ಶುಕ್ರವಾರ, ಆಗಸ್ಟ್ 6, 2021

 ಮೆಹಂದಿ 


ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ.


ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್ಟ ವಿಲ್ಲ !? 


ಮೆಹಂದಿ ಹಾಕಿಕೊಳ್ಳಲು ಕಾಲ ಸಮಯ ನಿಯಮವೇನೂ ಇಲ್ಲ. ಎಲ್ಲಾ ಕಾಲದಲ್ಲೂ ಹಾಕಿಕೊಳ್ಳಬಹುದು. 


ಬೆಸಿಗೆ ದಗೆಗೆ ಮೈ ಬಿಸಿ ಹೆಚ್ಚು ಇರುತ್ತದೆ. ನಮಗೆ ಆಗ ತಂಪು ಕೊಡುವ ಆಹಾರ, ಬಟ್ಟೆ, ಜೊತೆಗೆ ಕೆಲವು ತಂಪು ಮಾಡುವ ವಿದಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. 


ಮೆಹಂದಿ ದೇಹಕ್ಕೆ ತಂಪು ಕೊಡುತ್ತದೆ. ಮೆಹಂದಿ ಜೊತೆಗೆ ನಿಂಬೆರಸ ಬೆರಸಿ ತಲೆಗೆ ಹಚ್ಚಿ ಕೆಲವು ಸಮಯದ ನಂತರ ತಲೆಯನ್ನು ತೊಳೆದು ಕೊಳ್ಳುವುದರಿಂದ ದೇಹವು ತಂಪು ಆಗುತ್ತದೆ ಜೊತೆಗೆ ತಲೆ ಕೂದಲು ಹೊಳಪಾಗುತ್ತದೆ. 


ಕಾಲಿನ ಹಿಮ್ಮಡಿಗಳು ಬಿರುಕು ಬಿಟ್ಟಾಗಲೂ ಮೆಹಂದಿಯನ್ನು ಹಚ್ಚುವುದರಿಂದ ಕಾಲಿನ ಹಿಮ್ಮಡಿಗಳು ಮಾಯವಾಗಿ ಕಾಲಿನ ಅಂದ ಹೆಚ್ಚುತ್ತದೆ. 


ಇನ್ನೂ ಚಳಿಗಾಲ ಬಂದರೆ  ವಾತಾವರಣ ಪ್ರಭಾವ ದಿಂದ ಅನೇಕ ಸೂಕ್ಷ್ಮ ಕ್ರಿಮಿಗಳು ವ್ಯಾಪಿಸುತ್ತದೆ , ಹೊರಗಡೆ ತೇವಾಂಶವಿರುವುದರಿಂದ ಮನೆ ಕೆಲಸಗಳಲ್ಲಿ ನಿರಿನ ಬಳಕೆ ಮಾಡುವುದರಿಂದ ಕ್ರಿಮಿ ಕೀಟಗಳು ದೇಹವನ್ನು ಪಾದಗಳ ಮೂಲಕ ಸೇರುತ್ತದೆ. 


ಮೆಹಂದಿ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಯಾಗಿ ಕೆಲಸ ಮಾಡುತ್ತದೆ. 


ಇನ್ನು  ಶ್ರಾವಣ ಮಾಸ ಬಂದರೆ ಹಬ್ಬಗಳು ಸಾಲು ಸಾಲು. ಹೆಂಗಳೆಯರು ಕುಂಕುಮ ಬಳೆ ಹೂವು ಅಲಂಕಾರ ವಾಗಿ ಧರಿಸಿದರೂ ಕೈ ತುಂಬಾ ಮೆಹಂದಿಯ ವಿನ್ಯಾಸ ಹೆಣ್ಣಿಗೆ ಹೆಚ್ಚು ಸಂತಸ ಕೊಡುತ್ತದೆ. 


ಚಿಕ್ಕ ಮಕ್ಕಳಿಂದ ಹಿಡಿದು ಗೃಹಿಣಿ ಯರು ಹಾಕಿಕೊಳ್ಳುವರು. ಮೆಹಂದಿ ಹಾಕಿಕೊಳ್ಳಲು ಜಾತಿ ಅಡ್ಡ ಬರದು ಎಲ್ಲಾ ಪಂಥದವರೂ ಹಾಕುವರು. 


