಮೆ ಮನ ನೊಂದಾಗ ಎದುರಲ್ಲಿ  ಕಣ್ಣ ಹನಿ ಹಾಕಬಹುದು 

ಅದು ಅಸಹಾಯಕತೆ,ಅವಶ್ಯಕತೆ ಅಲ್ಲ 

ಧೈರ್ಯ ತುಂಬುವ ವ್ಯಕ್ತಿ ಮೇಲಿನ ನಂಬಿಕೆ ಅಷ್ಟೇ 


ಅಭಿಮಾನ ಆರು ದಿನ ವಿರಬಹುದು,ಪ್ರೀತಿ ನಾಲ್ಕು ದಿನಕ್ಕೆ ಸಾಯಬಹುದು 

ಗೆಳೆತನ ಬೀಸುವ ತಂಗಾಳಿಯಂತೆ ಸದಾ 

ಹಸಿರಾಗಿ ಮನಸ್ಸಿಗೆ ಹಿತವಾಗುತ್ತದೆ. 


ಕಷ್ಟ ಬಂದಾಗ ಲೆಕ್ಕ ವಿಡದೆ ಹಸ್ತ ಚಾಚಿ ಬೆನ್ನ ತಟ್ಟಿದಾಗಲೆ  ಮನಸ್ಸಿಗೆ ಆನಂದ 

ಸದಾ ನೆರಳಂತೆ ಕಾಯ್ದು ಹದ್ದು ಮೀರದಿದ್ದಾಗಲೇ ಉಳಿಯುವುದು ಸಂಬಂಧ 


ಸುರಭಿ ಲತಾ

ಶಿವ

 ಒಂದಷ್ಟು ನೋವಿನ ಸಂಗತಿ 

ಓಡಿ ಬಂದೆವು ಶಿವ ನೀನೆ ಗತಿ 

ಕಾಲ ಕೋಟ ವಿಷವ ಕುಡಿದವ 

ಕೋಪದಿ ತ್ರಿನೇತ್ರವ ತೆರೆದವ 

ಬಾರೊ ಹರನೆ ನೀಗಿಸು ಬೇಗೆಯ 

ಹಿಂಡುವ ಜೀವವ ಕಾಪಾಡೆಯ


ದಗ ದಗಿಸುತಿದೆ ಕಣ್ಣೀರಲಿ ಜಗವು 

ಕಾಡುತಿದೆ ದೇವ ರೋಗವು 

ನಿಲ್ಲಿಸು ಸಾವಿನ ನರ್ತನವು 

ಸುಡುತಲಿದೆ ದುಃಖದಿ ಎದೆಯು 

ತಂಪಾಗಿಸಿ ಗಂಗೆಯ ಹರಿಸು 

ತೊಡೆದು ಹೋಗಲಿ ಸಕಲ ಪಾಪವು 


ಬೇಡಿದೆ ಮಹಾದೇವ ಬೀರು ಕೃಪಾದುಷ್ಟಿ 

ಆಗಲಿ ಶಾಂತಿ ತುಂಬಿದ ಲೋಕ ಮರುಸೃಷ್ಟಿ 

ಮಕ್ಕಳಲ್ಲವೇ ನಾವು ಮುನಿಸೇಕೆ ನಮ್ಮಲಿ 

ತಂದೆ ತಾಯಿ ನೀನು, ಕರುಣೆ ಇಲ್ಲವೆ ನಿನ್ನಲಿ 

ವರುಷ ಕಳೆಯಿತು ಹರುಷವು ಮರೆಯಾಯಿತು 

ಇನ್ನೆಷ್ಟು ಕಾಲವಯ್ಯ ಈ ಗೋಳು 


ಕರೆದಿದೆ ಆರ್ತನಾದದಲಿ ಭೂ ಲೋಕ 

ನರಕವಾಗಿಸದಿರಿನ್ನು ಸೋಲುವ ಪಾದವ 

ಕರೆದು ಬಿಡು ಕಣ್ಣು ತೆರೆದು ಒಮ್ಮೆ 

ಮುಗುಳು ನಗೆಯ ಸೂಸಿಬಿಡು ಮತ್ತೊಮ್ಮೆ 

