ಬದುಕಲಿ ನುಸುಳಿ ಬಂತು ಮಹಾ ಮಾರಿ
ತೂರಿ ನಿಂತಿತು ಒಡಲೊಳಗೆ ಜೀವ ಹೀರಿ ಸರಮಾಲೆ ಹೊತ್ತು ಸಾಗಿತು ಗಾಡಿ
ಬೇಡಲು ಆಗದೆ ದೇವನ, ಮುಚ್ಚಿದರು ಗುಡಿ
ಸಾಲು ಸಾಲು ಮಾರಣ ಹೋಮದ ಧೋಮ
ಅರಿಯದಾದೆ ಭಗವಂತನ ಕೋಪದ ಮರ್ಮ
ದುಡಿಯುವ ದಾರಿ ಕಾಣದೆ,ಹಸಿವಿನ ಬಾಧೆ ತಾಳದೆ,ಕಣ್ಣೀರ ಕೂಪದಲಿ,ಏನೆಂದು ಬಣ್ಣಿಸಲಿ
ಮರುಗಿತು ಹಲವು ಜೀವ,ಧಾನಿಗಳು ಅರಿತರು ನೋವ, ನಿಂತರು ದೇವರಂತೆ,ಕರುಣೆಯ ಮೂರುತಿಯಂತೆ,ಒಂದಾಗಲು ಒಗ್ಗಟ್ಟಿನಲಿ
ಕಷ್ಟ ಗಳು ಸರಿವವು ಮರೆಯಲಿ
ಹಗಲೆನ್ನದೆ,ಇರುಳೆನ್ನದೆ ನಿಂತರು ಅರಳಿ ಮರದಂತೆ,ಕಾಯ್ದರು ಒಡ ಹುಟ್ಟಿದವರಂತೆ
ಮರು ಕಳಿಸದಿರಲಿ ರೋಗ ರುಜಿನಗಳು
ಒಂದಾಗಿ ಬೆರೆತು ಕರೆವ ಒಳ್ಳೆಯ ದಿನಗಳು
ಸುರಭಿ ಲತಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