ಮಾರುಕಟ್ಟೆ ಯಲ್ಲಿ ಕೆಲವೊಮ್ಮೆ ನಕಲಿ ಮೆಹಂದಿ ತಿಳಿಯದೇ ತಂದು ಕೈಗಳಿಗೆ ಬಳಸಿದರೆ ಅದರಿಂದ ತುಂಬಾ ತೊಂದರೆ ಗಳ ಆಗುವ ಸಾಧ್ಯತೆಗಳು ಇರುತ್ತದೆ. 

ಒಳ್ಳೆಯ ಕಂಪನಿ ಮೆಹಂದಿಗಳು ನೋಡಿ ತರಬೇಕಾಗುತ್ತದೆ


ಮಧು ಮಗಳು  ಮೆಹಂದಿ ಇಲ್ಲದೆ ಅವಳ ಅಲಂಕಾರ ಪೂರ್ಣ ವಾಗದು. 


ಮೊದಲೆಲ್ಲಾ ಮೆಹಂದಿ ಎಲೆಗಳನ್ನು ಅರೆದು ಅದನ್ನು ಬಳಸುತ್ತಿದ್ದರು . 


ಈಗೆಲ್ಲ ಪುಡಿಗಳು ಅಥವಾ ಪೇಸ್ಟ್ ಗಳ ರೂಪದಲ್ಲಿ ಸಿಗುತ್ತದೆ 

ಒಟ್ಟಿನಲ್ಲಿ ಭಾರತ ಸಂಸ್ಕೃತಿ ಯ ಒಂದು ಭಾಗವಾಗಿದೆ ಈ ಮೆಹಂದಿ 


ಸುರಭಿ ಲತಾ

ಬುಧವಾರ, ಆಗಸ್ಟ್ 4, 2021

 ಕನಸಿನ ಲೋಕದಲ್ಲಿ ಮನಸುಗಳ ಮಿಲನ

ಭಾವಗಳು ಜೊತೆಗೂಡಿ ಹೃದಯವು ಹಾಡಿದೆ ತನನ


ಮುಧುರ  ನಾದದಲಿ ಪ್ರೀತಿಯ ಸಂಚಲನ

ನಯನಗಳು ಬೆರೆತಾಗ ಆಸೆಗಳ ತೋಮ್ ತನನ


ಮುಗಿಲು ನೀನು, ನವಿಲು  ನಾನು ಜೊತೆಯಾಗಲು

ಸಂಗೀತ  ಸ್ವರ ನಾದವು ಮೂಡಿ  ಬರದೇನು


ನಿನ್ನಲಿ ನಾನಾಗಿ, ನನ್ನಲಿ ನಿನಾಗಿ ಬೆರೆತಿರಲು ಒಂದಾಗಿ

ಬೇರೇನೂ ಬೇಕಿಲ್ಲ, ಪ್ರಣಯವೇ ಬದುಕೆಲ್ಲ


ರಾಗಗಳು ಅನುರಾಗವಾಗಿ, ಮೊಗ್ಗರಳಿ ಹೂವಾಗಿ

ಗಮಿಸಲಿ ದಮನಿ ದಮನಿ ಯಲಿ ಸ್ಥಿರವಾಗಿ


ಹಾಡು ಬಾ, ಕೂಡು ಬಾ ಜಗದ ಚಿಂತೆ ಮರೆತು

ನಲಿಯುವ, ಹಾಡುವ   ಒಂದಾಗಿ ಬೆರೆತು


ಮೌನವ ಸರಿಸಿ ಮುದ್ದಾಡು ನನ್ನ  ಬಳಸಿ

ಅಧರಗಳೆರಡು ಕೂಡಲು ತುಂಬುವುದು ಒಲವ ಕಡಲು


ಸುರಭಿ  ಲತಾ 




ಭಾನುವಾರ, ಜುಲೈ 18, 2021

 ಕನಸುಗಳ ಹೊಲಿದೊಲಿದು ಇಟ್ಟೆ 

ಮಣ್ಣಿನ ಮುದ್ದೆಯ ಶಿಲೆಯಾಗಿಸಿ ಕಾದೆ 

ಜೀವವ ತುಂಬಿ ಮಮತೆಯ ಸುರಿದೆ 

ಜೇನ ಹನಿ ಕೈಗೆ ಸಿಗುವ ಮುನ್ನ 