ಹರ ಹರ ವೆನ್ನುತಲಿ ಹಾಲಹಲವು ಕರಗಲಿ 

ನಿನ್ನ ಬಕುತಿಯಲಿ ನೆಮ್ಮದಿಯ ದೀಪ ಬೆಳಗಲಿ 


ಓಂ ನಮೊ ಮಹದೀಶ ಓಂ ನಮೊ ಜಗದೀಶ 


ಸುರಭಿ ಲತಾ

ಬಾರದೆ ಕರುಣೆ

 ಮುಕುಂದ ಮಾಧವ ಎಂದು 

ಕೂಗುತ ಬಳಿ ಬಂದೆ 

ಆಲಿಸದೆ ಏಕೆ ಮರೆಯಾಗಿ 

ದೂರಕೆ ಹೋದೆ 


ಅಗ್ನಿಯಲಿ ಬಿದ್ದ ಹುಳುವಂತಾದೆ ಇಲ್ಲಿ 

ಬೇಗೆಯಲಿ ಬೇಯುತಲಿದೆ ನನ್ನೊಡಲು 

ಕಂಡು ಕಾಣದಂತೆ ಕುಳಿತಿಹೆ ಅಲ್ಲಿ 

ಮಿಡುಕಾಡದೆ ಹೋಯಿತೆ ನಿನ್ನ ಕರುಳು 


ಕೂತಲ್ಲಿ ಕೂರಲಾಗದೆ ಬೇಡಿದೆ 

ಅಂದು ಇಂದು ನಿನ್ನನೇ ನಂಬಿದೆ 

ಅರಿಯದವನು ನೀನೇನಲ್ಲ 

ಒಲಿಸುವ ಬಗೆಯ ಅರಿಯದಾದೆನಲ್ಲ 


ತಪ್ಪು ಒಪ್ಪುಗಳು ನಿನ್ನ ಪಾದ ಸೇರಲಿ 

ನಿನ್ನ ಕರುಣೆಯ ನೋಟ ನನ್ನ ಮೇಲಿರಲಿ 

ಅಣು ಅಣುವು ಕಾಣಲು ಬಯಸಿದೆ 

ಬಳಿ ಬರಬಾರದೆ ಕಾದಿಹಳು ಈ ರಾಧೆ 


ಸುರಭಿ ಲತಾ

ತುಂಟಿ

 ತುಂಟಿ 


ತಲೆ ನೀರು ಹಾಕಿಕೊಂಡು ಅಮ್ಮ ಕೊಟ್ಟ ಬಿಸಿ ಹಾಲು ಕುಡಿದು ಆಗ ತಾನೆ ಮಲಗಿದ್ದೆ . 


ಪಾಪು ಸಹನಾ ಅವಳಿಗೂ ಅಮ್ಮ ಸ್ನಾನ ಮಾಡಿಸಿ ಮಲಗಿಸಿದ್ದರು. 


ಎಳೆ ಬಾಣಂತಿ ತಲೆಗೆ ಸ್ನಾನ ಮಾಡಿ ಮಲಗಬಾರದು ದಪ್ಪ ಆಕ್ತಾರೆ ಅಂತ ಹೇಳುತ್ತಲೇ ಇದ್ದರು ನಾನು ರವಿ ಬೆಳಗೆರೆಯವರ ಒಂದು ಕಾದಂಬರಿ ಓದುತ್ತಾ ಹಾಗೆ ಕಣ್ಣು ಮುಚ್ಚಿದ್ದೆ. 


ನನ್ನ ಅಕ್ಕ ಶಾಲಿನಿ ಆಫೀಸ್ ಗೆ ಹೋಗುವಾಗ ಮಗುವನ್ನು ಅಮ್ಮನ ಬಳಿ ಬಿಟ್ಟು ಹೋಗುತ್ತಿದ್ದಳು ಅದು ಮೂರು ವರ್ಷದ ಮಗು ( ಸುಷ್ಮಾ) 


ಸಹನಾ ಮಲಗಿದ ಮೇಲೆ ನಾನೇ ಸುಷ್ಮಳನ್ನು ನೋಡಿಕೊಳ್ಳುತ್ತಿದ್ದೆ.


