ಬೇಕಿಲ್ಲ ನಾ ನಿನಗೆ
ನೆಪದ ಮಾತೇಕೆ
ಕಾಯುವಿಕೆ ನನಗೇನೂ
ಹೊಸದಲ್ಲ .
ನಿನ್ನಿಂದ ನೋಯುವುದೂ
ತಪ್ಪಿಲ್ಲ
ಆದರು ಈ ಹಾಳು ಮನಸು
ಮಾತು ಹೇಳುತ್ತಿಲ್ಲ
ಸಾವಿರ ಹೂಗಳ ಮದ್ಯೆ
ಕೆಂದಾವರೆಯೇ ನನಗಿಷ್ಟ
ನೂರಾರು ಬಣ್ಣ ಗಳಿದ್ದರೂ
ಬಿಳಿಯ ಬಣ್ಣದ ಮೇಲೇ ಒಲವು
ಈ ಬಯಕೆಗಳೇ ವಿಚಿತ್ರ
ಆ ಕೃಷ್ಣ ನೆಂದ ಮೋಹಬಿಡು ..
ಕಾಮಬಿಡು ,ಆಸೆ ಬಿಡು ,
ಎಲ್ಲಾ ಬಿಡುವನೇನೋ ನಾನು
ಆದರೆ
ಹೆಬ್ಬಾವು ಬಳಸಿದಂತೆ
ಬಂದಿಸಿದೆಯಲ್ಲಾ ನೀನು , ನಿನ್ನ ನೆನಪು , ಹೇ ಹುಡುಗ ಮರೆಯಲಿ ಹೇಗೋ ನಾನು ?
ನೋವಲ್ಲೂ ಹಿತಕಾಣುವ ಚಟ
ರೂಡಿಸಿಕೊಂಡ ಈ ಮನವನ್ನು
ದಾರಿಗೆ ತರುವುದು ಹೆಗೋ ??
ಮರೆಯಲು ಯತ್ನಿಸಿದಾಗಲೆಲ್ಲಾ
ಹುಚ್ಚು ,ಹೆಚ್ಚಾಗಿ ಬಡ ಬಡಿಸಿದೆ
ನಿನ್ನ ಹೆಸರನ್ನೇ ..
ಆಗದು ಕಣೊ , ವ್ಯರ್ಥ ಪಯತ್ನ
ಪಟ್ಟು ..ಸಾವೇ ಪ್ರಿಯವಾಯಿತು
ನೀನೋ ಕಲೆಗಾರ , ಇಂಚಿಂಚೂ
ನನ್ನ ಮನ ಕದ್ದ ಚೋರ ,
ಅದೇನು ಸುಖವೋ ಕಾಣೆ
ಈ ವಿರಹದಲ್ಲಿ
ನನಗೂ ಗೊತ್ತು ಇದೇ ಭಾವ ನಿನ್ನಲ್ಲೂ ಇದೆ
ನಿನ್ನ ಅಸಹಾಯಕತೆ ಕಂಡೆ
ಮನದಲ್ಲೇ
ಬೀಸುವ ತಂಗಾಳಿಯಲ್ಲಿ ನೀ ಬಿಟ್ಟ
ನಿಟ್ಟುಸಿರೇ
ಸೋಕಿತು ನನ್ನೆದೆ ..ಆಗಲೇ ನಾ ನಿನ್ನ
ಅರಿತೆ
ಸುರಭಿ ಲತಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