ಕದ್ದು ಹೋದನೆ ಮುದ್ದು ಮಗನ 


ಕಡಿ ಕಡಿದು ಬೆಣ್ಣೆಯ ತೆಗೆದೆ 

ಕುಡಿಗಾಗಿ ಕಣಜವ ತುಂಬಿದೆ 

ಮರವಾಗಿ ಹಸಿರು ಹಸನಾಗಿಸಿದೆ 

ಸಿಹಿಯಾದ  ಹಣ್ಣು ಕೊಡುವ ಮುನ್ನ 

ಕದ್ದು ಹೋದನೆ ಮುದ್ದು ಕಂದನ 


ರಕ್ತ ಮಾಂಸಗಳ ಹಂಚಿ ಕೊಟ್ಟ ತಾಯಿಗೆ 

ಕರುಳ ಹಿಂಡಿ ಜಗಕೆ ತೋರಿದ ಬಳ್ಳಿಗೆ 

ವಿಧಿಯ ಅಟ್ಟ ಹಾಸದ ನಗೆಗೆ 

ಏನೆಂದು,ಹೇಗೆಂದು ಸಂತೈಸಲಿ ಕೊನೆಗೆ 

ಕದ್ದು ಹೋದದೇಕೆ ಮುದ್ದು ಮಗನ 


ಮುಪ್ಪಿನಲಿ ಕಣ್ಣು ಮಂಜಾಗುವ ವೇಳೆ 

ಬೆಳಕಾಗಿ ದಾರಿ ತೋರವ ಬಗೆ ಹೇಗೆ 

ಕೂಸು ಮಣ್ಣಿನಲಿ ಕಸವಾಗಿ ಹೋಗಿರಲು 

ಬದುಕು ಕಾಣುವುದೆಂತು ಸಂತಸವು 

ಕದ್ದು ಹೋದನೆ ಮುದ್ದು ಕಂದನ 


ಸುರಭಿ ಲತಾ 


 ಹತ್ತಿರ ಕರೆದು ಮೆತ್ತಗೆ ಬಳಿ ಸೆಳೆದು 

ಕೆಣುಕುವುದೇಕೋ ಕಳ್ಳ 

ಬಳಸುತ ನಡುವ ನಗುವುದೇಕೋ 

ಏನೂ ಅರಿಯದವನಂತೆ ಮಳ್ಳ 


ಕರಗಿಸುತ ಮನವ,ಹಿಡಿಯುತ ಕರವ 

ಬರದಿರು ಬಳಿ ಸರಿಯುತ 

ನಿನ್ನ ಬಲ್ಲೆ ,ಒಲಿಯನು ನಿನ್ನಲಿ 

ಕಾಡದಿರು ಬೇಡುವ ಕಣ್ಣಲಿ 


ಮನಸು ಸದಾ ಸಖಿಯರಲ್ಲಿ 

ನೆಪ ಮಾತ್ರ  ನಿನಗೆ ನಾನಿಲ್ಲಿ 

ಬಳಿ ಇದ್ದಾಗ ನಿನ್ನ ತುಂಟಾಟ 

ಬಿಟ್ಟು ಹೋಗಲು ಪೇಚಾಟ 


ಭುವಿ ಆಕಾಶದಾಣೆ ನೀನೇ 

ನನ್ನ ಜೀವ ಕೇಳೇ ನನ್ನಾಣೆ 

ತಪ್ಪು ಗಳ ಬದಿಗೆ ಒತ್ತಿ 

ಕ್ಷಮಿಸೆನ್ನ ಮನದ ಒಡತಿ 


ಹರಿದಂತೆ ನದಿಯ ನೀರು 

ಬಂದು ಹೋದರು ಗೆಳತಿಯರು 

ಸಾವಿರಾರು,ನಿಂತೆ ಮನದಲ್ಲಿ 

ರಕ್ತದ ಕಣ ಕಣದಲ್ಲಿ 


ನೀನೇ ನನ್ನ  ಜೀವ 

ಅರಿಯೇ ನನ್ನ ಮನವ 

ಕೊಡು ಸಿಹಿಯಾದ ಒಲವು 

ತೋರು ಅರಳುವ ಮೊಗವು 

ಸುರಭಿ ಲತಾ  :)