ಅಂದು ತಲೆಗೆ ನೀರು ಹಾಕಿ ಕೊಂಡಿದ್ದರಿಂದ ಮತ್ತು ಸಾಂಭ್ರಾಣಿ ಹಾಕಿ ಸ್ಟೀಮ್ ಕೊಟ್ಟಿದ್ದರು ಹಾಗಾಗಿ ನಿದ್ದೆ. 


ಸುಷ್ಮಾ ಆಟವಾಡುತ್ತಿದ್ದಳು ಸರಿ ಆಡಲಿ ಅಂತ ನಾನು ಹಾಗೆ ಮಲಗಿದೆ. 

ಅಮ್ಮ ಮನೆ ಕೆಲಸದಲ್ಲಿ ತೊಡಗಿದ್ದರು. 


ಯಾರೋ ಕರೆದಂತೆ ಆಯಿತು ನಿದ್ದೆ ಕಣ್ಣು ಏನು ಅಂತ ಅರೆ ಬರೆ ಕಣ್ಣು ತೆಗೆದು ನೋಡಿದೆ. 


ನಾನು " ಏನಾಯಿತಮ್ಮ " ಅಂದೆ 


ಅಮ್ಮ ನನಗೆ ಬೈಯ್ತಿದ್ದರು " ತಲೆಗೆ ನೀರು ಹಾಕ್ಕೊಂಡು ಮಲಗಬಾರದು ಅಂತ ಎಷ್ಟು ಸಾರಿ ಹೇಳೋದು ನಿಂಗೆ . ನೋಡು ನಿನ್ನ ಮಗುಗೆ ಏನು ಗತಿ ಮಾಡಿದಳೆ ಈ ಸುಷ್ಮಾ" ಅಂದರು 


ನನಗೆ ಗಾಬರಿ ಯಾಗಿ ತಟಕ್ಕನೆ ಎದ್ದೆ . ಪಕ್ಕದಲ್ಲಿ ಯಾವುದೋ ಪುಟ್ಟ ಭೂತ ಮಲಗಿತ್ತು. 


ಪೂರ್ತಿ ಕಣ್ಣು ಉಜ್ಜಿ ನೋಡಿದೆ. ಸುಷ್ಮಾ ಪಾಪ ಅದು ಮಗುವೆ 

ಆಟವಾಡುತ್ತಾ ಮಗುವಿಗೆ ಹಣೆಗೆ ಇಡುವ ಕಾಡಿಗೆ ಕಪ್ಪು ಡಬ್ಬಿ ತೆಗೆದು ತನ್ನ ಎರಡು ಪುಟ್ಟ ಕೈಗಳಿಗೂ ಚೆನ್ನಾಗಿ ಬಳೆದು ಕೊಂಡು 

ನನ್ನ ಪಕ್ಕದಲ್ಲಿ ಮಲಗಿದ್ದ ಪುಟ್ಟ ಮಗು ಸಹನಾ ಮೃ ಕೈ ಮುಖಕ್ಕೆ ಚೆನ್ನಾಗಿ ಬಳೆದಿದ್ದಳು ಎಷ್ಟು ಅಂದರೆ ಬೆಳ್ಳಗೆ ಇರುವ ಮಗು ಒಂದೇ ಒಂದು ಇಂಚು ಸಹ ಬಿಡದೇ ಡಬ್ಬಿಯಲ್ಲಿ ಇರುವ ಕಾಡಿಕೆ ಅಷ್ಟೂ ಬಳೆದಿದ್ದಳು. 


ಆಗ ತಾನೆ ಸ್ನಾನ ಮಾಡಿಸಿ ಮಲಗಿಸಿದ್ದ ಮಗುವಿಗೆ ಹೀಗೆ ಬಳೆದಿದ್ದಾಳೆ ಅಂತ ಅಮ್ಮ ನನ್ನ ಬೈತಿದ್ದರು. 


ನನಗಂತೂ ನಗು ತಡೆಯೋಕೆ ಆಗದೆ ನಕ್ಕು ನಕ್ಕು ಸಾಕಾಯಿತು.


