ದಣಿದಿಲ್ಲವೇ ಯಮರಾಜ ನೀನು
ಹೊತ್ತು ಕೊಂಡು ಹೋಗುತಿಹೆ
ಅತ್ತು ಸೊರಗಿಹ ಜೀವಗಳ
ಬತ್ತಿ ಹೋಗುತಿದೆ ಕಣ್ಣೀರು
ಮೆತ್ತಗಿನ ಮನಸಿನ ಕೂಸುಗಳು
ಹತ್ತು ಜನರ ಒಲವ ಗೆದ್ದವರು
ಒಳಿತು ಮಾಡುವವರಿಗೆಂತ ನೋವು
ಹಾವಂತ ಜನರಿಗೆ ಆಯುಸ್ಸು
ಕಲಿಯುಗವು ಕರ್ಮಗಳ ಕಾಂಡವು
ಕರಗಿ ಹೋಗುತಿದೆ ಕರುಣೆಯು
ಎತ್ತ ಸಾಗುತಿದೆ ಪಯಣವು
ಬದುಕೊಂದು ವಿಚಿತ್ರದ ತಾಣವು
ಇನ್ನೆಷ್ಟು ಹೊರಬೇಕಿದೆ ಭಾರವು
ರಜೆ ಬೇಡವೆ ಸಾವಿನ ಮೆರವಣಿಗೆಗೆ
ಕರಗಲಿಲ್ಲವೇ ಶಾಹಿ ಬ್ರಹ್ಮ ದೇವ
ದಣಿಯಲಿಲ್ಲವೇ ಹೊತ್ತು ಯಮ ದೇವ
ಬರಿದಾಗಿ ಹೋಗುತಿದೆ ಭೂ ಲೋಕ
ಒಳಿತೆಂಬುದೆ ಕರಗಿ ಹೋಗುವ ಭಯವು
ಉಳಿದವರು ಸ್ವಾರ್ಥಕೆ ಬಲಿಯಾದವರು
ಬದುಕುವುದೆಂತು ಮುಂದೆ ದಾರಿ ಕಾಣೆವು
ಸುರಭಿ ಲತಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