ಹೃದಯ ಆಲಯ

 ನನ್ನ ಎದೆಯ ಶೃತಿಯಲ್ಲಿ 

ಹೃದಯದ ಲಯದಲ್ಲಿ 

ಹಾಡು ಬಾ ನೀ ಕೋಗಿಲೆ 

ಕೇಳಿತಾ ಮರೆವೆ ನಾನಿಲ್ಲೆ 


ಒಂದು ಪದವು ನೂರು ಭಾವಗಳಾಗಿ 

ಅದು ಹಾಡಾಗಲಿ 

ಒಂದು ಜನ್ಮವು ಹತ್ತು ಜನ್ಮಗಳಾಗಿ 

ಅದು ಅನುಬಂಧ ವಾಗಲಿ 


ಒಲವಿನ ಮಾತುಗಳೆ ದಾರವಾಗಿ 

ಪ್ರೀತಿಯೇ ಹೂಗಳಾಗಿ 

ಒಟ್ಟುಗೂಡಿ  ಹಾರವಾಗಲಿ 

ಅದು ದೇವನಿಗೆ ಒಪ್ಪವಾಗಲಿ 


ಪ್ರತಿ ರಾತ್ರಿಯು ಕನಸಾಗಿ 

ನಿಧಿರೆಯಿಂದ   ಏಳಿಸಲಿ 

ಮಗುವಂತೆ ಬಳಿ ಸಾರಿ 

ನನ್ನ ಮಡಿಲ ಸೇರಲಿ 


ಪ್ರೀತಿಯಲಿ ಜೀವಗಳೊಂದಾಗಲಿ 

ಅಳಿಸದಂತೆ ಸ್ಥಿರವಾಗಲಿ 


ಸುರಭಿ ಲತಾ

ಚಿಂತೆ

 ಕೂತಲ್ಲೆ ಕೂತೆ ಮನದಲ್ಲಿ ಕಾಡುವ ಚಿಂತೆ 

 ಬೆರೆತು ನಲಿದ ಮಧುರ ನೆನಪುಗಳ ಕಂತೆ 

 ಬಂತೇಕೆ ಆಶಾಡ ನಮ್ಮಿಬ್ಬರ ನಡುವೆ 

ಬಯಕೆ ಮೂಡಿರಲು ಕೆನ್ನೆಯಲಿ ಮೊಡವೆ 


ನವ ವಧುವ ಕೆಣಕಿ ಕೆಂಪಾಗಿಸಿದ ಗೆಳತಿಯರು 

ಸಂಸಾರದಲ್ಲಿ ಮಿಂದೆದ್ದ ಒಡತಿಯರು 

ನೂರೆಂಟು ಅನುಭವದ ಮಾತುಗಳು 

ಎದೆಯಲ್ಲಿ ಮೂಡುವಂತೆ ತೂತುಗಳು 


ಒಪ್ಪಿ ಅಪ್ಪಿದ ಮೇಲೆ ಅನುಮಾನ ವೇತಕೆ 

ಪ್ರೀತಿಯೆ ನಮ್ಮಿಬ್ಬರ ಬಾಳಿನ ಹೊದಿಕೆ 

ಬಣ್ಣದ ಕನಸುಗಳಲಿ ತುಂಬಿರಲು ಕಣ್ಣುಗಳು 

ಕಳೆಯುವುದೆಂದೋ ವಿರಹದ ಈ ದಿನಗಳು 