ಅಮ್ಮ ನನ್ನ ಭೈತಿದ್ದರೆ ಪುಟ್ಟ ಸುಷ್ಮಾ ಒಮ್ಮೆ ನನ್ನ ಒಮ್ಮೆ ಅಜ್ಜಿಯನ್ನು ಪಿಳಿ ಪಿಳಿ ಅಂತ ನೋಡುತ್ತಿತ್ತು . 


ನಾನು ಹೋಗಿ ಅವಳನ್ನು ಎತ್ತು ಕೊಂಡು ಮುದ್ದಾಡಿದೆ. ಅಮ್ಮ ಮತ್ತೆ ಸಹನಾ ಳಿಗೆ ಸ್ನಾನ ಮಾಡಿಸಲು ಹೋದರು. 


ಸಹನಾ ಸುಷ್ಮಾ ಜೊತೆ ಜೊತೆ ಬೇಳೆದು ಬಂದವರು ಆ ಪ್ರೀತಿ ವಾತ್ಸಲ್ಯ ಈಗಲೂ ಅವರ ನಡುವೆ ಹಾಗೇ ಇದೆ. ಮುಂದೆಯೂ ಹಾಗೇ ಇರಲಿ ಎಂಬುದು ನನ್ನ ಆಸೆ 


ಸುರಭಿ ಲತಾ

ಮೌನ

 ಸಾಕು ಮಾಡು ಈ ಮೌನ 

ಬೇಡಿದೆ ಮಾಧವ ನನ್ನೀ ಮನ 


ಸಾವು ಬದುಕಿನ ಹೋರಾಟ 

ಅಂತ್ಯ ಗೊಳಿಸು ಈ ಕಾದಾಟ 

ದುಷ್ಟ ತನವು ರಾರಾಜಿಸುತಿದೆ 

ಮುಗ್ದ ಮನಗಳು ನೊಂದಿದೆ 


ದೇವನಿರುವ ನಂಬಿಕೆಯನು 

ಬಿಡದೆ ಪೂಜಿಸುವ ಭಕ್ತನನು 

ಅಲ್ಲ ಗೆಳೆದು ಅವಮಾನಿಸುತಿಹರು 

ಚೋರನೆಂಬ ಬಿರುದು ಕೊಟ್ಟಿಹರು 


ಹಣದ ಆಸೆಗೆ ಮನುಜತನ ಮರೆತು 

ಕಡು ಬಡವರ ಕಾಲ ಕಸದಂತೆ ಕಂಡರು 

ಕನಿಕರ ಬರದೆ ನಗುವೆಯಾ ಕೂತು 

ಮೌನ ಸರಿಸಿ ಹರೆಸೆಯಾ ಬಳಿ ಬಂದು 


ಕೈಯ್ಯ ಹಿಡಿದು ಸಂತೈಸಬಾರದೇ ಮುಕುಂದ 

ಮನವು ಸಂತಸ ಗೊಳ್ಳಲಿ  ನಿನ್ನಿಂದ 

ಮುನಿಸು ತೊರೆದು ಮುದದಿ ಬೆರೆತು 

ಹರಿಸು ಕರುಣೆಯಲಿ ಮುಗುದೆಯ 


ಸುರಭಿ ಲತಾ

ತುಳಸಿ

 ಮನೆಯ ಮುಂದೆ ತುಳಸಿಯ ಇಡಲು 

ಮನವು ಆಗುವುದು ಹರುಷದ ಕಡಲು 


ಮುಂಜಾನೆ ಸಂಜೆ ಹೊತ್ತಿಸಿ ದೀಪ 

ಕಳೆವಳು ತಾಯಿ ಎಲ್ಲರ ಪಾಪ 


ಇರಬೇಕು ಹಸಿರು ಎಲ್ಲೆಡೆಯಲ್ಲಿ  

ತಂಪು ಗಾಳಿ ಸುಳಿಬೇಕು ಒಡಲಲ್ಲಿ  


ಪುದೀನ ಕೊತಂಬರಿ ಕರಿ ಬೇವು 

ಇದ್ದರಂತೂ ಬಲು ಚೆಂದ ಮಾವು 


