ಒಂದಷ್ಟು ನೋವಿನ ಸಂಗತಿ
ಓಡಿ ಬಂದೆವು ಶಿವ ನೀನೆ ಗತಿ
ಕಾಲ ಕೋಟ ವಿಷವ ಕುಡಿದವ
ಕೋಪದಿ ತ್ರಿನೇತ್ರವ ತೆರೆದವ
ಬಾರೊ ಹರನೆ ನೀಗಿಸು ಬೇಗೆಯ
ಹಿಂಡುವ ಜೀವವ ಕಾಪಾಡೆಯ
ದಗ ದಗಿಸುತಿದೆ ಕಣ್ಣೀರಲಿ ಜಗವು
ಕಾಡುತಿದೆ ದೇವ ರೋಗವು
ನಿಲ್ಲಿಸು ಸಾವಿನ ನರ್ತನವು
ಸುಡುತಲಿದೆ ದುಃಖದಿ ಎದೆಯು
ತಂಪಾಗಿಸಿ ಗಂಗೆಯ ಹರಿಸು
ತೊಡೆದು ಹೋಗಲಿ ಸಕಲ ಪಾಪವು
ಬೇಡಿದೆ ಮಹಾದೇವ ಬೀರು ಕೃಪಾದುಷ್ಟಿ
ಆಗಲಿ ಶಾಂತಿ ತುಂಬಿದ ಲೋಕ ಮರುಸೃಷ್ಟಿ
ಮಕ್ಕಳಲ್ಲವೇ ನಾವು ಮುನಿಸೇಕೆ ನಮ್ಮಲಿ
ತಂದೆ ತಾಯಿ ನೀನು, ಕರುಣೆ ಇಲ್ಲವೆ ನಿನ್ನಲಿ
ವರುಷ ಕಳೆಯಿತು ಹರುಷವು ಮರೆಯಾಯಿತು
ಇನ್ನೆಷ್ಟು ಕಾಲವಯ್ಯ ಈ ಗೋಳು
ಕರೆದಿದೆ ಆರ್ತನಾದದಲಿ ಭೂ ಲೋಕ
ನರಕವಾಗಿಸದಿರಿನ್ನು ಸೋಲುವ ಪಾದವ
ಕರೆದು ಬಿಡು ಕಣ್ಣು ತೆರೆದು ಒಮ್ಮೆ
ಮುಗುಳು ನಗೆಯ ಸೂಸಿಬಿಡು ಮತ್ತೊಮ್ಮೆ
ಹರ ಹರ ವೆನ್ನುತಲಿ ಹಾಲಹಲವು ಕರಗಲಿ
ನಿನ್ನ ಬಕುತಿಯಲಿ ನೆಮ್ಮದಿಯ ದೀಪ ಬೆಳಗಲಿ
ಓಂ ನಮೊ ಮಹದೀಶ ಓಂ ನಮೊ ಜಗದೀಶ
ಸುರಭಿ ಲತಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