ಮುಂಬಾಗಿಲಿನವರೆಗೂ ಸುಮ್ಮನೆ ನಡಿಗೆ 

ಸಿಹಿಯ ಒಪ್ಪಿಸಿದೆ ಮಡಿಯುಟ್ಟು ಬೇಡಿಕೆ 

ಮಬ್ಬುಗತ್ತಲ ಮಂದ ದೀಪದಲಿ 

ತೇಲಿರಲು ಕೈ ಹಿಡಿದು ನಡೆದ ನೆನಪಲ್ಲಿ 


ಶಬರಿಯಂತೆ ಕಾದಿಹೆನು ಶ್ರಾವಣ ಬರುವಿಕೆಯಲಿ 

ತಿಂಗಳು ಕಳೆವುದರೊಳಗೆ ಚಿಗುರೊಡೆವ ಬಯಕೆಯಲಿ 

ನಯನಗಳಲಿ ನೂರು ಬೆಳಕಿನ ಕಿರಣಗಳು 

ಮಿನುಗುವುದೆಂದೋ ಬೆಳದಿಂಗಳು 


ಸುರಭಿ ಲತಾ

ಶನಿವಾರ, ಜುಲೈ 17, 2021

ಕೈಷ್ಣ

 ಅಂಗಳದ  ಸುತ್ತ ಸಖಿಯರು 

ನಗುತ ಪಾಡುತ ನಲಿದಿಹರು

ನನ್ನ ಮನ ನೆನೆಯುತಿದ್ದದ್ದು 

ನಿನ್ನನೇ  ಮಾಧವ 


ಮೈ ನವಿರೇಳಿಸುವ ರಾಗಗಳು 

ದುಂಬಿಯ ಝೇoಕಾರಗಳು

ಮನ ತಣಿಸುವ ಮೋಹಕ ಪುಷ್ಪಗಳಿದ್ದರೀನು 

ಬಯಸುತಿದ್ದದ್ದು ನಿನ್ನನೇ ರಾಘವ 


ಮನ ತುಂಬಾ , ಕಣ್ಣು ತುಂಬಾ 

ನೀ ಇರುವಾಗ , ಯಾವ ಸೋಖ್ಯವೂ

ರುಚಿಸದು, ಮನ ಬಯಸುತ್ತಿದ್ದದ್ದು 

ನಿನ್ನನೇ  ಕೇಶವ 


ನೀ ನಿಲ್ಲದ ರಾಗ ತoಪೆನಿಸದು  

ನೀ ಇರದ ಪುಷ್ಪ ಸುಗಂಧವೂ 

ಸವಿ ಇರದು, ನೀನಿಲ್ಲದೆ    ಏನಿದ್ದರೇನು 

ಏನೊಂದೂ ರುಚಿಸದು ಕೃಷ್ಣ 


ಸುರಭಿ ಲತಾ

ಶುಕ್ರವಾರ, ಜುಲೈ 16, 2021

 ನೂರು ಮಾತು ನೂರು ಚರ್ಚೆಗಳು 

ನೀ ಬರೆದ ಸಾವಿರ ಸಾಲುಗಳು 