ಇದ್ದಂತೆ ವಿದ್ಯುತ್ ದ್ವೀಪ ರಸ್ತೆ ಗಳಲ್ಲಿ 

ನೆಡಬೇಕು ಗಿಡಗಳು ಮನೆ ಅಂಗಳದಲ್ಲಿ 


ಬೀದಿ ಬೀದಿಗಳಲ್ಲಿ ಮರಗಳು 

ನೋಡಲು ತಂಪಾಗುವುದು ಕಣ್ಣುಗಳು 


ಪುಟ್ಟ ನಲಿವ ಮಕ್ಕಳಂತೆ 

ನೆಟ್ಟ ಸಸಿಗಳು ಮನೆಯ ಕೂಸಂತೆ 


ಬೆಳೆಸೋಣ ದಿನಕ್ಕೊಂದು ಸಸಿ 

ಬನ್ನಿ ಸೇರಿ ಮಾಡೋನ ಕಸಿ 


ಸುರಭಿ ಲತಾ

ಬರವಣಿಗೆ

 ಪ್ರಾಸ , ಪ್ರಾಸ ಕೊಡುತಿದೆ ತ್ರಾಸ 

ಬೇಕಿಲ್ಲ ಅದರ ಸಹವಾಸ 

ಹಾಗೇ ಬರೆಯ ಯತ್ನಿಸುವೆ ಇತಿಹಾಸ  ;) 


ಮನದ ಭಾವನೆಗಳಿಗೇಕೆ ಕಟ್ಟು ಪಾಡು 

ಬರೆದರೆ ಸಾಲದೇ ನೀತಿ ಹಾಡು 

ಹಾಡುವೆ ಮನವಿಟ್ಟು ನೀ ಕೇಳು 


**************************


ಅಂಕೆ ಇರದ ಪ್ರೀತಿಗೆ  

ಶೆಂಕೆ ಯಾತಕೆ 


ಬಳಿ ಇರದ ಮುಖಕೆ 

ಪರದೇ ಯಾತಕೆ 


ಮುಚ್ಚಿಡಲು ಶ್ರೀ ಗಂಧ 

ಬರದೇ ಸುಗಂಧ ? 


 ಬಚ್ಚಿಡಲು  ನೋವು 

ಸುಡುವುದು ಕಾವು 

*******************


ಎತ್ತಣ ಮಾಮರ 

ಎತ್ತಣ ಕೋಗಿಲೆ 


ಎಲ್ಲಿಯ ಲತೆ 

ಎಲ್ಲಿಯ ಕವಿತೆ 


ನಿಮಗೆ ನನ್ನ ಕೃತಜ್ಞತೆ   

******************


ಸುರಭಿ ಲತಾ

ಕೆಂದಾವರೆ

 ಬೇಕಿಲ್ಲ ನಾ ನಿನಗೆ 

ನೆಪದ ಮಾತೇಕೆ 

ಕಾಯುವಿಕೆ ನನಗೇನೂ 

ಹೊಸದಲ್ಲ . 

ನಿನ್ನಿಂದ ನೋಯುವುದೂ 

ತಪ್ಪಿಲ್ಲ 

ಆದರು ಈ ಹಾಳು ಮನಸು 

ಮಾತು ಹೇಳುತ್ತಿಲ್ಲ 


ಸಾವಿರ  ಹೂಗಳ ಮದ್ಯೆ 

ಕೆಂದಾವರೆಯೇ ನನಗಿಷ್ಟ 


ನೂರಾರು ಬಣ್ಣ ಗಳಿದ್ದರೂ 

ಬಿಳಿಯ ಬಣ್ಣದ ಮೇಲೇ ಒಲವು 


ಈ ಬಯಕೆಗಳೇ ವಿಚಿತ್ರ 

ಆ ಕೃಷ್ಣ ನೆಂದ ಮೋಹಬಿಡು ..