ಅದರಲ್ಲಿ ನಾ ಆರಿಸಿ ಒಪ್ಪಿಕೊಂಡದ್ದು ನಿನ್ನ ಬರಹಗಳು ಮಾತ್ರವೇ ಹೊರತು 

ಪ್ರೀತಿ,ಪ್ರೇಮ ಎಂಬ ಚದುರುವ ಮೋಡಗಳ 

ನಡುವೆ ನಾ ಬದುಕಲಾರೆ ಗೆಳೆಯ 


ಎದೆಯೇ ಬಗೆದು ಹೊರಹಾಕಿದ ಒಂದೊಂದು 

ಅಕ್ಷರಗಳು,ಒಡಲೊಳಗೆ ತಿರುಚಿದಂತ ಅನುಭವಗಳು,ಮುತ್ತು ಪೋಣಿಸಿದಂತೆ 

ಸಾಲುಗಳ ಮೆರವಣಿಗೆ,ಹೊಕ್ಕಿತು ಕಣ್ಣೊಳಗೆ 

ಅಲ್ಲಿ ಹುಟ್ಟದ ಪ್ರೀತಿಯ ಅಮಲಿಗೆ ನಾ 

ಬಲಿಯಾಗಲಾರೆ ಗೆಳೆಯ 


ಅಂದ ಚೆಂದ ವಯಸ್ಸು ಗಳು ನಿಲ್ಲದ ಕುದುರೆ 

ಕ್ಷಣಿಕ ಆಕರ್ಷಣೆಗಳು, ಬದುಕಿನ ಪುಟಗಳು 

ತಿರುವಿ ಹಾಕಿದಂತೆ ಮುಂದೆ ಸಾಗಬೇಕಲ್ಲವೆ 

ನಿಂತ ನೀರು ಕೊಳೆತು ನಾರುವಂತಾಗಬಾರದು 

ಅಪವಾದಗಳ ಸುಳಿಯಲ್ಲಿ  ಅಂತರಂಗದ ಹಪ ಹಪಿಗಳಿಗೆ ನಾ ನನ್ನ ಬಲಿಕೊಡಲಾರೆ ಗೆಳೆಯ


ಕೂತು ಎಷ್ಟೋ ವಿಷಯಗಳ ಹೊಂದಾಣಿಕೆ ಯಾಗಿರಬಹುದು,ಇಷ್ಟ ಕಷ್ಟ ಗಳು ಅದಲು ಬದಲಾಗಿರಬಹುದು. ನೋಡುವ ಅರ್ಥೈಸುವ 

ಮನಸುಗಳು ಒಂದಕ್ಕೊಂದುಮಿಡಿದಿರಬಹುದು  

ಆದರೆ ಕನಸುಗಳೇ ಬೇರೆ ವಾಸ್ತವವೇ ಬೇರೆ 

ಸತ್ತು ಸತ್ತು ಮನಸಾಕ್ಷಿಗೆ ವಿರುದ್ದ ನಡೆಯಲಾರೆ ಗೆಳೆಯ 


ಮೋಸಗಾತಿಯ ಪಟ್ಟ ಕೊಡದಿರು ಎಲ್ಲರ ಮುಂದೆ,ನಾ ಮೆಚ್ಚಿದ್ದು ಹಚ್ಚಿಕೊಂಡದ್ದು ನಿನ್ನೊಳಗಿನ ಭಾವನೆಗಳನ್ನು ಮಾತ್ರ ವೇ ಗೆಳೆಯ


ಸುರಭಿ ಲತಾ 


ಗುರುವಾರ, ಜುಲೈ 15, 2021

 ಹೇ ಗಿಳಿಯೇ ಮುದ್ದು ಗಿಳಿಯೇ 

ನನ್ನವನಾರೇ,ಜೊತೆಗಾರನಾರೆ 

ಎಂದು ಬರುವನೇ ಅವನು 

ಹೇಳು ಬಾರೇ ನೀನು 


ಇರುಳಲಿ ಕನಸಾಗಿ ಬರುವನು 

ನೋಡಲು ಮರೆಯಾಗಿ ಹೋಗುವನು 

ಮೋಡಗಳ ಮರೆಯಿಂದ 

ಚೆಂದಿರನ ಮನೆಯಿಂದ 

ಎಂದು ಬರುವನೇ ಅವನು 

ಹೇಳು ಬಾರೇ ನೀನು 


ಕನಸುಗಳ ನನಸಾಗಿಸುವವನು 

ಮೈ ಮನ ಅರಳಿಸುವನು 

ಕಲ್ಪನೆಯ ರಾಜಕುಮಾರನು 

ಕಣ್ಣು ಮುಂದೆ ಎಂದು ಬರುವನು 

ಕಾತರಿಸುತಿರುವೆ ನಾನು 

ಹೇಳು ಬಾರೇ ನೀನು 


ಹಗಲಿರುಳು ಅವನದೇ ಜಪ 

ತಾಳದಾಗಿದೆ ಮಯ್ಯ ತಾಪ 

ನೊಂದಿಹೆ ಕಾಣದೆ ಅವನ ರೂಪ 

ಮರೆಯಲಿ ಮನಗೆಲ್ಲುವ ಭೂಪ 

ಯಾರೇ ಅವನು  ಮನ್ಮಥನು 

ಹೇಳು ಬಾರೇ ನೀನು

ಬುಧವಾರ, ಜುಲೈ 14, 2021

 ಮರೆತೆಯಾ ಮುರುಳಿದರನೆ ನನ್ನ 

ಎಷ್ಟೊಂದು ನಂಬಿದ್ದೆ ನಾ ನಿನ್ನ 

ಸಖಿಯರು ಸುತ್ತಲೂ ಇರುವಾಗ 

ಕೇಳಿಸದಾದೆಯ ಮೋಹನ ರಾಗ 


ಮಧುವನದಲ್ಲಿ ಮೌನದಿ ಕುಳಿತ 

ರಾಧೆಯ ನೆನಪಾಗಲಿಲ್ಲವೆ 

ಕೊಟ್ಟ ಮಾತು ಇಟ್ಟ ಭಾಷೆ 

ತರಿಸಿದೆ ಇಂದು ನಿರಾಸೆ 


ರಾಧೆ ಎನುವ ನುಡಿ ಕೇಳದೆ 

ನನ್ನ ಹೆಸರೇ ನಾ ಮರೆತೆ 

ಕಣ್ಣ ನೀರು ಜಾರುತಿರಲು 

ಬರದೆ  ಏಕೆ ಹೋದೆ 


ಕೊರಳು ಬಿಗಿಯುವ ಮುನ್ನ 

ಒಮ್ಮೆ ಅಪ್ಪಿ ಸಂತೈಸು ನನ್ನ 

ಮಿಡಿವ ಹೃದಯ ತಂಪಾಗಲಿ 

ರಾಧೆಯ ಜನ್ಮ ಸಾರ್ಥಕಗೊಳಲಿ 


ಸುರಭಿ ಲತಾ

ಭಾನುವಾರ, ಜುಲೈ 11, 2021

 #samyojane 

ಹೇಗೆ ಕಾಣಲೊ ಕೃಷ್ಣ ನಿನ್ನ ನಾನು 

 ಕರೆದರೆ ಕರೆಯ ಕೇಳಿ ಬರುವೆ ಏನು 

ಬಕುತಿಯಲಿ ಬೇಡಲು ನಿನ್ನ 

ಬವಣೆ ಗಳಲೆ ಉಳಿಸಿದೆಯೊ ನನ್ನ 


ಹತ್ತು ಮಾರು ದೂರದಲಿ ಕೋತು 

ಹತ್ತಿ ಬಾ ಎನಲು,ಬರದೆ ಹೋದೆ ಸೋತು 

ಒಡಲಿಗೆ ನೋರು ನೋವನಿಟ್ಟು 

ನಗುವೆ ಏನು ಕೈಯ್ಯ ಬಿಟ್ಟು 


ನೆನೆದೊಡನೆ ಮನದಲ್ಲಿ ನೀ ಬಂದೆ 

ಎದುರಿಗೆ ಬರದೆ ಕಾಡಿಸುವೆಯಾ ತಂದೆ 

ಸಂಬಂಧಗಳ ಸರಪಳಿಯ ಸುತ್ತಿ 

ಸಾಧಿಸಿದೆ ಏನು ಮೋಹವ ಬಿತ್ತಿ 


ಕಾಮ ಕ್ರೋಧಗಳ ಗೆಲ್ಲಲಾಗದೆ ಅಂದು 

ಸೋತು ಶರಣಾಗಿ ಬೇಡಿದೆನಯ್ಯಾ ಇಂದು 

ಬಕುತಿಯ ಅರಿತು ಶಕುತಿಯ ನೀಡದೆ 

ಮಸಣ ಸೇರಲೆ ನಿನ್ನ ಕಾಣದೆ 


ಹೇಗೆ ಕಾಣಲೊ ಕೃಷ್ಣ ನಿನ್ನ ನಾನು 

ಕರೆದರೆ ಕರೆಯ ಕೇಳಿ ಬರುವೆ ಏನು 


ಸುರಭಿ ಲತಾ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...