ಕಾಮಬಿಡು ,ಆಸೆ ಬಿಡು , 

ಎಲ್ಲಾ ಬಿಡುವನೇನೋ ನಾನು 

ಆದರೆ 

ಹೆಬ್ಬಾವು ಬಳಸಿದಂತೆ 

ಬಂದಿಸಿದೆಯಲ್ಲಾ ನೀನು , ನಿನ್ನ ನೆನಪು , ಹೇ ಹುಡುಗ ಮರೆಯಲಿ ಹೇಗೋ ನಾನು ?


ನೋವಲ್ಲೂ ಹಿತಕಾಣುವ ಚಟ 

ರೂಡಿಸಿಕೊಂಡ ಈ ಮನವನ್ನು 

ದಾರಿಗೆ ತರುವುದು ಹೆಗೋ ?? 


ಮರೆಯಲು ಯತ್ನಿಸಿದಾಗಲೆಲ್ಲಾ 

ಹುಚ್ಚು ,ಹೆಚ್ಚಾಗಿ ಬಡ ಬಡಿಸಿದೆ 

ನಿನ್ನ ಹೆಸರನ್ನೇ ..


ಆಗದು ಕಣೊ , ವ್ಯರ್ಥ ಪಯತ್ನ 

ಪಟ್ಟು ..ಸಾವೇ ಪ್ರಿಯವಾಯಿತು 

ನೀನೋ ಕಲೆಗಾರ , ಇಂಚಿಂಚೂ 

ನನ್ನ ಮನ ಕದ್ದ ಚೋರ , 

ಅದೇನು ಸುಖವೋ ಕಾಣೆ 

ಈ ವಿರಹದಲ್ಲಿ 


ನನಗೂ ಗೊತ್ತು ಇದೇ ಭಾವ ನಿನ್ನಲ್ಲೂ  ಇದೆ 

ನಿನ್ನ ಅಸಹಾಯಕತೆ ಕಂಡೆ 

ಮನದಲ್ಲೇ 


ಬೀಸುವ ತಂಗಾಳಿಯಲ್ಲಿ ನೀ ಬಿಟ್ಟ 

ನಿಟ್ಟುಸಿರೇ 

ಸೋಕಿತು  ನನ್ನೆದೆ ..ಆಗಲೇ ನಾ ನಿನ್ನ 

ಅರಿತೆ 


ಸುರಭಿ ಲತಾ

ಅಮ್ಮ

 #samyojane#

 ಹೆಸರು ಬೇರೆ ಯಾದರೇನು 

ಉಸಿರು ಕೊಟ್ಟ ಮಾತೆ ನೀನು 

ಮಧುರ ನುಡಿಗಳಿಂದ ಹಾಡಿ 

ಪ್ರೀತಿಯಿಂದಲಿ ಮುದ್ದು ಮಾಡಿ 

ಮಡಿಲಲಿ ಮಲಗಿಸಿದ ತಾಯಿ 

ಕಾಣುವ ದೇವತೆ ನೀನು ಮಾಯಿ 


ನೂರು ನೋವ ಮರೆಸಿ ನನ್ನ 

ಮೆರೆಸಿದವಳು,ಮರೆವೆನೇನು ನಿನ್ನ 

ಕರೆ ಕರೆದರೂ ಬರದ ಮಾಧವನ 

ನಿನ್ನ ಕಣ್ಣಲ್ಲೆ ಕಂಡೆ ಕೇಶವನ 

ತಾಯಿಗಿಂತ ದೇವ ಬೇರೆ ಇಲ್ಲ

ಸಂತಸ ನಿನ್ನ ನೆನದಾಗಲೆಲ್ಲ 


ಜನ್ಯ ಜನ್ಮಕು ತಾಯಿ ಮಮತೆ 

ನೀಗಿಸುವುದಲ್ಲವೆ ಎಲ್ಲಾ ಕೊರತೆ 

ಕೊರಗು ಒಂದು ತಾಯಿ ನನಗೆ 

ಖುಣವ ತೀರಿಸಲಿ ಹೇಗೆ ನಿನಗೆ 

ನಿನ್ನೊಲುಮೆಯ ಸಿಹಿ ಜೇನಿಗೆ 

ಹೊದಿಕೆ ಹಾಕಲೇ ಬಾನಿಗೆ 


ಸುರಭಿ ಲತಾ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...